ಕಳೆ ಗಿಡಗಳು ಅಂದರೆ ಬರಿಯ ಕಳೆ ಗಿಡಗಳಲ್ಲ| ಕಳೆಯ ಉಪಯೋಗದ ಬಗ್ಗೆ ತಿಳಿಸುವ ಕಾರ್ಯಗಾರ |

August 25, 2023
12:00 PM
ಕೃಷಿಯಲ್ಲಿ ಅನೇಕ ಕಳೆ ಗಿಡಗಳು ಎಂದು ನಾಶ ಮಾಡುವವರು ಹೆಚ್ಚು.ಆದರೆ ಅವುಗಳಲ್ಲಿ ಅನೇಕ ಚೈತನ್ಯ ಗಿಡಗಳಾಗಿವೆ. ಈ ಬಗ್ಗೆ ಪರಿಚಯಿಸುವ ಕಾರ್ಯಾಗಾರವೊಂದು ಮೈಸೂರಿನಲ್ಲಿ ನಡೆಯಲಿದೆ.

ಈ ಭೂಮಿ ಮೇಲೆ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪ್ರಭೇದದ ಮರಗಿಡಗಳು ಬೆಳೆಗಳು ಬೆಳೆದಿವೆ. ಇದರಲ್ಲಿ ಶೇಕಡ ಒಂದಕ್ಕಿಂತ ಕಡಿಮೆ ಪ್ರತಿಶತದ ಬೆಳೆಗಳನ್ನು ಉಪಯುಕ್ತ ಅಂತ ಅನ್ಕೊಂಡಿದ್ದೀವಿ. ಇನ್ನುಳಿದವನ್ನು ಕಳೆ ಗಿಡ ಅಂತ ನಿರ್ಲಕ್ಷಣೆ ಮಾಡಿದ್ದೀವಿ. ಅವುಗಳ ವಿರುದ್ಧ ಸಮರ ಸಾರಿದ್ದೇವೆ ಕೂಡಾ. ಕಳೆನಾಶಗಳನ್ನು ಹಾಕಿ ಸಾಯಿ ಸಾಯಿಸುತ್ತಿದ್ದೇವೆ ಕೂಡಾ. 

ವಾಸ್ತವದಲ್ಲಿ ಈ 99% ಗಿಡಗಳು ಪ್ರಕೃತಿಯನ್ನ ಸಮತೋಲನದಲ್ಲಿ ಇಡಲಿಕ್ಕೆ ಬಹಳ ಮುಖ್ಯ. ಯಾಕೆಂದರೆ ಇದೆ ಗಿಡಗಳು ಪ್ರಾಣಿ ಪಕ್ಷಿಗಳಿಗೆ, ಜೀವಾಣುಗಳಿಗೆ, ಸೂಕ್ಷ್ಮ ಜೀವಾಣುಗಳಿಗೆ ಅನ್ನ, ನೀರು, ಗಾಳಿಯನ್ನು ಒದಗಿಸುತ್ತಾ, ಪರಾಗಸ್ಪರ್ಶಕ್ರಿಯೆಗೆ ಸಹಕರಿಸುತ್ತಾ, ಭೂಮಿಯ ಫಲವತ್ತತೆಯನ್ನ ಕಾಪಾಡುತ್ತಾ, ಔಷಧೀಯ ಸತ್ವವನ್ನ ನಮಗೆಲ್ಲರಿಗೂ ಒದಗಿಸುತ್ತಿರುವ ಸಂಜೀವಿನಿಯಿಂದ ಕುಡಿದ ಚೈತನ್ಯ ಬೆಳೆಗಳಾಗಿವೆ. ಇಂತಹ ಹಲವಾರು ಚೈತನ್ಯ ಬೆಳೆಗಳನ್ನಆಗಸ್ಟ್ 27 ನೇ ರಂದು, ಮೈಸೂರಿನ ಧ್ವನ್ಯಾಲೋಕದಲ್ಲಿ ಪ್ರದರ್ಶನಕ್ಕಿಟ್ಟು ಅವುಗಳಲ್ಲಿರುವ ಮಹತ್ವವನ್ನು ತಿಳಿಸುವ ಒಂದು ಪ್ರಯತ್ನಗಳು ನಡೆಯುತ್ತಿದೆ. ಯಾವುದೇ ಶುಲ್ಕ ಇಲ್ಲದೆಯೇ ನಡೆಯುವ ಈ ಕಾರ್ಯಕ್ರಮಕ್ಕೆ ಮುಕ್ತ ಅವಕಾಶ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror