Advertisement
MIRROR FOCUS

ರೈತರು ತಮ್ಮ ಹೊಲದ ನಕ್ಷೆ ಏಕೆ ಇಟ್ಟುಕೊಳ್ಳಬೇಕು..? | ಹೊಲದ ನಕ್ಷೆಯನ್ನು ಬರೆಯುವುದಾದರೂ ಹೇಗೆ?

Share

ನಮ್ಮಲ್ಲಿನ ಅನೇಕ ರೈತರು ತಮ್ಮಲ್ಲಿರುವ ಹೊಲಗಳ ಸ್ಥಿತಿಗತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ತಮ್ಮ ಹೊಲದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವತ್ತಲೂ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಾಧಿಸುವತ್ತ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಈ ಯೋಜನೆಗೆ ಸಹಕಾರಿಯಾಗುವಂತೆ ನಮ್ಮ ಹೊಲದ ನಕ್ಷೆಯೊಂದನ್ನು ತಯಾರಿಸಲೇಬೇಕು.

ನಮ್ಮ ಹೊಲದ ನಕ್ಷೆಯಲ್ಲಿ ಇದಿಷ್ಟು ಇರಬೇಕು: 

  • ಹೊಲದ ದಿಕ್ಕುಗಳನ್ನು ತಿಳಿಸಬಹುದು. ಅದರ ಉದ್ದಗಲಗಳನ್ನು ಸ್ಪಷ್ಟವಾಗಿ ದಾಖಲಿಸಬಹುದು
  • ಹೊಲದ ಮೇಲ್ಮಣ್ಣು ಸವೆಯುತ್ತಿರುವ ಸ್ಥಳವನ್ನು ಹಾಗೂ ಹೊಲದಲ್ಲಿ ಬೀಳುವ ಮಳೆನೀರು ಹೊಲದಿಂದಾಚೆಗೆ ಹರಿದು ಹೋಗುವ ಪಥವನ್ನು ಗುರುತಿಸಬಹುದು.
  • ಅಳವಡಿಸಿಕೊಂಡಿರುವ ಕೃಷಿಪದ್ದತಿಯಿಂದ ಹೊಲದಲ್ಲಿರುವ ಮಣ್ಣು ಮತ್ತು ನೀರು ಮಾಲಿನ್ಯಗೊಳ್ಳುತ್ತಿರುವುದನ್ನು ಗಮನಿಸಬಹುದು
  • ಹೊಲದಲ್ಲಿನ ಪ್ರತಿಯೊಂದು ಕೋನಗಳಲ್ಲಾಗುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಬಹುದು
  • ಹೊಲವನ್ನು ಸುಧಾರಿಸುವತ್ತ ಮಾಡಬಹುದಾದ ಕ್ರಮಗಳನ್ನು ಕುರಿತು ಯೋಜನೆ ರೂಪಿಸಬಹುದು
  • ಹೊಲದಲ್ಲಿನ ಮಣ್ಣಿನ ವಿಧಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು.
  • ಹೊಲದಲ್ಲಿನ ಇಳಿಜಾರು ಪ್ರದೇಶವನ್ನು ಗುರುತಿಸಿ, ಆ ಇಳಿಜಾರಿನ ಕಾರಣ ಹೊಲದಿಂದ ಸವೆಯುತ್ತಿರುವ ಮೇಲ್ಮಣ್ಣು ಮತ್ತು ಹರಿದು ಹೊಲದಿಂದಾಚೆಗೆ ಪೋಲಾಗುತ್ತಿರುವ ಮಳೆನೀರು
  • ಇವುಗಳನ್ನು ಸಂರಕ್ಷಿಸುವತ್ತ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಬಹುದು
  • ಪ್ರತಿಯೊಂದು ಬೇಸಾಯ ಹಂಗಾಮಿನಲ್ಲಿ ಬೆಳೆಗಳ ಬದಲಾವಣೆಗಳತ್ತ ಆಲೋಚಿಸಬಹುದು
  • ಬೆಳೆಯುವ ಬೆಳೆಗಳಿಗೆ ಹಾಗೂ ಮಣ್ಣು ಜೀವಿಗಳಿಗೆ ಅಗತ್ಯವಾಗಿರುವ ಕಾಂಪೋಸ್ಟ್ ಮತ್ತಿತರ ಸಹಜ ಸಾವಯವ ಗೊಬ್ಬರಗಳನ್ನು ತಯಾರಿಸುವ ಸ್ಥಳಗಳನ್ನು ನಿರ್ಧರಿಸಬಹುದು
  • ಬೇಸಾಯದ ಅಂಗವೇ ದನದ ಅಥವಾ ಜಾನುವಾರುಗಳ ಕೊಟ್ಟಿಗೆಗಳು ಮತ್ತು ಉಪಕರಣಗಳನ್ನುಇರಿಸಲು ಅಗತ್ಯವಾಗಿರುವ ಕೋಣೆಗಳನ್ನು ನಿರ್ಮಿಸುವ ಸ್ಥಳವನ್ನು ನಿರ್ಧರಿಸಬಹುದು
  • ಹಾಗೆಯೇ, ಹೊಲದ ಬಂದೋಬಸ್ತಿಗಾಗಿ ಅಗತ್ಯ ಬೇಲಿಗಳನ್ನು ಹಾಕಿಕೊಳ್ಳಲು ಯೋಜನೆ ರೂಪಿಸಬಹುದು
  • ಮುಂದಿನ ದಿನಗಳಲ್ಲಿ ಹೊಲದ ಮೌಲ್ಯವನ್ನು ಹೆಚ್ಚಿಸುವ ಕ್ರಮಗಳ ಕುರಿತು ಯೋಜನೆಗಳನ್ನು ರೂಪಿಸಲು ನಮ್ಮ ಹೊಲದ ನಕ್ಷೆಯೊಂದನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಮಾಹಿತಿ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

4 hours ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

13 hours ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

14 hours ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

14 hours ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

1 day ago

ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ

ದೇಶದ ವಿವಿದೆಡೆ ಮಾರ್ಚ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್‌ನಲ್ಲಿ ಅಸಾಮಾನ್ಯ ಹವಾಮಾನದಿಂದ…

1 day ago