ವೀಕೆಂಡ್‌ ಚಾರಣ…! | ಒಮ್ಮೆಲೇ ಏಕೆ ಕುಮಾರ ಪರ್ವತ ಚಾರಣಕ್ಕೆ ಬರುತ್ತಿದ್ದಾರೆ…? | ಕಾಡು ಉಳಿಯಲಿ, ಕುಮಾರಪರ್ವತದ ರಕ್ಷಣೆಯ ಅಗತ್ಯವೂ ಇದೆ |

January 28, 2024
9:43 PM
ಕುಮಾರಪರ್ವತ ಚಾರಣಿಗರ ಸಂಖ್ಯೆ ಹೆಚ್ಚಾಗಿದೆ. ಒಮ್ಮೆಲೇ ಸಾವಿರಾರು ಮಂದಿ ತೆರಳುವುದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಪರಿಸರ ಕಾಳಜಿಯೂ ಬಹುಮುಖ್ಯವಾದ ವಿಷಯವಾಗಿದೆ.

ಕಳೆದ ಎರಡು ವಾರಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ವಿಪರೀತ ಮಂದಿ ಆಗಮಿಸುತ್ತಿದ್ದಾರೆ. ಅಷ್ಟೂ ಜನರೂ ಪರಿಸರ ಪ್ರೇಮಿಗಳೇ…!?. ಟ್ರೆಕಿಂಗ್‌ ಹೆಸರಲ್ಲಿ ಮಜಾ ಮಾಡಲು ಬರುತ್ತಿದ್ದಾರೆಯೇ..? ಇದೆರಡೂ ಪ್ರಶ್ನೆಗಳ ನಡುವೆ ಈಗ ಯಾಕಿಷ್ಟು ಮಂದಿ ಕುಮಾರಪರ್ವತ ಚಾರಣಕ್ಕೆ ಬರುತ್ತಿದ್ದಾರೆ…?ಮುಂದೆ ಓದಿ

Advertisement
Advertisement

ರಾಜ್ಯದ ಬೇರೆ ಬೇರೆ ಕಡೆಯಿಂದ  ಕುಮಾರಪರ್ವತ ಚಾರಣಕ್ಕೆ ಒಮ್ಮೆಲೇ ಹೆಚ್ಚಾಗಿ ಜನರು ಆಗಮಿಸುತ್ತಿದ್ದಾರೆ. ರಜಾ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಕಾಣಸಿಗುತ್ತಾರೆ. ಕಳೆದ ಎರಡು-ಮೂರು ವಾರಗಳಿಂದ ವಿಪರೀತ ಜನಸಂದಣಿಯಲ್ಲಿ ಚಾರಣಿಗರು ಕಾಣುತ್ತಿದ್ದಾರೆ. ಈಗಾಗಲೇ ಅಂತರ್ಜಾಲದ ಮೂಲಕ ಕುಮಾರಪರ್ವತದ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿದೆ. ಹೀಗಾಗಿ ಬಹಳ ಆಸಕ್ತಿಯಿಂದ ಚಾರಣಿಗರು ಬರುತ್ತಿದ್ದಾರೆ.ಮುಂದೆ ಓದಿ

ಕುಮಾರಪರ್ವತ ಚಾರಣ ಮುಂಜಾನೆ

ಈಚೆಗೆ ಗಿರಿಗದ್ದೆಯ ಭಟ್ಟರು ನಿಧನವಾದ ಸಂದರ್ಭ ಕುಮಾರಪರ್ವತ ಹಾಗೂ ಗಿರಿಗದ್ದೆಯ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿತ್ತು. ಅದರ ಜೊತೆಗೇ ಕುಮಾರಪರ್ವತ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಹಿನ್ನೆಲೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸಹಜವಾಗಿಯೇ ಕುಮಾರಪರ್ವತದ ಬಗ್ಗೆ ಕುತೂಹಲ ಹೆಚ್ಚಾಯಿತು. ಕುಮಾರ ಪರ್ವತದಲ್ಲಿ ಪೂಜೆ ನಡೆಯುತ್ತದೆ ಎನ್ನುವುದು  ಸಾಕಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕಳೆದ  ಎರಡು ವರ್ಷಗಳಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ವೈರಲ್‌ ಆಗಿದೆ. ಇದೆಲ್ಲವೂ ಕುಮಾರಪರ್ವತ ಚಾರಣಿಗರ ಸಂಖ್ಯೆ ಏರಿಕೆಗೆ ಕಾರಣವಾಗಿದೆ.ಮುಂದೆ ಓದಿ

ಕಾಡು ದಾರಿಯ ನಡುವಿನ ಪಯಣ ಹಾಗೂ ಸುಂದರ ಪರಿಸರದ ನಡುವಿನ ಪಯಣ ಈ ಚಾರಣ. ಪರ್ವತ ಏರುವ ಮೊದಲೇ ಅರಣ್ಯ ಇಲಾಖೆ ಸಾಕಷ್ಟು ತಪಾಸಣೆ ಮಾಡುತ್ತಿದ್ದರೂ, ಕಾಡು ಹಾದಿಯ ನಡುವೆ ಪ್ಲಾಸ್ಟಿಕ್‌ ಹಾಗೂ ಪರಿಸರ ಕೆಡಿಸುವ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆಲೇ ವಿಪರೀತ ಚಾರಣಿಗರು ತೆರಳಿದರೆ, ಕಾಡಿನ ಒಳಗಿನ ಗಲಾಟೆ, ಬೊಬ್ಬೆಗಳಿಂದ ಕಾಡು ಪ್ರಾಣಿಗಳೂ ಭಯಗೊಂಡು ತೊಂದರೆ ನೀಡುವ ಸಂಭವವೂ ಇದೆ. ಪರಿಸರವೂ ಬೇಗನೆ ಕಲುಷಿತವಾಗುವುದು ಸಾಧ್ಯತೆ ಇದೆ. ಹೀಗಾಗಿ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಾದ್ದು ಅಗತ್ಯ ಇದೆ.

Kumara Parvatha

Advertisement

ಕುಮಾರಪರ್ವತ

More and more people are coming from different parts of the state for the Kumara Parvata trek. A large number of trekkers come even on holidays. For the last two-three weeks, there has been a huge numbers of trekkers. Now environmental protection is a big challenge.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ-ಡಾ.ಅರುಣ್
May 31, 2025
12:05 AM
by: The Rural Mirror ಸುದ್ದಿಜಾಲ
ಜೂನ್ 2ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
May 30, 2025
11:52 PM
by: The Rural Mirror ಸುದ್ದಿಜಾಲ
ವಿಕಸಿತ ಕೃಷಿ ಸಂಕಲ್ಪ ಅಭಿಯಾನ |  ರೈತರ ಆದಾಯ ದ್ವಿಗುಣ ಉದ್ದೇಶದಿಂದ ಯೋಜನೆ
May 30, 2025
11:14 PM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
May 30, 2025
8:31 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group