Advertisement
Opinion

#Diabetes | ಮಧುಮೇಹ ರೋಗಿಗಳು ಯಾವೆಲ್ಲಾ ಹಣ್ಣುಗಳನ್ನು ಸೇವಿಸಬಹುದು..? ಹಣ್ಣುಗಳ ಸೇವನೆಯ ಮಹತ್ವವೇನು..?

Share

ಹಣ್ಣುಗಳು.. ಕಾರ್ಬೋಹೈಡ್ರೇಟ್ಗಳು, ಅಗತ್ಯವಾದ ಜೀವಸತ್ವಗಳು ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧಿ ಮೂಲವಾಗಿದೆ.ಕೆಲವು ಪೋಷಕಾಂಶ ಹಣ್ಣುಗಳಲ್ಲಿ ಮಾತ್ರದೊರೆಯುತ್ತದೆ. ಹೀಗಾಗಿ ಸಮತೋಲನ ಹಾಗೂ ಆರೋಗ್ಯಕರ ಆಹಾರವನ್ನು ಹೊಂದಲು ಹಣ್ಣುಗಳು ನಮಗೆ ಅತ್ಯಗತ್ಯ.  ಹಣ್ಣುಗಳು ನೈಸರ್ಗಿಕ ಸಕ್ಕರೆ ಪ್ರಕ್ಟೊಸನ್ನು ಹೊಂದಿರುತ್ತದೆ.

ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ.  ಬಾಳೆಹಣ್ಣು ಪೊಟಾಸಿಯಂ ಮತ್ತು  tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ನಾರಿನಂಶ /ಫೈಬರ್ ಸಮೃದ್ಧ ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯಕಾರಿ. ಫೈಬರ್ ಸಮೃದ್ಧವಾಗಿರುವ ಆಹಾರ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.  ಹಸಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.  ಟೈಪ್ ಟು ಮಧುಮೇಹಕ್ಕೆ ಸ್ತೂಲಕಾಯ ಒಂದು ಕಾರಣವಾಗಿದೆ. ಫೈಬರ್ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ತೂಕವನ್ನು ನಿಯಂತ್ರಿಸುವ ಮೂಲಕ ಮಧುಮೆಹವನ್ನು ತಡೆಗಟ್ಟಬಹುದು.

Low Glycemic Index(LGI) ಅಂದರೆ ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಗ್ಲುಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುವಂಥದ್ದು  ಈ ಕಡಿಮೆ glycemic index ಇರುವ ಎಲ್ಲಾ ಹಣ್ಣುಗಳು ಮಧುಮೇಹ ರೋಗಿಗಳು ಉಪಯೋಗಿಸಬಹುದು ಅವುಗಳು ಯಾವುವೆಂದರೆ. ಸೇಬು, ಪಪ್ಪಾಯ, ಕಿತ್ತಳೆ, ಮರಸೇಬು, ಚೆರ್ರಿ, ನೇರಳೆ, ಪೇರಳೆ, ಡ್ರಾಗನ್ ಫ್ರೂಟ್, ಕಿವಿಹಣ್ಣು, ಅವಕಾಡೋ.

ಪಪ್ಪಾಯಿ: ಕಡಿಮೆ ಕ್ಯಾಲೋರಿಇದೆ  hypoglycemic effect..ಎಲ್ಲಾ ವಿಟಮಿನ್ ಗಳು   ಫೈಬರ್ ಅಂಶ ಜಾಸ್ತಿ ಇರವುದರಿಂದ  ಮಧುಮೆಹ ರೋಗದಲ್ಲಿ  ಬಳಸಬಹುದು.

ಚೆರ್ರಿ : ಸ್ವಾಭಾವಿಕವಾಗಿ ಸಿಗುವ ಚೆರ್ರಿ ಹಣ್ಣು antioxidents.ಇದ್ದು ರೋಗ ನಿರೋಧಕ  ಶಕ್ತಿ ಹೆಚ್ಚಿಸುವಲ್ಲಿ ಸಹಾಯಕಾರಿ. ಕೃತಕ ಚೆರ್ರಿಯಲ್ಲಿ ಸಕ್ಕರೆ ಅಂಶ  ಇರುವುದರಿಂದ ಸೇವಿಸುವುದು ಒಳ್ಳೇದಲ್ಲ.

ಕಿವಿಹಣ್ಣು : ಬಿಳಿರಕ್ತ ಕಣಗಳನ್ನು ಹೆಚಿಸುತ್ತದೆ  ಫೈಬರ್, ಪೊಟಾಸಿಯಂ ವಿಟಮಿನ್ಸ್ ಸಮೃದ್ಧವಾಗಿದ್ದು ಕಡಿಮೆ ಕ್ಯಾಲೋರಿ ಯನ್ನು ಹೊಂದಿದೆ.

ಡ್ರ್ಯಾಗನ್ ಫ್ರೂಟ್ : ಕೆಡಿಮೆ ಕ್ಯಾಲರಿ,ಆಂಟಿ ಆಕ್ಸಿಡೆಂಟ್ ಹಾಗೂ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಈ ಎಲ್ಲಾ ಹಣ್ಣುಗಳನ್ನು ಮಿತವಾಗಿ ಸೇವಿಸಿ. ಮಧುಮೆಹ ರೋಗಿಗಳು  ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಇವುಗಳಲ್ಲಿ ಸಕ್ಕರೆಯ ಪ್ರಮಾಣ (High Glycemic Index ) ಅಧಿಕವಿರುವುದರಿಂದ  ಸೇವಿಸದೆ ಇರುವುದು ಉತ್ತಮ. ಉತ್ತಮ ಆಹಾರಪದ್ದತಿ  ವ್ಯಾಯಾಮ  ಯೋಗ   ವಾಕ್   ಉತ್ತಮ ಜೀವನಶೈಲಿ  ಇವುಗಳಿಂದ ಮಧುಮೇಹ ನಿಯಂತ್ರಿಸಬಹುದು.

( ಸಂಗ್ರಹ ಮಾಹಿತಿ)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

14 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

15 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

16 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago