ಇತ್ತೀಚೆಗೆ ಹುಡುಗಿಯರೇಕೆ ಕುಳ್ಳಿಯರು..? | ಆಹಾರ ಕ್ರಮಗಳೇ ಮುಖ್ಯ ಕಾರಣವೇ..? |

March 4, 2024
10:00 AM

ನೀವು ಗಮನಿಸಿದ್ದೀರೋ ಇಲ್ಲವೋ, ಇಂದಿನ ಯುವತಿಯರು(girls) ಕುಳ್ಳಗಿರುವುದೇ(short) ಹೆಚ್ಚು. ಜಗತ್ತಿನ ಸರಿಸುಮಾರು ಎಲ್ಲ ದೇಶಗಳಲ್ಲೂ(country) ಹುಡುಗರು(boys) ಮತ್ತು ಹುಡುಗಿಯರ ಎತ್ತರ(height) ಹೆಚ್ಚಾಗುತ್ತಿದ್ದರೆ ಭಾರತದಲ್ಲಿ(India) ಮಾತ್ರ ಈ ಎತ್ತರ ಕಡಿಮೆಯಾಗುತ್ತಿದೆ. ಅದರಲ್ಲೂ ಎಲ್ಲರ ಮನೆಗಳಲ್ಲೂ ಹುಡುಗಿಯರೇ ಕುಳ್ಳಿಯರು. ಇದಕ್ಕೆ ಕಾರಣಗಳು ಮೂರು. ಈ ಕಾರಣಗಳು ಹುಡುಗಿಯರನ್ನೇ ಹೆಚ್ಚು ಬಾಧಿಸುತ್ತವೆ ಆದುದರಿಂದ ಹುಡುಗಿಯರೇ ಎಲ್ಲರ ಮನೆಗಳಲ್ಲೂ ಕುಳ್ಳಿಯರು.

ಮೊದಲನೆಯ ಕಾರಣ ಚಿಕ್ಕಂದಿನಿಂದ ಅವರು ಅನುಭವಿಸುತ್ತಿರುವ ಪೋಷಕಾಂಶಗಳ ಕೊರತೆ. ನಾವು ಬಳಸುವ ಆಹಾರಗಳು ನಮ್ಮ ಅಜ್ಜ ಅಜ್ಜಿ ಸೇವಿಸಿದ ಆಹಾರಗಳೇ ಆಗಿರಬೇಕು. ಇಂದು ಅದಿಲ್ಲ. ನಾಟಿ ಬೀಜಗಳಿಂದ ಬೆಳೆದ ಆಹಾರಗಳು ಮತ್ತು ಕೀಟನಾಶಕಗಳು ಮತ್ತು ರಾಸಾಯನಿಕ ಬಳಸದೆಯೂ ಬೆಳೆದ ಆಹಾರಗಳನ್ನು ನಮ್ಮ ಹಿರಿಯರು ಬಳಸುತ್ತಿದ್ದರು. ಇಂತಹ ಆಹಾರಗಳು ಇಂದು ಹುಡುಕಿದರೆ ಎಲ್ಲಿಯೂ ಸಿಗುವುದಿಲ್ಲ. ಇದು ನಮ್ಮ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪೋಷಕಾಂಶಗಳ ಕೊರತೆಯನ್ನು ಉಂಟುಮಾಡುತ್ತಿದೆ. ಈ ಪೋಷಕಾಂಶಗಳ ಕೊರತೆಯಿಂದಾಗಿ ಅವರ ಬೆಳವಣಿಗೆಯ ಹಾರ್ಮೋನು ತೊಂದರೆಗೆ ಸಿಲುಕುತ್ತದೆ. ಅವರು ದೊಡ್ಡವರಾದಾಗ ಅವರ ಬೆಳವಣಿಗೆಯಲ್ಲಿ ಕೊರತೆಯಾಗುತ್ತಿದೆ. ಎತ್ತರ ಕಡಿಮೆಯಾಗುತ್ತಿದೆ.

ಹುಡುಗಿಯರ ಎತ್ತರ ಕಡಿಮೆಯಾಗುತ್ತಿರುವುದಕ್ಕೆ ಎರಡನೆಯ ಕಾರಣ ಚಿಕ್ಕಂದಿನಿಂದ ಅವರು ಅತಿ ಹೆಚ್ಚು ಸಕ್ಕರೆ ಮತ್ತು ಬೇಕರಿಯ ಆಹಾರಗಳನ್ನೇ ಸೇವಿಸುತ್ತಿರುವುದು.

ಬ್ರಿಟಿಷರ ಭಾರತದ ಆಡಳಿತ ಬರೀ ಅಧಿಕಾರ, ದಬ್ಬಾಳಿಕೆ, ಲೂಟಿ, ಇವುಗಳಿಗೆ ಸೀಮಿತವಾಗಿರಲಿಲ್ಲ. ಭಾರತದ ಸಾಂಸ್ಕೃತಿಕ ವೈವಿಧ್ಯಮತೆಯನ್ನು ಹಾಳುಮಾಡಿ ಮಾಡಿ ನಮ್ಮ ಆರೋಗ್ಯವನ್ನು ಎಂದೆಂದಿಗೂ ಹಾನಿಗೀಡು ಮಾಡುವ ಗುರಿಯನ್ನು ಕೂಡ ಅವರು ಹೊಂದಿದ್ದರು. ಈ ಗುರಿಯ ಭಾಗವಾಗಿ ಬ್ರಿಟಿಷ್ ಆಹಾರ ಪದ್ಧತಿಯಾದ ಬೇಕರಿ ಆಹಾರಗಳನ್ನು ಅವರು ಇಲ್ಲಿ ಬಳಸಲು ಪ್ರೇರೇಪಿಸಿದರು. ಅವುಗಳೇ ಶ್ರೇಷ್ಠವೆಂದು ಬಿಂಬಿಸಿದರು. ಅದನ್ನೇ ಬೆಳವಣಿಗೆ ಎಂದು ತಿಳಿದಿದ್ದ ನಮ್ಮ ಸರ್ಕಾರಗಳು ಕೂಡ ಈ ಆಹಾರಗಳನ್ನು ಬೆಂಬಲಿಸಿದವು. ಹೀಗಾಗಿ ಇಂದು ಪ್ರತಿ ಹಳ್ಳಿಗಳಲ್ಲಿಯೂ ಸಾಲು ಸಾಲಾಗಿ ಬೇಕರಿಗಳು ಎದ್ದು ನಿಂತಿವೆ. ಇಲ್ಲಿ ದೊರೆಯುವ ಯಾವುದೇ ಆಹಾರಗಳು ಭಾರತೀಯ ಮೂಲದವು ಅಲ್ಲ.

ಆಹಾರದಲ್ಲಿನ ಬದಲಾವಣೆಗಳು ನಮ್ಮ ಜೀವ ತಂತುಗಳಲ್ಲಿ ಕೂಡ ಬದಲಾವಣೆಗಳನ್ನು ತರುತ್ತವೆ. ಈ ಬದಲಾವಣೆಗಳಿಂದ ಬರುವ ಕಾಯಿಲೆಗಳು ಮೊದಲ ಪೀಳಿಗೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎರಡನೇ ಪೀಳಿಗೆಯಲ್ಲಿ ಸ್ವಲ್ಪವಾಗಿ ಮತ್ತು ಮೂರನೇ ಪೀಳಿಗೆಯಲ್ಲಿ ಹೆಚ್ಚಾಗಿ ಈ ಕಾಯಿಲೆಗಳು ಕಂಡುಬರುತ್ತವೆ. ಬೇಕರಿಯ ಆಹಾರಗಳೇ ಪ್ರಮುಖ ಆಹಾರಗಳಾದಾಗ ನಮ್ಮ ಮೂರನೆಯ ಪೀಳಿಗೆಯಿಂದ ನಂತರದ ಎಲ್ಲಾ ಪೀಳಿಗೆಗಳು ಈ ಕಾಯಿಲೆಗಳಿಗೆ ತುತ್ತಾಗುತ್ತವೆ. ಅಶಕ್ತ ಪೀಳಿಗೆಯನ್ನು ನಾವು ಹುಟ್ಟು ಹಾಕುತ್ತಿರುತ್ತೇವೆ.

ಬೇಕರಿಯ ಆಹಾರಗಳೇ ಪ್ರಮುಖ ಆಹಾರವಾದಾಗ ಮಕ್ಕಳು ಪೋಷಕಾಂಶಗಳ ಕೊರತೆಯಿಂದ ನರಳುತ್ತಾರೆ. ಬೆಳವಣಿಗೆಯ ತೊಂದರೆಯನ್ನೂ ಅನುಭವಿಸುತ್ತಾರೆ.

ಚಿಕ್ಕಂದಿನಿಂದ ಹೆಚ್ಚು ಬೇಕರಿಯ ಆಹಾರಗಳನ್ನು ಸೇವಿಸಿದ ಪರಿಣಾಮವಾಗಿ ಪೋಷಕಾಂಶಗಳ! ಕೊರತೆಯಿಂದಾಗಿ ಅವರ ಎತ್ತರ ಕಡಿಮೆಯಾಗುತ್ತಿದೆ. ಬೇಕರಿಯ ಆಹಾರಗಳು ಮತ್ತು ಸಿಹಿ ತಿಂಡಿಗಳಲ್ಲಿರುವ ಕೊಬ್ಬಿನ ಅಂಶದಿಂದಾಗಿ ಅವರ ಹಾರ್ಮೋನುಗಳಲ್ಲಿ ಕೂಡ ಬದಲಾವಣೆಗಳು ಉಂಟಾಗಿ ಹಾರ್ಮೋನುಗಳಲ್ಲಿನ ಏರುಪೇರಿನಿಂದಾಗಿ ಯುವತಿಯರು ಇಂದು ಮುಟ್ಟಿನ ತೊಂದರೆ, ಪಿಸಿಓಡಿ, ಸಂತಾನ ಹೀನತೆ ಯಂತಹ ಸಮಸ್ಯೆಗಳಿಗೆ ಕೂಡ ಸಿಲುಕಿ ಕೊಳ್ಳುತ್ತಿದ್ದಾರೆ. ಯುವಕರು ಕೂಡ ಸಮಸ್ಯೆಗಳಿಗೆ ಸಾವಕಾಶವಾಗಿ ಸಿಲುಕಿಕೊಳ್ಳುತ್ತಿದ್ದಾರೆ.

ಈ ಸಮಸ್ಯೆಗೆ ಮೂರನೆಯ ಕಾರಣ ಚಿಕ್ಕಂದಿನಿಂದಲೇ ನಮ್ಮ ಮಕ್ಕಳು ಕುಡಿಯುತ್ತಿರುವ ಆರ್ ಓ ಎಂಬ ಅಯೋಗ್ಯ ನೀರು. ಈ ನೀರಿನಲ್ಲಿ ಅವರಿಗೆ ಬೇಕಾದ ಯಾವುದೇ ಪೋಷಕಾಂಶಗಳಿರುವುದಿಲ್ಲ. ನಮ್ಮ ದೇಹಕ್ಕೆ ಪ್ರತಿ ದಿನ ಅತ್ಯವಶ್ಯವಾಗಿ ಬೇಕಾಗುವ ಖನಿಜಾಂಶಗಳಾದ ಮ್ಯಾಗ್ನೇಶಿಯಂ, ಕ್ಯಾಲ್ಸಿಯಂ, ಜಿಂಕ್, ಮುಂತಾದವುಗಳನ್ನು ಆರ್ ಓ ಹೊರಗೆ ಹಾಕಿ ಸತ್ತ ನೀರನ್ನು ನಮಗೆ ಕೊಡುತ್ತದೆ. ಮ್ಯಾಗ್ನೇಶಿಯಂ ನಮ್ಮ ಹೃದಯದ ಬೆಳವಣಿಗೆಗೆ ಅತಿ ಅವಶ್ಯಕ. ಕ್ಯಾಲ್ಸಿಯಂ ನಮ್ಮ ಮೂಳೆಗಳ ಮತ್ತು ಹಲ್ಲುಗಳ ಬೆಳವಣಿಗೆಗೆ ಅತಿ ಅವಶ್ಯಕ. ಜಿಂಕ್ ನಮ್ಮ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಪೋಷಕಾಂಶಗಳಿಲ್ಲದ ನೀರನ್ನು ಪ್ರತಿನಿತ್ಯ ನಾವು ಸೇವಿಸಿದಾಗ ಈ ಪೋಷಕಾಂಶಗಳ ಕೊರತೆಯಿಂದ ನಮ್ಮ ಎತ್ತರವೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಆರ್ ಓ ನೀರು ಮಾಡುವ ಅತ್ಯಂತ ಕೆಟ್ಟ ಕೆಲಸವೆಂದರೆ ದೇಹಕ್ಕೆ ಸೇರಿದಾಗ ಅದು ದೇಹದಲ್ಲಿನ ಪೋಷಕಾಂಶಗಳನ್ನು ಕೂಡ ಹೀರಿಕೊಂಡು ಹೊರ ಹೋಗುತ್ತದೆ. ತಾನು ತರುವುದು ಏನೂ ಇಲ್ಲ. ಇದ್ದದ್ದನ್ನು ದೋಚುತ್ತದೆ. ಕಾರಣ RO ನೀರು ಸೇವನೆ ಖಂಡಿತ ಒಳ್ಳೆಯದಲ್ಲ. ಅದು ನಮ್ಮ ಮಕ್ಕಳ ಎತ್ತರವನ್ನಷ್ಟೇ ಕುಗ್ಗಿಸುವುದಿಲ್ಲ ಎಲ್ಲಾ ಅಂಗಾಂಗಗಳನ್ನು ಹಾಳು ಮಾಡಿ ನಮ್ಮನ್ನು ಮಲ್ಟಿಪಲ್ ಆರ್ಗನ ಫೇಲ್ಯೂರ್, ಹಲವು ಅಂಗಾಂಗ ವೈಫಲ್ಯ ಎಂಬ ಕಾರಣದಿಂದ ಸಾವಿಗೆ ದೂಡುತ್ತದೆ. ಕಾರಣ ನಿಮ್ಮ ಕುಡಿಯುವ ನೀರಿಗಾಗಿ ಮತ್ತೊಮ್ಮೆ ಭಾವಿ ಕೆರೆಗಳನ್ನು ಹುಡುಕಿಕೊಂಡು ಹೋಗದೆ ಬೇರೆ ದಾರಿ ಮನುಷ್ಯನಿಗಿಂದು ಉಳಿದಿಲ್ಲ. ನೈಸರ್ಗಿಕ ನೀರಿಗೆ ಪರ್ಯಾಯ ವಾದುದು ಯಾವುದೂ ಇಲ್ಲ. ಸುಳ್ಳು ಜಾಹೀರಾತುಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

ನಾಟಿ ಬೀಜಗಳ ಆಹಾರಗಳನ್ನು ಉಳಿಸೋಣ. ಆರ್ಗನಿಕ್ ರೀತಿಯಿಂದ ಬೆಳೆದ ಆಹಾರ ಬಳಸೋಣ. ಅತಿಯಾದ ಸಕ್ಕರೆ, ಬೇಕರಿಯ ಆಹಾರಗಳು ಮತ್ತು ಆರ್‌ಓ ನೀರನ್ನು ತ್ಯಜಿಸಿ ನಮ್ಮ ಮಕ್ಕಳ ಆರೋಗ್ಯವನ್ನು ರಕ್ಷಿಸೋಣ ,ಬಲಿಷ್ಠ ಭಾರತ ಕಟ್ಟೋಣ

ಬರಹ
ಡಾ. ಶ್ರೀಶೈಲ ಬದಾಮಿ
M. Pharm., PhD ಧಾರವಾಡ 9480640182

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ
June 28, 2026
7:21 AM
by: ಪ್ರಬಂಧ ಅಂಬುತೀರ್ಥ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಜೂನ್ 30ರೊಳಗೆ LPG e-KYC ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತ ? ಗ್ರಾಹಕರಿಗೆ ಮಹತ್ವದ ಎಚ್ಚರಿಕೆ
June 21, 2026
10:09 PM
by: ದ ರೂರಲ್ ಮಿರರ್.ಕಾಂ
ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!
June 21, 2026
3:51 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror