Advertisement
MIRROR FOCUS

Arecanut | ಅಡಿಕೆಗೆ ಪರ್ಯಾಯ ಬೆಳೆ ಯಾವುದು…? | ಗಿಡಗಳಿಗೆ ಬೇಕಾದ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

Share

ಅಡಿಕೆ ಬೆಳೆಗೆ ಪರ್ಯಾಯ ಎಂದರೆ ಎಲ್ಲರೂ ಸೂಚಿಸುವ ಬೆಳೆಗಳೆಂದರೆ ಕಾಫಿ, ಕಾಳುಮೆಣಸು. ನಮ್ಮ ಮಲೆನಾಡಿನೆಲ್ಲೆಡೆ ಕನಿಷ್ಠ ಮನೆ ಖರ್ಚಿಗಾದರೂ ಕಾಫಿ ಬೆಳೆಯುತ್ತಾರೆ , ಅಲ್ಲಲ್ಲಿ ಕಾಳುಮೆಣಸು ಇದೆ. ಆದರೆ ಕಾಫಿ ಮತ್ತು ಕಾಳುಮೆಣಸು ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಂದಂತೆ ಮಲೆನಾಡಿನ ಇತರೆ ತಾಲೂಕಿನಲ್ಲಿ ಮತ್ತು ಕರಾವಳಿಯಲ್ಲಿ ಬರದು… ಹಾಗಿದ್ದರೆ ಪರ್ಯಾಯ ಏನು..?

ದರೆ ಹತ್ತಿ ಉರಿದೊಡೆ……, ಎಂಬ ಪದ್ಯದ ಸಾಲು ನೀವು ಕೇಳಿರಬಹುದು.‌ಅಡಿಕೆಯೇ ಸರ್ವ ನಾಶವಾಗಿ ಹೋದರೆ ಅಡಿಕೆಯ ಆಂಶಿಕ ನೆರಳು ಮತ್ತು ಅಡಿಕೆಯ ಅವಲಂಬಿತವಾಗಿ ಬೆಳೆಯುವ ಬೆಳೆಗಳಾದ ಕಾಫಿ, ಕಾಳುಮೆಣಸು ಬೆಳೆ ಹೇಗೆ ಬೆಳೆಯಲು ಸಾಧ್ಯ…?,  ಎಲ್ಲಾಕಡೆ ಎಲ್ಲಾ ಬೆಳೆ ಸಾಧ್ಯವಿಲ್ಲ. ನಾವು ಬುಡಕ್ಕೆ ಎಷ್ಟಾದರೂ ಗೊಬ್ಬರ ನೀರು ಕೊಡಬಹುದು ಆದರೆ ಹೊರಗಿನ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

ಕಾಫಿ ಸೂಕ್ತ ಸಮಯದಲ್ಲಿ ಹೂ ಬಿಡಲು , ಕಾಯಿ ಕಟ್ಟಲು ಸೂಕ್ತ ವಾತಾವರಣ ಹೇಗೆ ಸೃಷ್ಟಿಸುವುದು…?,ಹೆಚ್ಚು ಕಡಿಮೆ ಸಮಾನ ವಾತಾವರಣವಿರುವ ಕೊಪ್ಪದ ಪಕ್ಕದ ತೀರ್ಥಹಳ್ಳಿ ತಾಲೂಕಿನಲ್ಲಿ ಕೊಪ್ಪದ ಕಾಫಿ ಇಳುವರಿ ಬೆಳೆ ಬರುತ್ತಿಲ್ಲ.ಪ್ರಕೃತಿ ಬಹಳ ಮುಖ್ಯ.

ಆಸಕ್ತರು ಯಾವ ಬೆಳೆಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಆದರೆ ಅದರ ಮೂಲ ನೆಲೆಯಲ್ಲಿ ಬರುವ ಇಳುವರಿ ಬೇರೆ ಜಾಗದಲ್ಲಿ ತಿಪ್ಪರಲಾಗ ಹೊಡೆದರೂ ಬರುವುದಿಲ್ಲ.ಕೆಲವು ಕಡೆಯಲ್ಲಿ ಚಿಕ್ಕ ಮಗಳೂರು ಜಿಲ್ಲೆಯ ಕಾಫಿ ಇಳುವರಿಗಿಂತಲೂ ಹೆಚ್ಚು ಇಳುವರಿ ಪಡೆದಿದ್ದಾರೆ. ಆದರೆ ಅದು ತಾತ್ಕಾಲಿಕ ಮಾತ್ರ.

ನಮ್ಮ ಅಡಿಕೆ ಕೂಡ ಅಷ್ಟೇ.., ಇವತ್ತು ಬಯಲು ಸೀಮೆ ದಾಟಿ ಪರ ರಾಜ್ಯ ದಾಟಿ ಮುಂದೊಮ್ಮೆ ರಾಜಸ್ಥಾನದ ಮರುಭೂಮಿಗೂ ವ್ಯಾಪ್ತಿಸಬಹುದು‌ . ಆದರೆ ಅತಿ ಶೀಘ್ರದಲ್ಲಿ ತನ್ನದಲ್ಲದ ವಾತಾವರಣದ ಜಾಗದಲ್ಲಿ ಬೆಳೆದ ಬೆಳೆ ನಾಶವಾಗಿ ಹೋಗುತ್ತದೆ.
ಇದು ಇತಿಹಾಸವಾಗಿದೆ.

ಹೊಸದಾಗಿ ಕಾಫಿ ಬೆಳೆ ಬೆಳೆಯುವವರು ಗಿಡ ಮಾಡಲು ಉತ್ತಮ ಇಳುವರಿ ನೀಡುತ್ತಿರುವ ಕಾಫಿ ಗಿಡದಿಂದ ಬೀಜ ಆರಿಸಿ ಉತ್ತಮ ಇಳುವರಿ ಗಿಡಗಳನ್ನು ಮಾಡಿ ನೆಡಬೇಕು. ಇದೆಲ್ಲಾ ಬಹಳ ಕಷ್ಟ. Gemination ಇಳುವರಿ ಇವೆಲ್ಲ ಹಲವಾರು ವರ್ಷಗಳಿಂದ ಬೆಳೆಯುವ ನುರಿತ ಕಾಫಿ ಬೆಳೆಗಾರರಿಗೂ ಇವತ್ತಿಗೂ ಸಂಕೀರ್ಣವಾದರೆ ಇನ್ನು ಹೊಸದಾಗಿ ಈ ಬೆಳೆ ಆಯ್ಕೆ ಮಾಡಿಕೊಳ್ಳುವ ವರಿಗೆ ಈ ತಳಿ ಉತ್ತಮ ಇಳುವರಿಯ ಗಿಡದ ಆಯ್ಕೆ ಕಬ್ಬಿಣದ ಕಡಲೆಯೇ ಸರಿ….

ಪ್ರತಿ ವಲಯಕ್ಕೂ ಅದರದ್ದೇ ಆದ ಬೆಳೆ ಇರುತ್ತದೆ. ರೈತರು ಮತ್ತು ಕೃಷಿ ಇಲಾಖೆ ಅದರ ಬಗ್ಗೆ ಗಮನ ಕೊಡಬೇಕು. ನಮ್ಮದಲ್ಲದ ಬೆಳೆ ಒಂದಲ್ಲ ಒಂದು ದಿನ ಕೈ ಕೊಡುತ್ತದೆ.

ಇವತ್ತು ಮಲೆನಾಡು ಕರಾವಳಿಯ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿರುವುದು ನಮ್ಮ ಭಾಗದಲ್ಲಿ ಲಗಾಯ್ತಿನಿಂದ ಬೆಳೆಯುತ್ತಿದ್ದ “ಸಾಂಪ್ರದಾಯಿಕ ವಾತಾವರಣ” ಬಿಟ್ಟು ಗುಡ್ಡದ ಇಳಿಜಾರು, ಗದ್ದೆ ಬಯಲು, ಕಾಡುಜಾಗ ಇತರೆ ಜಾಗದಲ್ಲಿ ಒತ್ತಾಯ ಮಾಡಿ ಅಡಿಕೆ ಕೃಷಿ ಮಾಡಿದ್ದೇ ಕಾರಣ.

ರೈತರು ಪರ್ಯಾಯದ ಸಾಧಕ ಬಾಧಕದ ಬಗ್ಗೆ ಚಿಂತನೆ ಮಾಡಿ ಮುಂದಡಿಯಿಡಬೇಕು.ಕಾಫಿಯೋ-ಕಾಳುಮೆಣಸೋ ಯಾವುದೇ ಬೆಳೆ ಬೆಳೆಯುವುದಾದಲ್ಲಿ ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬೆಳೆಯುವುದೊಳಿತು. ಯಾರನ್ನೋ ಅನುಕರಿಸುವುದು ಅಪಾಯ. ಆಯಾ ಪ್ರದೇಶದ ಬೆಳೆಯೇ ಸೂಕ್ತ ಹೊರತು, ಇನ್ಯಾವುದೋ ವಾತಾವರಣದ ಬೆಳೆಯನ್ನು ಬೆಳೆಯಲು ಹೊರಡುವುದಕ್ಕಿಂತ ಎಚ್ಚರ ವಹಿಸುವುದು ಸೂಕ್ತ.  ರೈತರು ಜಾಗೃತರಾಗಿ ಮುಂದಡಿಯಿಡಲಿ ಎಂಬುದು ಆಶಯ….

Farmers should think about alternative crop. If any crop is grown, it should be studied and grown. Imitating someone is dangerous. The crop of the respective region is suitable.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

3 hours ago

ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ

Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…

3 hours ago

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…

3 hours ago

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ

ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…

3 hours ago

ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ | ರೋಗ ನಿರ್ವಹಣೆ ತಪ್ಪಿದರೆ ಇಳುವರಿ ಕುಸಿತ..! – ಅಡಿಕೆ ಸಮೀಕ್ಷೆ ವರದಿ

ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…

3 hours ago

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ

ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…

13 hours ago