Weather Report | ಚಿತ್ರಾ ನಕ್ಷತ್ರದ ಮೊದಲ ದಿನವೇ ಚಿತ್ರ-ವಿಚಿತ್ರ ಮಳೆ | ಬೆಳ್ತಂಗಡಿ ನಗರದಲ್ಲಿ ಭೀಕರ ಮಳೆ 

October 11, 2020
12:04 PM

ಮಳೆಯಾರ್ಭಟ ಹೆಚ್ಚಾಗಿದೆ. ಶನಿವಾರ ಮಧ್ಯಾಹ್ನದ ನಂತರ ತಡ ರಾತ್ರಿಯ ತನಕವೂ ವರುಣನ ಭರ್ಜರಿ ಆಟ. ವ್ಯಾಪಕವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ನಿನ್ನೆ ಮುಸ್ಸಂಜೆಯ ಭಾರೀ ಮಳೆಗೆ ಬೆಳ್ಳಾರೆ ಸಮೀಪದ ಪೆರುವಾಜೆಯ ಶ್ರೀ ಜಲದುರ್ಗಾ ದೇವೀ ದೇವಸ್ಥಾನದ ಒಳಾಂಗಣಕ್ಕೆ ಗೌರೀ ಹೊಳೆಯ ಪ್ರವಾಹದ ನೀರು ನುಗ್ಗಿತ್ತು.

ಉಳಿದಂತೆ ಬೆಳ್ತಂಗಡಿ ನಗರದಲ್ಲಿ ಗರಿಷ್ಟ ಮಳೆ 175 ಮಿ ಮೀ.  ಬಳ್ಪ 162, ಕಲ್ಮಡ್ಕ 134, ಎಣ್ಮೂರು 115,  ಕಲ್ಲಾಜೆ 111, ಕಮಿಲ 110, ಹಾಲೆಮಜಲು 101, ಮೆಟ್ಟಿನಡ್ಕ 97, ಅಯ್ಯನಕಟ್ಟೆ 94, ಬಾಳಿಲ, ಕೋಡಿಂಬಳ-ತೆಕ್ಕಡ್ಕ ತಲಾ 89,

ಹರಿಹರ-ಮಲ್ಲಾರ, ಸುಳ್ಯ ನಗರ, ಎಂ ಚೆಂಬು ತಲಾ 84, ಮುಳ್ಯ-ಅಜ್ಜಾವರ 78, ಮಡಪ್ಪಾಡಿ 74, ಕೊಳ್ತಿಗೆ-ಎಕ್ಕಡ್ಕ 73,

ದೊಡ್ಡತೋಟ 72, ವಾಲ್ತಾಜೆ-ಕಂದ್ರಪ್ಪಾಡಿ 71, ಅಡೆಂಜ-ಉರುವಾಲು 68, ತೊಡಿಕಾನ 66, ಸುಬ್ರಹ್ಮಣ್ಯ 65, ಕೊಲ್ಲಮೊಗ್ರ 60,

ಉಳಿದಂತೆ ಕೆದಿಲ, ಮುಂಡೂರು ತಲಾ 35, ಆರ್ಯಾಪು-ಬಂಗಾರಡ್ಕ 25, ಕೆಲಿಂಜ 23 ಬಲ್ನಾಡು, ಕಡಬ ತಲಾ 15, ಮಂಚಿ 14 ಹಾಗೂ ಕಾಸರಗೋಡಿನ ಕಲ್ಲಕಟ್ಟದಲ್ಲಿ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..

ಇತರೆಡೆಗೆ ಹೋಲಿಸಿದರೆ ನಿನ್ನೆಯೂ ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳಲ್ಲಿ ಮಳೆ ಕಡಿಮೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕಡಬದಲ್ಲಿ ತುಂಬಾ ಕಡಿಮೆ ಮಳೆ 5 ಮಿ.ಮೀ. ಅಷ್ಟೇ ದಾಖಲಾಗಿದೆ.!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?
September 7, 2026
1:29 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ
September 6, 2026
2:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?
September 5, 2026
1:37 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!
September 4, 2026
3:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror