26.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯ ಚಂಡಮಾರುತವು ಶಿಥಿಲಗೊಳ್ಳುತ್ತಿದ್ದು, ಇನ್ನೊಂದು ದಿನದಲ್ಲಿ ತನ್ನ ಪ್ರಭಾವವನ್ನು ಸಂಪೂರ್ಣ ಕಳೆದುಕೊಳ್ಳಲಿದೆ. ಈಗಿನ ಪರಿಸ್ಥಿತಿಯಂತೆ ಗುಜರಾತ್ ಹಾಗೂ ಓಮನ್ ಮಧ್ಯೆ ಬಹಿರ್ಮುಖಿ ತಿರುಗುವಿಕೆ ಕಾರಣದಿಂದ (anti cyclone) ಗುಜರಾತ್, ರಾಜಸ್ಥಾನ ಕಡೆಯಿಂದ ಶುಷ್ಕ ಗಾಳಿ ದಕ್ಷಿಣ ಕಡೆಗೆ ಬೀಸುತ್ತಿದೆ.
ಈಗಿನ ಪ್ರಕಾರ 27 ರಿಂದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ದಕ್ಷಿಣದ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಿನ ಕಳೆದಂತೆ ಹಿಂಗಾರು ಚುರುಕಾಗುವ ಲಕ್ಷಣಗಳಿವೆ. ಆದರೆ ಈಗಿನ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪ್ರಭಾವ ಹೀಗೆ ಇದ್ದರೆ ಹಿಂಗಾರು ಮಳೆ ಮುಂದಕ್ಕೆ ಹೋಗಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel