#Culture | ಮನೆಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದು ಏಕೆ..? | ಪೈಂಟಿನಿಂದ ಶಾಶ್ವತ ರಂಗೋಲಿ ಹಚ್ಚಿದಿರಿ ಜೋಕೆ…!

July 10, 2023
2:11 PM
ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಹೀಗಾಗಿಯೇ ಮನೆಯ ಮುಂದೆ ಹಾಗೂ ಹೊಸ್ತಿಲ ಮೇಲೆ ರಂಗೋಲಿ ಇಡುವುದು, ಅರಿಶಿನ, ಕುಂಕುಮ ಹಾಕುವುದು ಶುಭದ ಸಂಕೇತ.

ಸೂರ್ಯೋದಯಕ್ಕೂ ಮುನ್ನ ಎದ್ದು ಗೃಹಿಣಿಯರು ಮನೆ ಅಂಗಳದ ಕಸ ಗುಡಿಸಿ, ಹೊಸ್ತಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಅರಿಶಿನ, ಕುಂಕುಮ ಹಚ್ಚಿ ಹೂಗಳನ್ನು ಇಡುವುದು  ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾರು ಅಷ್ಟು ಬೇಗ ಎದ್ದು ಇದೆಲ್ಲಾ ಮಾಡ್ತಾರೆ ಅಂತಾ ಶಾಶ್ವತವಾಗಿ ಹೊಸ್ತಿಲಿಗೆ ಹಳದಿ ಪೇಂಟ್ ಬಳಸ್ತಾರೆ. ಅದರ ಮೇಲೆ ಬಿಳಿ ಪೇಂಟ್‌ನಿಂದ ರಂಗೋಲಿ ಗೆರೆಗಳನ್ನು ಹಾಕಿಸ್ತಾರೆ.

Advertisement
Advertisement

ಕೆಂಪು, ಹಳದಿ ಪೇಂಟ್‌ನಿಂದ ಅರಿಶಿನ, ಕುಂಕುಮ ಇಡುವಂತೆ ವೃತ್ತಾಕಾರದ ಚುಕ್ಕೆಗಳನ್ನು ಇಡಲಾಗಿರುತ್ತೆ. ಹೀಗೆ ಮಾಡೋದು ಶುದ್ಧ ತಪ್ಪು. ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾದ್ರೆ ಪ್ರತಿನಿತ್ಯ ನೀವೂ ಈ ಆಚರಣೆಯನ್ನು ಪಾಲಿಸೋಕೆ ಆರಂಭಿಸ್ತೀರಾ. ನಿಮಗೆ ಗೊತ್ತಾ? ಮನೆಯ ಬಾಗಿಲು ಆಕರ್ಷಕವಾಗಿದ್ರೆ ಪಾಸಿಟಿವ್ ಎನರ್ಜಿಯು ಹೆಚ್ಚು ಅನುಭವವಾಗುತ್ತೆ. ಮನೆಯ ಮುಂಬಾಗಿಲು ಆಕರ್ಷಕವಾಗಿದ್ರೆ ಮನೆಗೆ ಶುಭವಾಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಹೀಗಾಗೇ ಮನೆಯ ಮುಂದೆ ಹಾಗೂ ಹೊಸ್ತಿಲ ಮೇಲೆ ರಂಗೋಲಿ ಬಿಡೋದು. ಅರಿಶಿನ, ಕುಂಕುಮ ಹಾಕೊದು ಶುಭದ ಸಂಕೇತ. ಹೊಸ್ತಿಲು ಬರಿದಾಗಿದ್ರೆ ಅದು ಅಶುಭ ಎಂಬ ನಂಬಿಕೆ ಇದೆ. ಮನೆಯ ಹೊಸ್ತಿಲು ಸಾಕ್ಷಾತ್ ಮಹಾಲಕ್ಷ್ಮೀ ಸ್ವರೂಪ ಎನ್ನಲಾಗುತ್ತೆ. ಮನೆಯ ಮುಖ್ಯದ್ವಾರದ ಹೊಸ್ತಿಲಲ್ಲಿ ಸಾಕ್ಷಾತ್ ಲಕ್ಷ್ಮೀ ಇರ್ತಾಳೆ. ಇನ್ನು ಹೊಸ್ತಿಲ ಮೇಲ್ಬಾಗದಲ್ಲಿ ಗೌರಿ ನೆಲೆಸಿರ್ತಾಳೆ. ರಂಗೋಲಿ, ಅರಿಶಿನ-ಕುಂಕುಮ ಇಲ್ಲದ ಮನೆಗೆ ದೇವತೆಗಳ ಪ್ರವೇಶಿಸೋದಿಲ್ಲ ಅಂತಾ ನಮ್ಮ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆ ಬಾಗಿಲಿಗೆ ಏಕೆ ಮಂಗಳದ್ರವ್ಯಗಳನ್ನು ಹಚ್ಚಬೇಕು. ಇದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೆ -ಮನೆಯ ಶುಚಿತ್ವ ಕಾಪಾಡುತ್ತೆ. ಹೊಸ್ತಿಲಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ -ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳಿರೋದ್ರಿಂದ ಮನೆಯೊಳಗೆ ಕ್ರಿಮಿಕೀಟಗಳು ಪ್ರವೇಶಿಸಲ್ಲ.

ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗುವವರಿಗೆ ಇದ್ರಿಂದ ಒಳಿತಾಗುತ್ತೆ, ಮನೆಯ ಬಾಗಿಲು ಸುಂದರವಾಗಿ ಕಾಣುತ್ತೆ, – ಮನೆಯವರಲ್ಲಿ ನಕಾರಾತ್ಮಕ ಚಿಂತನೆಗಳು ಬಾರದಂತೆ ತಡೆಯುತ್ತೆ,  ಮನೆಯಲ್ಲಿ ಸದಾ ಪಾಸಿಟಿವ್ ವೈಬ್ರೇಷನ್ ಉಂಟಾಗಲು ಸಹಕಾರಿಯಾಗುತ್ತೆ, ಮನೆಯಲ್ಲಿರುವವರ ಆಯಸ್ಸು ಹೆಚ್ಚುತ್ತೆ,  ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸುತ್ತದೆ.

Advertisement

ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದು ಮೂಢನಂಬಿಕೆಯಲ್ಲ. ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಪುರಾತನ ಕಾಲದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮಗೆ ಆರೋಗ್ಯದ ರಕ್ಷಾ ಕವಚವಿದ್ದಂತೆ. ಇಂತಹ ಆಚರಣೆಗಳ ಬಗ್ಗೆ ಅರಿತು ಆಚರಿಸಿದ್ರೆ ಸುಂದರ, ಸ್ವಾಸ್ಥ್ಯ ಜೀವನ ನಮ್ಮದಾಗುತ್ತದೆ.

(ಕೃಪೆ : ಅಂತರ್ಜಾಲ ) 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ
June 21, 2025
11:07 PM
by: The Rural Mirror ಸುದ್ದಿಜಾಲ
ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ
June 21, 2025
9:08 PM
by: ಮಹೇಶ್ ಪುಚ್ಚಪ್ಪಾಡಿ
ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |
June 21, 2025
4:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?
June 21, 2025
3:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group