Advertisement
MIRROR FOCUS

ರೈತರು ತಮ್ಮ ಹೊಲದ ನಕ್ಷೆ ಏಕೆ ಇಟ್ಟುಕೊಳ್ಳಬೇಕು..? | ಹೊಲದ ನಕ್ಷೆಯನ್ನು ಬರೆಯುವುದಾದರೂ ಹೇಗೆ?

Share

ನಮ್ಮಲ್ಲಿನ ಅನೇಕ ರೈತರು ತಮ್ಮಲ್ಲಿರುವ ಹೊಲಗಳ ಸ್ಥಿತಿಗತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ತಮ್ಮ ಹೊಲದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವತ್ತಲೂ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಾಧಿಸುವತ್ತ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಈ ಯೋಜನೆಗೆ ಸಹಕಾರಿಯಾಗುವಂತೆ ನಮ್ಮ ಹೊಲದ ನಕ್ಷೆಯೊಂದನ್ನು ತಯಾರಿಸಲೇಬೇಕು.

ನಮ್ಮ ಹೊಲದ ನಕ್ಷೆಯಲ್ಲಿ ಇದಿಷ್ಟು ಇರಬೇಕು: 

  • ಹೊಲದ ದಿಕ್ಕುಗಳನ್ನು ತಿಳಿಸಬಹುದು. ಅದರ ಉದ್ದಗಲಗಳನ್ನು ಸ್ಪಷ್ಟವಾಗಿ ದಾಖಲಿಸಬಹುದು
  • ಹೊಲದ ಮೇಲ್ಮಣ್ಣು ಸವೆಯುತ್ತಿರುವ ಸ್ಥಳವನ್ನು ಹಾಗೂ ಹೊಲದಲ್ಲಿ ಬೀಳುವ ಮಳೆನೀರು ಹೊಲದಿಂದಾಚೆಗೆ ಹರಿದು ಹೋಗುವ ಪಥವನ್ನು ಗುರುತಿಸಬಹುದು.
  • ಅಳವಡಿಸಿಕೊಂಡಿರುವ ಕೃಷಿಪದ್ದತಿಯಿಂದ ಹೊಲದಲ್ಲಿರುವ ಮಣ್ಣು ಮತ್ತು ನೀರು ಮಾಲಿನ್ಯಗೊಳ್ಳುತ್ತಿರುವುದನ್ನು ಗಮನಿಸಬಹುದು
  • ಹೊಲದಲ್ಲಿನ ಪ್ರತಿಯೊಂದು ಕೋನಗಳಲ್ಲಾಗುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಬಹುದು
  • ಹೊಲವನ್ನು ಸುಧಾರಿಸುವತ್ತ ಮಾಡಬಹುದಾದ ಕ್ರಮಗಳನ್ನು ಕುರಿತು ಯೋಜನೆ ರೂಪಿಸಬಹುದು
  • ಹೊಲದಲ್ಲಿನ ಮಣ್ಣಿನ ವಿಧಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು.
  • ಹೊಲದಲ್ಲಿನ ಇಳಿಜಾರು ಪ್ರದೇಶವನ್ನು ಗುರುತಿಸಿ, ಆ ಇಳಿಜಾರಿನ ಕಾರಣ ಹೊಲದಿಂದ ಸವೆಯುತ್ತಿರುವ ಮೇಲ್ಮಣ್ಣು ಮತ್ತು ಹರಿದು ಹೊಲದಿಂದಾಚೆಗೆ ಪೋಲಾಗುತ್ತಿರುವ ಮಳೆನೀರು
  • ಇವುಗಳನ್ನು ಸಂರಕ್ಷಿಸುವತ್ತ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಬಹುದು
  • ಪ್ರತಿಯೊಂದು ಬೇಸಾಯ ಹಂಗಾಮಿನಲ್ಲಿ ಬೆಳೆಗಳ ಬದಲಾವಣೆಗಳತ್ತ ಆಲೋಚಿಸಬಹುದು
  • ಬೆಳೆಯುವ ಬೆಳೆಗಳಿಗೆ ಹಾಗೂ ಮಣ್ಣು ಜೀವಿಗಳಿಗೆ ಅಗತ್ಯವಾಗಿರುವ ಕಾಂಪೋಸ್ಟ್ ಮತ್ತಿತರ ಸಹಜ ಸಾವಯವ ಗೊಬ್ಬರಗಳನ್ನು ತಯಾರಿಸುವ ಸ್ಥಳಗಳನ್ನು ನಿರ್ಧರಿಸಬಹುದು
  • ಬೇಸಾಯದ ಅಂಗವೇ ದನದ ಅಥವಾ ಜಾನುವಾರುಗಳ ಕೊಟ್ಟಿಗೆಗಳು ಮತ್ತು ಉಪಕರಣಗಳನ್ನುಇರಿಸಲು ಅಗತ್ಯವಾಗಿರುವ ಕೋಣೆಗಳನ್ನು ನಿರ್ಮಿಸುವ ಸ್ಥಳವನ್ನು ನಿರ್ಧರಿಸಬಹುದು
  • ಹಾಗೆಯೇ, ಹೊಲದ ಬಂದೋಬಸ್ತಿಗಾಗಿ ಅಗತ್ಯ ಬೇಲಿಗಳನ್ನು ಹಾಕಿಕೊಳ್ಳಲು ಯೋಜನೆ ರೂಪಿಸಬಹುದು
  • ಮುಂದಿನ ದಿನಗಳಲ್ಲಿ ಹೊಲದ ಮೌಲ್ಯವನ್ನು ಹೆಚ್ಚಿಸುವ ಕ್ರಮಗಳ ಕುರಿತು ಯೋಜನೆಗಳನ್ನು ರೂಪಿಸಲು ನಮ್ಮ ಹೊಲದ ನಕ್ಷೆಯೊಂದನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಮಾಹಿತಿ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಬಾಳೆಬರೆ ಘಾಟಿಯಲ್ಲಿ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ತಾತ್ಕಾಲಿಕ ನಿಷೇಧಿಸಲಾಗಿದೆ. ಪ್ರಯಾಣಿಕರು ಪರ್ಯಾಯ…

1 minute ago

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

15 hours ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

15 hours ago

ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ

ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…

15 hours ago

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…

15 hours ago

2026 ಜೂನ್‌ನಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮುನ್ಸೂಚನೆ | ಪಶ್ಚಿಮ ಘಟ್ಟ-ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…

1 day ago