25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ನ.26ರಂದು ಉತ್ತರ ಶ್ರೀಲಂಕಾ ಕರಾವಳಿಯ ಮೂಲಕ ಸಾಗಿ ಬರಲಿದ್ದು, ಮುಂದೆ ತಮಿಳುನಾಡು, ಆಂಧ್ರಾ, ಒಡಿಶಾ ಕರಾವಳಿಯ ಬಳಿ ಸಾಗಿ ಉತ್ತರಕ್ಕೆ ಚಲಿಸುವ ಲಕ್ಷಣಗಳಿವೆ.
ಉತ್ತರ ಭಾರತ ಕಡೆಯಿಂದ ಶೀತ ಹಾಗೂ ಒಣ ಹವೆ ದಕ್ಷಿಣ ಭಾರತದ ಕಡೆ ಬೀಸಲು ಆರಂಭವಾಗಿದ್ದರಿಂದ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಅಷ್ಟೇನು ಗೋಚರಿಸುತ್ತಿಲ್ಲ.Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel