Advertisement
The Rural Mirror ಕಾಳಜಿ

ಆನೆ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ ಗ್ರಾಮೀಣ ಜನರು | ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ ಕೃಷಿಕರು.. | ಆಡಳಿತ , ಜನಪ್ರತಿನಿಧಿಗಳಿಗೆ ಏಕೆ ಅರ್ಥವಾಗುತ್ತಿಲ್ಲ….!?

Share

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ. ಸೋಮವಾರ ಮುಂಜಾನೆ ಇಬ್ಬರು ಮೃತಪಟ್ಟರೆ, ಸುಳ್ಯ ತಾಲೂಕಿನಲ್ಲಿ ಆನೆ ದಾಳಿಗೆ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರು ಇದ್ದಾರೆ. ಕೃಷಿ ನಾಶ ಹೊಂದಿದವರು ಇದ್ದಾರೆ. ಆದರೆ ಇದುವರೆಗೂ ಆನೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಯಶಸ್ಸಾಗಿಲ್ಲ.( ಈ ವರದಿಯ ಕೆಳಭಾಗದಲ್ಲಿ ಆನೆ ದಾಳಿಗೆ ಸಂಬಂಧಿಸಿದ ಇತರ ಲಿಂಕ್‌ ಇವೆ ಗಮನಿಸಿ…)

ಕಾಡಾನೆ ದಾಳಿಗೆ ಕಡಬ ತಾಲೂಕಿನ ರೆಂಜಿಲಾಡಿ ಬಳಿ ಇಬ್ಬರು ಬಲಿಯಾಗಿದ್ದಾರೆ. ಕಳೆದ ಕೆಲವು ಸಮಯದ ಹಿಂದೆ ಕೊಲ್ಲಮೊಗ್ರದಲ್ಲಿ ಕಾಡಾನೆ ದಾಳಿಗೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದರು. ಅದಕ್ಕೂ ಕೆಲವು ಸಮಯದ ಹಿಂದೆ ಕೊಲ್ಲಮೊಗ್ರದ ಬಳಿ ಕುಡಿಯುವ ನೀರಿನ ಪೈಪ್‌ ದುರಸ್ತಿಗೆ ಹೋದಾಗ ಕೃಷಿಕರೊಬ್ಬರು ಆನೆ ದಾಳಿಗೆ ತುತ್ತಾದರು. ಅದಕ್ಕೂ ಹಿಂದೆ ಕೃಷಿಕರೊಬ್ಬರು ತೋಟಕ್ಕೆ ನೀರುಣಿಸುವ ಸಂದರ್ಭ ಆನೆ ದಾಳಿಗೆ ತುತ್ತಾದರು…..! ಹೀಗೇ ಹಲವು ಪ್ರಕರಣಗಳು ಸುಳ್ಯ ತಾಲೂಕಿನಲ್ಲಿ ನಡೆದಿದೆ. ಆದರೆ ಆಡಳಿತವು ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಮೃತಪಟ್ಟ ಕುಟುಂಬದ ಮನೆಗಳಿಗೆ ತೆರಳಿ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಬೇರೇನೂ ಆಗಿಲ್ಲ ಎನ್ನುವುದು  ಜನರ ಆರೋಪ. ಸೋಮವಾರ ಕಡಬದಲ್ಲೂ ಅದೇ ಆರೋಪ ವ್ಯಕ್ತವಾಗಿದೆ.

Advertisement

ಸುಳ್ಯ ತಾಲೂಕಿನ ಮಂಡೆಕೋಲು ಬಳಿಯಲ್ಲಿ ಕಾಡಾನೆ ಹಾವಳಿ ಇದ್ದಾಗ ಅಲ್ಲಿನ ಶಾಲಾ ಬಾಲಕಿಯೊಬ್ಬಳು ಪ್ರಧಾನಿಗಳ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಹಿಂಬರಹವೂ ಬಂದು ಈ ಬಗ್ಗೆ ಕ್ರಮ ಹಾಗೂ ಪರಿಹಾರ ಮಾರ್ಗಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಆದರೆ ಆ ಪತ್ರದ ಬಳಿಕ ಯಾವ ಕ್ರಮಗಳೂ ನಡೆದಿರಲಿಲ್ಲ.  ಅದರ ಬದಲಾಗಿ  “ಪ್ರಧಾನಿಗಳಿಗೆ ಪತ್ರ ಬರೆದರೆ ಆಗುವುದಿಲ್ಲ…” ಎಂದು ಸ್ಥಳೀಯ ಜನಪ್ರತಿನಿಧಿಗಳು ಉತ್ತರಿಸಿದ್ದರು….!. ಈಚೆಗೆ ಕಾಡಾನೆ ಹಾವಳಿ ತಡೆಗೆ ಕಾಂಕ್ರೀಟ್‌ ಬೇಲಿ, ಜೇನುಪೆಟ್ಟಿಗೆ ಪ್ರಯೋಗ, ಸೋಲಾರ್‌ ಬೇಲಿ, ಆನೆ ಕಂದಕ.. ಹೀಗೇ ಹಲವು ಪ್ರಯತ್ನ ಇಲಾಖೆ ಕಡೆಯಿಂದ ನಡೆಯುತ್ತದೆ. ಆದರೆ ಜನಪ್ರತಿನಿಧಿಗಳು ಇದರ ಫಾಲೋಅಪ್‌ ಆಗಲಿ, ಈ ಬಗ್ಗೆ ಮುಂದಿನ ಹೆಜ್ಜೆಯನ್ನಾಗಲಿ ಮಾಡಿದ ಉದಾಹರಣೆ ಇಲ್ಲ ಎನ್ನುವುದು  ಜನರ ಆರೋಪ.

ಕಾಡಾನೆ ದಾಳಿಯಿಂದ ಕೃಷಿಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಸುಳ್ಯ ತಾಲೂಕಿನಲ್ಲಿ ಕೃಷಿ ತೋಟಗಳಿಗೆ ದಾಳಿ ಮಾಡುವುದೂ ಹೆಚ್ಚಾಗಿದೆ. ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ದಂಡು ಇದೀಗ ಹಗಲಲ್ಲೇ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು, ಭೀತಿ ತಂದೊಡ್ಡಿದೆ. ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ, ಮಂಡೆಕೋಲು, ಅಜ್ಜಾವರ, ಕೊಲ್ಲಮೊಗ್ರು, ಹರಿಹರ ಪಲ್ಲತಡ್ಕ, ಅರಂತೋಡು, ತೊಡಿಕಾನ, ಕಡಬ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಇದೆ. ಬೆಳ್ತಂಗಡಿ ತಾಲೂಕಿನ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಶಿಶಿಲ, ನಿಡ್ಲೆ, ಶಿಬಾಜೆ, ಹತ್ಯಡ್ಕ ಗ್ರಾಮಗಳಲ್ಲಿ ಆನೆ ಕಾಟ ಇದೆ.

Advertisement

ಜಿಲ್ಲೆಯ ಅಲ್ಲಲ್ಲಿ ಕಾಡಾನೆ ಹಾವಳಿ ಇದ್ದರೂ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇಲಾಖೆಗಳು ಅವರ ಮಿತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಜತೆಗೆ ಕಾಡಾನೆ ಓಡಿಸಲೂ ಆಗಮಿಸುತ್ತಾರೆ. ಆದರೆ ಅವರಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ಇಷ್ಟು ಸಮಯವಾದರೂ ಎಚ್ಚೆತ್ತಿಲ್ಲ…!.  ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಆಡಳಿತ ವ್ಯವಸ್ಥೆ ಅನುದಾನದ ಕೊರತೆಗಳು ಕಾಡಾನೆ ಮಾತ್ರವಲ್ಲ ಅನೇಕ ಜನಪರವಾದ ಕೆಲಸ ನಿರ್ವಹಿಸಲು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳ ನಿವಾರಿಸಿಲು ಕಷ್ಟವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಏಕೆ ಈ ಸಮಸ್ಯೆಗೆ ಪರಿಹಾರದ ದೊರಕಿಸಲು, ಜನರ ಜೊತೆ ಇದುವರೆಗೂ ಸಂವಾದ ನಡೆಸಲು ಆಗಿಲ್ಲ ಎನ್ನುವುದೇ ಪ್ರಶ್ನೆಯಾಗಿದೆ.

ಕಲ್ಮಕಾರು : ಆನೆ ದಾಳಿಗೊಳಗಾದ ಕೃಷಿಕ ನಿಧನ

Advertisement

ಕೃಷಿಗೆ ಆನೆ ಹಾವಳಿ | ಕೃಷಿಕರ ಮೇಲೂ ದಾಳಿ | ಪರಿಹಾರ ಹೇಗೆ ? ಏನು ? | ಕೃಷಿಕರ ಸಲಹೆ ಏನು ? |

Advertisement

ಬಾಳುಗೋಡು | ತೋಟಕ್ಕೆ ಆನೆ ದಾಳಿ, ಅಪಾರ ನಷ್ಟ |

Advertisement

ಗಡಿ ಗ್ರಾಮದಲ್ಲಿ ತೀವ್ರಗೊಂಡ ಆನೆ ಹಾವಳಿ – ಆತಂಕದಲ್ಲಿ ಜನತೆ

Advertisement

ಆನೆ ಹಾವಳಿ ಕುರಿತು ಚರ್ಚಿಸಲು ಸಭೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ

ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…

7 hours ago

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…

7 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರ್ತಕರ ಮನವಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ಹಿನ್ನೆಲೆಯಲ್ಲಿ ಶಿರಸಿಯ ವರ್ತಕರು ಸಂಸದ ವಿಶ್ವೇಶ್ವರ ಹೆಗಡೆ…

11 hours ago

ಹವಾಮಾನ ವರದಿ | 01-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸ್ವಲ್ಪ ಇಳಿಕೆ – ಜುಲೈ 4ರಿಂದ ಮತ್ತೆ ಚುರುಕು!

ಜುಲೈ 2 ಮತ್ತು 3ರಂದು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗುವ…

15 hours ago

ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ

ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್‌ ಜಾಮ್‌ಗೆ ವಿಶೇಷ ಸಂಚಾರ ನಿರ್ವಹಣಾ…

18 hours ago

ಜುಲೈನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸಾಧ್ಯತೆ : ಐಎಂಡಿ ಎಚ್ಚರಿಕೆ

ಜುಲೈ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ…

19 hours ago