ಮಳೆ ದೂರವಾಗುವ ಲಕ್ಷಣಗಳು ಗೋಚರಿಸಿದೆ. ಮುಂಗಾರು ಹಿಂದೆ ಸರಿಯುತ್ತಿದೆ.
ನಿನ್ನೆ ದಿನ ಮಧ್ಯಾಹ್ನ ಕೆಲವು ಕಡೆ ಅಲ್ಪ ಸ್ವಲ್ಪ ಮಳೆಯಾಗಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮೋಡ ಕವಿದ ವಾತಾವರಣವಿದ್ದಾಗಿಯೂ ಎಲ್ಲಿ ಕೂಡಾ ವಿಶೇಷವಾಗಿ ಮಳೆ ಬಂದ ಬಗ್ಗೆ ವರದಿಯಿಲ್ಲ.
ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ 14, ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು ಹಾಗೂ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ತಲಾ 10 ಮಿ.ಮೀ.ನಷ್ಟು ಮಳೆ ಬಂದಿದೆ. ಕಾಸರಗೋಡಿನ ಕಲ್ಲಕಟ್ಟ 07, ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ, ಸುಳ್ಯ ತಾಲೂಕಿನ ಅಯ್ಯನಕಟ್ಟೆ ತಲಾ 06, ಬಂಟ್ವಾಳ ತಾಲೂಕಿನ ಕೆಲಿಂಜ, ಕಡಬ ತಾಲೂಕಿನ ಸುಬ್ರಹ್ಮಣ್ಯ ತಲಾ 05 ಮಿ.ಮೀ.ನಷ್ಟು ಮಳೆಯಾಗಿದ್ದು, ಉಳಿದ ಕಡೆ ಮಳೆಯ ಪ್ರಮಾಣ ಇನ್ನೂ ಕಡಿಮೆ ಇತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel