Advertisement
Opinion

ಖನಿಜಗಳ ಆಗರ ಅಡಿಗೆ ಮನೆಯ ಜೀರಿಗೆ | ಜೀರಿಗೆ ತಿನ್ನುವುದರಿಂದ ಆಯುರ್ವೇದದ ಪ್ರಕಾರ ಪ್ರಯೋಜನಗಳೇನು..?

Share

ಜೀರಿಗೆಯಲ್ಲಿ ಅಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿದೆ. ಇದು ಫೈಬರ್, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಸತು ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳನ್ನು ಸಹ ಒಳಗೊಂಡಿದೆ. ಇದು ದೇಹದ ವಿವಿಧ ಭಾಗಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೇ ಜೀರಿಗೆಯಲ್ಲಿ ಹಲವು ಜೀವಸತ್ವಗಳಿವೆ. ಜೀರಿಗೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

ಚರ್ಮ ಕಾಂತಿ: ಜೀರಿಗೆಯನ್ನು ಸೌಂದರ್ಯವರ್ಧಕ ಎಂದು ಕರೆಯಲಾಗುತ್ತದೆ. ಜೀರಿಗೆಯಲ್ಲಿ ಹಲವು ಬಗೆಯ ಖನಿಜಗಳು ಮತ್ತು ವಿಟಮಿನ್ ಗಳಿವೆ. ಇದು ಚರ್ಮದ ವಿಟಮಿನ್ ಇ ಅಗತ್ಯವನ್ನು ಪೂರೈಸುತ್ತದೆ. ಜೀರಿಗೆಯಲ್ಲಿ ವಿಟಮಿನ್ ಇ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೀರಿಗೆ ನೀರನ್ನು ಪ್ರತಿನಿತ್ಯ ಸೇವಿಸಿದರೆ ಮುಖ ಕಾಂತಿಯುತವಾಗಿ ಮುಖದ ಮೇಲಿನ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. ಜೀರಿಗೆಯು ಶಿಲೀಂದ್ರ ರೋಧಕ(ಆಂಟಿ ಫಂಗಲ್) ಗುಣಲಕ್ಷಣಗಳನ್ನು ಹೊಂದಿದೆ, ಅದು ಚರ್ಮವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸುತ್ತದೆ. ಇದಲ್ಲದೆ, ಜೀರಿಗೆಯನ್ನು ಸೋರಿಯಾಸಿಸ್ ಮತ್ತು ಎಸ್ಜಿಮಾವನ್ನು ಗುಣಪಡಿಸಲು ಬಳಸಲಾಗುತ್ತದೆ. ಬೇಕಿದ್ದರೆ ಜೀರಿಗೆ ಪುಡಿಯನ್ನು ಕೂಡ ಮುಖ ಲೇಪನದಲ್ಲಿ ಬಳಸಬಹುದು.

ಕೂದಲಿಗೆ : ಚರ್ಮದ ಆರೋಗ್ಯ ಹಾಗೂ ಸೌಂದರ್ಯಕ್ಕಾಗಿ ಜೀರಿಗೆ ಬೀಜಗಳ ಪ್ರಯೋಜನಗಳು ಕೂದಲಿಗೂ ಅನ್ವಯಿಸುತ್ತವೆ. ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಕಪ್ಪು ಜೀರಿಗೆ ಲಭ್ಯವಿದೆ. ಈ ಜೀರಿಗೆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಪ್ರತಿದಿನ ಕಪ್ಪು ಜೀರಿಗೆಯನ್ನು ಸೇವಿಸುವುದರಿಂದ ಕೂದಲು ದಟ್ಟವಾಗಿ, ಕಪ್ಪಾಗಿ ಮತ್ತು ಗಟ್ಟಿಯಾಗುತ್ತದೆ. ಇದಲ್ಲದೆ, ಕಪ್ಪು ಜೀರಿಗೆ ಬೀಜಗಳು ತಲೆ ಹೊಟ್ಟು ಸಮಸ್ಯೆ ಇರುವವರಿಗೆ ಸಹ ಪ್ರಯೋಜನಕಾರಿ. ತಲೆಹೊಟ್ಟು ಹೋಗಲಾಡಿಸಲು ಜೀರಿಗೆಯನ್ನು ಎಣ್ಣೆಯೊಂದಿಗೆ ಬಿಸಿ ಮಾಡಿ. ಈ ಬೆಚ್ಚಗಿನ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. ಈ ಎಣ್ಣೆಯನ್ನು 2 ರಿಂದ 3 ಬಾರಿ ಹಚ್ಚಿದರೆ ತಲೆಹೊಟ್ಟು ದೂರವಾಗುತ್ತದೆ.

ಜ್ವರ – ಜ್ವರದಿಂದಾಗಿ ಮೈಕೈ ನೋವು ಇರುವಾಗ ದುರ್ಬಲತೆಯ ಅನುಭವ ಸಹ ಆಗುತ್ತದೆ. ಹಾಗಿದ್ದಲ್ಲಿ ಜೀರಿಗೆ ಬೆಲ್ಲವನ್ನು ಬೆರೆಸಿ ಮಾತ್ರೆ ಮಾಡಿ ಎರಡು ಮೂರು ಬಾರಿಯಾದರೂ ತಿನ್ನಬೇಕು. ಜ್ವರ ಕಡಿಮೆಯಾಗುತ್ತದೆ. ನಿಮಗೆ ಜ್ವರ ಬಂದಾಗ ಜೀರಿಗೆ ನೀರನ್ನು ಸಹ ತೆಗೆದುಕೊಳ್ಳಬಹುದು. ಜೀರಿಗೆ ತಂಪಾಗಿಸುವ ಪರಿಣಾಮವು ದೇಹದಲ್ಲಿನ ಶಾಖವನ್ನು ತಕ್ಷಣವೇ ಕಡಿಮೆ ಮಾಡುತ್ತದೆ ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ.

ಶೀತ – ಶೀತ ದಿನಗಳಲ್ಲಿ ಮೂಗಿನ ಕಟ್ಟುವ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವರಿಗೆ ದೀರ್ಘಕಾಲದವರೆಗೆ ಈ ಸಮಸ್ಯೆ ಇರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಜೀರಿಗೆಯನ್ನು ಬಳಸಲು ಮರೆಯದಿರಿ. ಜೀರಿಗೆಯನ್ನು ಚೆನ್ನಾಗಿ ಹುರಿದು ಅದರಿಂದ  ಬಟ್ಟೆಯಲ್ಲಿ ಕಟ್ಟು ತಯಾರಿಸಿ.  ನಂತರ ಆಗಾಗ ಅದರ ವಾಸನೆ ತೆಗೆದುಕೊಳ್ಳಬೇಕು.  ಹೀಗೆ ಮಾಡುವುದರಿಂದ ಸೀನುವುದು ನಿಲ್ಲುತ್ತದೆ. ಅಲ್ಲದೆ ಜೀರಿಗೆ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಒಂದು ಲೋಟ ಮಜ್ಜಿಗೆಯಲ್ಲಿ ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ನೀವು ಬೇಗನೇ ಚೇತರಿಸಿಕೊಳ್ಳುತ್ತೀರಿ.

ಹೊಟ್ಟೆ ನೋವು – ಹೊಟ್ಟೆ ನೋವು ಯಾವುದೇ ಸಮಯದಲ್ಲಿ ಸಂಭವಿಸಬಹುದು. ನಿಮಗೆ ಅಸಹನೀಯ ಹೊಟ್ಟೆ ನೋವು ಇದ್ದಾಗ, ಈ ಮನೆಮದ್ದನ್ನು ಖಂಡಿತವಾಗಿ ಪ್ರಯತ್ನಿಸಿ. ಹೊಟ್ಟೆ ನೋವು ಉಂಟಾದಾಗ ಸಮಪ್ರಮಾಣದ ಜೀರಿಗೆ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪಮಟ್ಟಿಗೆ ತಿನ್ನಿರಿ. ಜೀರಿಗೆಯನ್ನು ಕಚ್ಚಿದ ನಂತರ ಅದರಿಂದ ಹೊರಬರುವ ರಸವು ತಕ್ಷಣವೇ ಪ್ರಯೋಜನಕಾರಿಯಾಗಿದೆ.

ಕೀಲು ನೋವು – ಮೆಂತ್ಯ, ಓಮಿನ ಕಾಳು ಮತ್ತು ಸೋಂಪು ಬೀಜಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪ್ರತಿದಿನ ಒಂದು ಚಮಚ ತಿನ್ನುವುದರಿಂದ ಮಧುಮೇಹ, ಕೀಲು ನೋವು ಮತ್ತು ಹೊಟ್ಟೆಯ ಅಸ್ವಸ್ಥತೆಗಳು ಬರುವುದಿಲ್ಲ. ಇದು ಗ್ಯಾಸ್ ಸಮಸ್ಯೆಗೂ ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ – ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ, ಇಂಥವರು ಆಹಾರ ಹಾಗೂ ಪಾನೀಯಗಳ ಮೇಲೆ ನಿರ್ಬಂಧಗಳನ್ನು ಹೊಂದಿರುತ್ತಾರೆ.  ಜೀರಿಗೆ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

Source : WhatsApp Group

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

20 hours ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

1 day ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

1 day ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

2 days ago