MIRROR FOCUS

Arecanut | ಅಡಿಕೆಗೆ ಪರ್ಯಾಯ ಬೆಳೆ ಯಾವುದು…? | ಗಿಡಗಳಿಗೆ ಬೇಕಾದ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಬೆಳೆಗೆ ಪರ್ಯಾಯ ಎಂದರೆ ಎಲ್ಲರೂ ಸೂಚಿಸುವ ಬೆಳೆಗಳೆಂದರೆ ಕಾಫಿ, ಕಾಳುಮೆಣಸು. ನಮ್ಮ ಮಲೆನಾಡಿನೆಲ್ಲೆಡೆ ಕನಿಷ್ಠ ಮನೆ ಖರ್ಚಿಗಾದರೂ ಕಾಫಿ ಬೆಳೆಯುತ್ತಾರೆ , ಅಲ್ಲಲ್ಲಿ ಕಾಳುಮೆಣಸು ಇದೆ. ಆದರೆ ಕಾಫಿ ಮತ್ತು ಕಾಳುಮೆಣಸು ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಂದಂತೆ ಮಲೆನಾಡಿನ ಇತರೆ ತಾಲೂಕಿನಲ್ಲಿ ಮತ್ತು ಕರಾವಳಿಯಲ್ಲಿ ಬರದು… ಹಾಗಿದ್ದರೆ ಪರ್ಯಾಯ ಏನು..?

Advertisement
Advertisement

ದರೆ ಹತ್ತಿ ಉರಿದೊಡೆ……, ಎಂಬ ಪದ್ಯದ ಸಾಲು ನೀವು ಕೇಳಿರಬಹುದು.‌ಅಡಿಕೆಯೇ ಸರ್ವ ನಾಶವಾಗಿ ಹೋದರೆ ಅಡಿಕೆಯ ಆಂಶಿಕ ನೆರಳು ಮತ್ತು ಅಡಿಕೆಯ ಅವಲಂಬಿತವಾಗಿ ಬೆಳೆಯುವ ಬೆಳೆಗಳಾದ ಕಾಫಿ, ಕಾಳುಮೆಣಸು ಬೆಳೆ ಹೇಗೆ ಬೆಳೆಯಲು ಸಾಧ್ಯ…?,  ಎಲ್ಲಾಕಡೆ ಎಲ್ಲಾ ಬೆಳೆ ಸಾಧ್ಯವಿಲ್ಲ. ನಾವು ಬುಡಕ್ಕೆ ಎಷ್ಟಾದರೂ ಗೊಬ್ಬರ ನೀರು ಕೊಡಬಹುದು ಆದರೆ ಹೊರಗಿನ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

ಕಾಫಿ ಸೂಕ್ತ ಸಮಯದಲ್ಲಿ ಹೂ ಬಿಡಲು , ಕಾಯಿ ಕಟ್ಟಲು ಸೂಕ್ತ ವಾತಾವರಣ ಹೇಗೆ ಸೃಷ್ಟಿಸುವುದು…?,ಹೆಚ್ಚು ಕಡಿಮೆ ಸಮಾನ ವಾತಾವರಣವಿರುವ ಕೊಪ್ಪದ ಪಕ್ಕದ ತೀರ್ಥಹಳ್ಳಿ ತಾಲೂಕಿನಲ್ಲಿ ಕೊಪ್ಪದ ಕಾಫಿ ಇಳುವರಿ ಬೆಳೆ ಬರುತ್ತಿಲ್ಲ.ಪ್ರಕೃತಿ ಬಹಳ ಮುಖ್ಯ.

ಆಸಕ್ತರು ಯಾವ ಬೆಳೆಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಆದರೆ ಅದರ ಮೂಲ ನೆಲೆಯಲ್ಲಿ ಬರುವ ಇಳುವರಿ ಬೇರೆ ಜಾಗದಲ್ಲಿ ತಿಪ್ಪರಲಾಗ ಹೊಡೆದರೂ ಬರುವುದಿಲ್ಲ.ಕೆಲವು ಕಡೆಯಲ್ಲಿ ಚಿಕ್ಕ ಮಗಳೂರು ಜಿಲ್ಲೆಯ ಕಾಫಿ ಇಳುವರಿಗಿಂತಲೂ ಹೆಚ್ಚು ಇಳುವರಿ ಪಡೆದಿದ್ದಾರೆ. ಆದರೆ ಅದು ತಾತ್ಕಾಲಿಕ ಮಾತ್ರ.

ನಮ್ಮ ಅಡಿಕೆ ಕೂಡ ಅಷ್ಟೇ.., ಇವತ್ತು ಬಯಲು ಸೀಮೆ ದಾಟಿ ಪರ ರಾಜ್ಯ ದಾಟಿ ಮುಂದೊಮ್ಮೆ ರಾಜಸ್ಥಾನದ ಮರುಭೂಮಿಗೂ ವ್ಯಾಪ್ತಿಸಬಹುದು‌ . ಆದರೆ ಅತಿ ಶೀಘ್ರದಲ್ಲಿ ತನ್ನದಲ್ಲದ ವಾತಾವರಣದ ಜಾಗದಲ್ಲಿ ಬೆಳೆದ ಬೆಳೆ ನಾಶವಾಗಿ ಹೋಗುತ್ತದೆ.
ಇದು ಇತಿಹಾಸವಾಗಿದೆ.

Advertisement

ಹೊಸದಾಗಿ ಕಾಫಿ ಬೆಳೆ ಬೆಳೆಯುವವರು ಗಿಡ ಮಾಡಲು ಉತ್ತಮ ಇಳುವರಿ ನೀಡುತ್ತಿರುವ ಕಾಫಿ ಗಿಡದಿಂದ ಬೀಜ ಆರಿಸಿ ಉತ್ತಮ ಇಳುವರಿ ಗಿಡಗಳನ್ನು ಮಾಡಿ ನೆಡಬೇಕು. ಇದೆಲ್ಲಾ ಬಹಳ ಕಷ್ಟ. Gemination ಇಳುವರಿ ಇವೆಲ್ಲ ಹಲವಾರು ವರ್ಷಗಳಿಂದ ಬೆಳೆಯುವ ನುರಿತ ಕಾಫಿ ಬೆಳೆಗಾರರಿಗೂ ಇವತ್ತಿಗೂ ಸಂಕೀರ್ಣವಾದರೆ ಇನ್ನು ಹೊಸದಾಗಿ ಈ ಬೆಳೆ ಆಯ್ಕೆ ಮಾಡಿಕೊಳ್ಳುವ ವರಿಗೆ ಈ ತಳಿ ಉತ್ತಮ ಇಳುವರಿಯ ಗಿಡದ ಆಯ್ಕೆ ಕಬ್ಬಿಣದ ಕಡಲೆಯೇ ಸರಿ….

ಪ್ರತಿ ವಲಯಕ್ಕೂ ಅದರದ್ದೇ ಆದ ಬೆಳೆ ಇರುತ್ತದೆ. ರೈತರು ಮತ್ತು ಕೃಷಿ ಇಲಾಖೆ ಅದರ ಬಗ್ಗೆ ಗಮನ ಕೊಡಬೇಕು. ನಮ್ಮದಲ್ಲದ ಬೆಳೆ ಒಂದಲ್ಲ ಒಂದು ದಿನ ಕೈ ಕೊಡುತ್ತದೆ.

ಇವತ್ತು ಮಲೆನಾಡು ಕರಾವಳಿಯ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿರುವುದು ನಮ್ಮ ಭಾಗದಲ್ಲಿ ಲಗಾಯ್ತಿನಿಂದ ಬೆಳೆಯುತ್ತಿದ್ದ “ಸಾಂಪ್ರದಾಯಿಕ ವಾತಾವರಣ” ಬಿಟ್ಟು ಗುಡ್ಡದ ಇಳಿಜಾರು, ಗದ್ದೆ ಬಯಲು, ಕಾಡುಜಾಗ ಇತರೆ ಜಾಗದಲ್ಲಿ ಒತ್ತಾಯ ಮಾಡಿ ಅಡಿಕೆ ಕೃಷಿ ಮಾಡಿದ್ದೇ ಕಾರಣ.

ರೈತರು ಪರ್ಯಾಯದ ಸಾಧಕ ಬಾಧಕದ ಬಗ್ಗೆ ಚಿಂತನೆ ಮಾಡಿ ಮುಂದಡಿಯಿಡಬೇಕು.ಕಾಫಿಯೋ-ಕಾಳುಮೆಣಸೋ ಯಾವುದೇ ಬೆಳೆ ಬೆಳೆಯುವುದಾದಲ್ಲಿ ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬೆಳೆಯುವುದೊಳಿತು. ಯಾರನ್ನೋ ಅನುಕರಿಸುವುದು ಅಪಾಯ. ಆಯಾ ಪ್ರದೇಶದ ಬೆಳೆಯೇ ಸೂಕ್ತ ಹೊರತು, ಇನ್ಯಾವುದೋ ವಾತಾವರಣದ ಬೆಳೆಯನ್ನು ಬೆಳೆಯಲು ಹೊರಡುವುದಕ್ಕಿಂತ ಎಚ್ಚರ ವಹಿಸುವುದು ಸೂಕ್ತ.  ರೈತರು ಜಾಗೃತರಾಗಿ ಮುಂದಡಿಯಿಡಲಿ ಎಂಬುದು ಆಶಯ….

Farmers should think about alternative crop. If any crop is grown, it should be studied and grown. Imitating someone is dangerous. The crop of the respective region is suitable.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

5 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

5 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

15 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

15 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

15 hours ago