ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆ ಮಾಹಿತಿ ಹೀಗಿದೆ. ಶನಿವಾರ ಮಧ್ಯಾಹ್ನ ನಂತರ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಈ ದಿನ ಬೆಳಗ್ಗೆ ದಾಖಲಾದ ಕಳೆದ 24 ಗಂಟೆಗಳ ಮಳೆ
ಮಳೆ ಮಾಹಿತಿ
ಸುಳ್ಯ ತಾಲೂಕಿನ ಅಯ್ಯನಕಟ್ಟೆ 24, ಸುಳ್ಯ ನಗರ ಹಾಗೂ ಕಲ್ಲಾಜೆಯಲ್ಲಿ ತಲಾ 23, ಬಾಳಿಲ 21, ಕಮಿಲ ಹಾಗೂ ಮುಳ್ಯ-ಅಜ್ಜಾವರದಲ್ಲಿ ತಲಾ 18, ಕಲ್ಮಡ್ಕ 14, ಚೊಕ್ಕಾಡಿ 11, ಮೆಟ್ಟಿನಡ್ಕ 10, ದೊಡ್ಡತೋಟ, ಕೊಲ್ಲಮೊಗ್ರ ತಲಾ 08, ಮಡಪ್ಪಾಡಿ 04, ತೊಡಿಕಾನ 03 ಕಡಬತಾಲೂಕಿನ ಎಣ್ಮೂರು 19, ಬಳ್ಪ 17, ಕಡಬ 16, ಸುಬ್ರಹ್ಮಣ್ಯ 09, ಕೋಡಿಂಬಳ-ತೆಕ್ಕಡ್ಕ 05 ಪುತ್ತೂರು ತಾಲೂಕಿನ ಬಲ್ನಾಡು 24, ಆರ್ಯಾಪು-ಬಂಗಾರಡ್ಕ 18, ಕೊಳ್ತಿಗೆ-ಎಕ್ಕಡ್ಕ 16, ಮುಂಡೂರು 10, ಕೆದಿಲ 04 ಮಡಿಕೇರಿಯ ಎಂ ಚೆಂಬು 13 ಮಿ.ಮೀ.ಮಳೆ ದಾಖಲಾಗಿದೆ.
ನಮ್ಮ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತವಾಗಿದೆ. ಇಡೀ ದೇಶದಿಂದ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಮುಂಗಾರು ಮಾರುತ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ನಾಂದಿಯಾಗುವುದು ವಾಡಿಕೆ. ಆದರೆ ಈ ಬಾರಿ ನಾಳೆ ಯಿಂದ ಅಂದರೆ ಸುಮಾರು 15 ದಿನ ತಡವಾಗಿ ಹಿಂದೆ ಸರಿಯುವಿಕೆ ಆರಂಭವಾಗಲಿದೆ ಎನ್ನುತ್ತಿವೆ ಹವಾಮಾನ ಇಲಾಖೆಯ ಮೂಲಗಳು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel