MIRROR FOCUS

ರೈತರು ತಮ್ಮ ಹೊಲದ ನಕ್ಷೆ ಏಕೆ ಇಟ್ಟುಕೊಳ್ಳಬೇಕು..? | ಹೊಲದ ನಕ್ಷೆಯನ್ನು ಬರೆಯುವುದಾದರೂ ಹೇಗೆ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮಲ್ಲಿನ ಅನೇಕ ರೈತರು ತಮ್ಮಲ್ಲಿರುವ ಹೊಲಗಳ ಸ್ಥಿತಿಗತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ತಮ್ಮ ಹೊಲದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವತ್ತಲೂ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಾಧಿಸುವತ್ತ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಈ ಯೋಜನೆಗೆ ಸಹಕಾರಿಯಾಗುವಂತೆ ನಮ್ಮ ಹೊಲದ ನಕ್ಷೆಯೊಂದನ್ನು ತಯಾರಿಸಲೇಬೇಕು.

Advertisement
Advertisement

ನಮ್ಮ ಹೊಲದ ನಕ್ಷೆಯಲ್ಲಿ ಇದಿಷ್ಟು ಇರಬೇಕು: 

  • ಹೊಲದ ದಿಕ್ಕುಗಳನ್ನು ತಿಳಿಸಬಹುದು. ಅದರ ಉದ್ದಗಲಗಳನ್ನು ಸ್ಪಷ್ಟವಾಗಿ ದಾಖಲಿಸಬಹುದು
  • ಹೊಲದ ಮೇಲ್ಮಣ್ಣು ಸವೆಯುತ್ತಿರುವ ಸ್ಥಳವನ್ನು ಹಾಗೂ ಹೊಲದಲ್ಲಿ ಬೀಳುವ ಮಳೆನೀರು ಹೊಲದಿಂದಾಚೆಗೆ ಹರಿದು ಹೋಗುವ ಪಥವನ್ನು ಗುರುತಿಸಬಹುದು.
  • ಅಳವಡಿಸಿಕೊಂಡಿರುವ ಕೃಷಿಪದ್ದತಿಯಿಂದ ಹೊಲದಲ್ಲಿರುವ ಮಣ್ಣು ಮತ್ತು ನೀರು ಮಾಲಿನ್ಯಗೊಳ್ಳುತ್ತಿರುವುದನ್ನು ಗಮನಿಸಬಹುದು
  • ಹೊಲದಲ್ಲಿನ ಪ್ರತಿಯೊಂದು ಕೋನಗಳಲ್ಲಾಗುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಬಹುದು
  • ಹೊಲವನ್ನು ಸುಧಾರಿಸುವತ್ತ ಮಾಡಬಹುದಾದ ಕ್ರಮಗಳನ್ನು ಕುರಿತು ಯೋಜನೆ ರೂಪಿಸಬಹುದು
  • ಹೊಲದಲ್ಲಿನ ಮಣ್ಣಿನ ವಿಧಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು.
  • ಹೊಲದಲ್ಲಿನ ಇಳಿಜಾರು ಪ್ರದೇಶವನ್ನು ಗುರುತಿಸಿ, ಆ ಇಳಿಜಾರಿನ ಕಾರಣ ಹೊಲದಿಂದ ಸವೆಯುತ್ತಿರುವ ಮೇಲ್ಮಣ್ಣು ಮತ್ತು ಹರಿದು ಹೊಲದಿಂದಾಚೆಗೆ ಪೋಲಾಗುತ್ತಿರುವ ಮಳೆನೀರು
  • ಇವುಗಳನ್ನು ಸಂರಕ್ಷಿಸುವತ್ತ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಬಹುದು
  • ಪ್ರತಿಯೊಂದು ಬೇಸಾಯ ಹಂಗಾಮಿನಲ್ಲಿ ಬೆಳೆಗಳ ಬದಲಾವಣೆಗಳತ್ತ ಆಲೋಚಿಸಬಹುದು
  • ಬೆಳೆಯುವ ಬೆಳೆಗಳಿಗೆ ಹಾಗೂ ಮಣ್ಣು ಜೀವಿಗಳಿಗೆ ಅಗತ್ಯವಾಗಿರುವ ಕಾಂಪೋಸ್ಟ್ ಮತ್ತಿತರ ಸಹಜ ಸಾವಯವ ಗೊಬ್ಬರಗಳನ್ನು ತಯಾರಿಸುವ ಸ್ಥಳಗಳನ್ನು ನಿರ್ಧರಿಸಬಹುದು
  • ಬೇಸಾಯದ ಅಂಗವೇ ದನದ ಅಥವಾ ಜಾನುವಾರುಗಳ ಕೊಟ್ಟಿಗೆಗಳು ಮತ್ತು ಉಪಕರಣಗಳನ್ನುಇರಿಸಲು ಅಗತ್ಯವಾಗಿರುವ ಕೋಣೆಗಳನ್ನು ನಿರ್ಮಿಸುವ ಸ್ಥಳವನ್ನು ನಿರ್ಧರಿಸಬಹುದು
  • ಹಾಗೆಯೇ, ಹೊಲದ ಬಂದೋಬಸ್ತಿಗಾಗಿ ಅಗತ್ಯ ಬೇಲಿಗಳನ್ನು ಹಾಕಿಕೊಳ್ಳಲು ಯೋಜನೆ ರೂಪಿಸಬಹುದು
  • ಮುಂದಿನ ದಿನಗಳಲ್ಲಿ ಹೊಲದ ಮೌಲ್ಯವನ್ನು ಹೆಚ್ಚಿಸುವ ಕ್ರಮಗಳ ಕುರಿತು ಯೋಜನೆಗಳನ್ನು ರೂಪಿಸಲು ನಮ್ಮ ಹೊಲದ ನಕ್ಷೆಯೊಂದನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಮಾಹಿತಿ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ

"ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…

1 hour ago

ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

22 hours ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

1 day ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

1 day ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago