ಸೆ.28 ರಂದು ದೇಶದ ವಾಯುವ್ಯ ಭಾಗದಿಂದ ಹಿಂದೆ ಸರಿಯಲು ಆರಂಭಿಸಿದ್ದ ನೈರುತ್ಯ ಮುಂಗಾರು ಮಾರುತ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿನ ವಾಯುಭಾರ ನಿಮ್ನತೆಯ ಪರಿಣಾಮದಿಂದಾಗಿ ಪೂರ್ತಿ ದೇಶದಿಂದ ಹಿಂದೆ ಸರಿಯುವುದು ವಿಳಂಬವಾಗಿತ್ತು.
ಮುಂದಿನ ಮೂರು – ನಾಲ್ಕು ದಿನಗಳಲ್ಲಿ ಪೂರ್ತಿ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎನ್ನುತ್ತದೆ ಹವಾಮಾನ ಇಲಾಖೆ. ಸಾಮಾನ್ಯವಾಗಿ ಸೆ.ಮೂರನೆ ವಾರದಲ್ಲಿ ಹಿಂದೆ ಸರಿಯಲು ಆರಂಭವಾಗಿ ಅಕ್ಟೋಬರ್ ಪ್ರಥಮ ವಾರದ ಮೊದಲು ಪೂರ್ತಿ ದೇಶದಿಂದ ಹಿಂದೆ ಸರಿಯುವುದು ವಾಡಿಕೆ.
ಕಳೆದ ವರ್ಷ 1961 ರ ಬಳಿಕ ಅತ್ಯಂತ ತಡವಾಗಿ ಅಕ್ಟೋಬರ್ 9 ರಂದು ಹಿಂದೆ ಸರಿಯಲು ಆರಂಭವಾಗಿ ಕೇವಲ ಒಂದು ವಾರದಲ್ಲೇ ಪೂರ್ತಿ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು.
ನಿನ್ನೆ ದಿನ ಬಿಸಿಲು ಮೋಡದ ವಾತಾವರಣ. ಸುಳ್ಯ, ಕಡಬ,ಪುತ್ತೂರು,ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಡಿಕೇರಿ ಪ್ರದೇಶಗಳಲ್ಲಿ ಮಳೆ ದಾಖಲಾಗಿಲ್ಲ.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…