ದೆಹಲಿ ವಾಯುಮಾಲಿನ್ಯದ ರೀತಿ ಬಂದರು ನಗರಿ ಮಂಗಳೂರು ಆಗಲಿದೆಯಾ..? | ಅರಣ್ಯ ನಾಶದಿಂದ ಬಂದರು ನಗರಿಯಲ್ಲಿ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..! |

November 22, 2023
1:07 PM
ಮಂಗಳೂರು ಜಿಲ್ಲೆಯಲ್ಲೂ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಬೇಕಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಪರಿಸರ ನಾಶವಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಈಚೆಗೆ ತಾಪಮಾನ ಅಧಿಕವಾಗುತ್ತಿದೆ.

ಬಂದರು ನಗರಿ(Port City) ಮಂಗಳೂರು(Mangaluru). ಇದೊಂದು ಸೌಂದರ್ಯದ ಗಣಿ, ಹಾಗೇ ಪ್ರಕೃತಿ, ಮಳೆ, ಸಮುದ್ರ(Beach), ದೊಡ್ಡ ಸಿಟಿ, ಸಂಸ್ಕೃತಿ, ಕೃಷಿಯ ನಾಡು(Agriculture), ಮತ್ಸೋದ್ಯಮ(Fishery), ತುಳು ಸಿನಿಮೋದ್ಯಮ(Tulu film industry), ಆರ್ಥಿಕವಾಗಿ ಬಲಿಷ್ಠವಾಗಿರುವ ಪಟ್ಟಣ. ಎಲ್ಲಾ ಇದೆ….!. ಬುದ್ದಿವಂತರರ ನಾಡು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ಇಲ್ಲಿ ಪ್ರಕೃತಿಯ ಕಡೆಗೆ(Enivironment) ಹೆಚ್ಚಿನ ಕಾಳಜಿ ತೋರದ ಪರಿಣಾಮಗಳು ಗೋಚರವಾಗಲು ಆರಂಭವಾಗುತ್ತಿದೆ. ಇ ತ್ತೀಚೆಗೆ ನಡೆದ ಸರ್ವೆಯೊಂದರಲ್ಲಿ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದ್ದು ಜೀವಸಂಕುಲದ ವಿನಾಶಕ್ಕೆ(Destruction of biota) ಹಾದಿ ಮಾಡಿಕೊಟ್ಟಿದೆ.

Advertisement

ಕಳೆದ ಮೂರು ದಶಕಗಳ ಹಿಂದೆ ಪರಶುರಾಮ ಸೃಷ್ಟಿಯ ತುಳುನಾಡಿನ ಪ್ರಮುಖ ನಗರಿ ಮಂಗಳೂರು ಪ್ರಕೃತಿ ಮಾತೆಯ ಹಸಿರು ಹೊದಿಕೆಯಲ್ಲಿ ಹೊದ್ದು ಮಲಗಿತ್ತು. ಕಣ್ಣು ಹಾಯಿದಷ್ಟು ದೂರ ಹಸಿರೇ ಹಸಿರಾಗಿತ್ತು, ನೀರು ಯಥೇಚ್ಛವಾಗಿದ್ದರೆ, ಮಣ್ಣು ಸಮೃದ್ದವಾಗಿತ್ತು. ಇದರಿಂದ ಇಲ್ಲಿನ ಪರಿಸರ ಕೂಡ ಅಷ್ಟೇ ತಂಪಾಗಿತ್ತು. ಆದರೆ ಇದೀಗ ಮಂಗಳೂರಿನಲ್ಲೈ ತಾಪಮಾನ ಏರಿ ಭೂಮಿ ಬಿಸಿಯಾಗುತ್ತಿದ್ದು, ನೀರು ಕಡಿಮೆಯಾಗುವ ಭೀತಿಯಲ್ಲಿದೆ.ಇದಕ್ಕೆಲ್ಲಾ ಪ್ರಮುಖ ಕಾರಣ ಪರಿಸರ, ಅರಣ್ಯ ಭೂಮಿ ಬಲಿಯಾಗಿರುವುದು. ಎಲ್ಲಾ ಕಡೆ ಅರಣ್ಯವನ್ನು ರಕ್ಷಿಸಿ, ಪರಿಸರ ಸಂರಕ್ಷಿಸಿ ಎಂಬ ಬರಹಗಳು ಕೇವಲ ಬ್ಯಾನರ್, ಪ್ಲೆಕ್ಸ್ ಗಳಿಗೆ ಸೀಮಿತವಾದಂತಿದೆ. ಅರಣ್ಯವಿಲ್ಲದಿದ್ದರೆ ನಾವಿಲ್ಲ ಎಂಬ ಮಾತಿನ ಸತ್ಯವಾಗಿದ್ದರೂ, ಅರಣ್ಯವನ್ನುಳಿಸಲು ಆಡಳಿತ ವ್ಯವಸ್ಥೆ ಜಾಣ ಕುರುಡನಂತಾಗಿದೆ.

ತಾಪಮಾನ ಹೆಚ್ಚಳ, ವಿಷಪೂರಿತ ವಾತಾವರಣ ಮೊದಲಾದ ಸಮಸ್ಯೆಗಳನ್ನು ಇಂದು ಎದುರಿಸುತ್ತಿರುವ ದೂರದ ದೆಹಲಿ, ಬೆಂಗಳೂರು ಮೊದಲಾದ ನಗರಗಳ ಸಾಲಿಗೆ ಮಂಗಳೂರು ಕೂಡಾ ಶೀಘ್ರವೇ ಸೇರ್ಪಡೆಗೊಳ್ಳಲಿದೆ. ದಿನಂದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಕರಾವಳಿ ಪ್ರದೇಶ ಹಾಗೂ ಮಲೆನಾಡು ತಪ್ಪಲು ಭಾಗದಲ್ಲಿ ತಾಪಮಾನ 32 ಡಿಗ್ರಿ ಹೆಚ್ಚಾದ ಬಳಿಕ ಮಳೆ ಬರುತ್ತಿದ್ದ ಕಾಲ ಇತ್ತು. ಆದರೆ ಈಚೆಗೆ 40 ಡಿಗ್ರಿಯವರೆಗೂ ತಾಪಮಾನ ಏರಿಕೆಯಾದರೂ ಮಳೆಯಾಗುತ್ತಿಲ್ಲ. ವಾತಾವರಣದ ಕಲುಷಿತವು ಗ್ರಾಮೀಣ ಭಾಗದಲ್ಲೂ ಮಿತಿಗಿಂತ ಹೆಚ್ಚು ದಾಖಲಿಸುತ್ತಿದೆ.

ಈಚೆಗೆ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಟ್ರೀ ಕೌಂಟ್ ಮಂಗಳೂರು ಎಂಬ ಪುಸ್ತಕವನ್ನು ಹೊರತರಲಾಗಿದೆ. ನಿಟ್ಟೆ ವಿಶ್ವವಿದ್ಯಾಲಯದ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತ ಹೆಗ್ಡೆ ಇವರ ನೇತೃತ್ವದಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ನಗರದಲ್ಲಿ ಮರಗಳ ಲೆಕ್ಕ ಹಾಕಲಾಗಿತ್ತು. ಈ ಲೆಕ್ಕಚಾರದಲ್ಲಿ, ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಒಟ್ಟು 60 ವಾರ್ಡ್ ನ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೇಕಡ 6.24 ರಷ್ಟು ಮಾತ್ರ ಮರಗಳಿವೆ, ಅದರಲ್ಲಿ 19,171 ವಿವಿಧ ಜಾತಿಯ ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು ಶೇಕಡ 41.09 ರಷ್ಟು ಮರಗಳು ಇದೆ.

ಮಂಗಳೂರು ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು ಈ ಭಾಗದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶೇಕಡ ಮೂರರಷ್ಟು ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಇಲ್ಲದೆ ಕಾರಣ ಇಲ್ಲಿ ಸರ್ವೆ ಪ್ರಕಾರ ತಾಪಮಾನ ಕಡಿಮೆಯಾಗಿದೆ. ಮಂಗಳೂರಿನಲ್ಲಿ ಬಿಸಿಲ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನೆಂಬ ಸತ್ಯವನ್ನು ನಾವು ಅರಿತುಕೊಳ್ಳುವಲ್ಲಿ ಸೋತಿದ್ದೇವೆ.

ಅರಣ್ಯದ ರಕ್ಷಣೆಗಾಗಿ ಇರುವ ಅರಣ್ಯ ಇಲಾಖೆ ಇದ್ದೂ ಇಲ್ಲದಂತಾದರೆ, ಸರಕಾರ ತನ್ನ ಲಾಭಗಳಿಸುವಿಕೆಯ, ಮತ ಎಣಿಕೆಯ ದೃಷ್ಟಿಕೋನದಲ್ಲಿದೆಯೇ ವಿನ:ಪ್ರಕೃತಿಯನ್ನು ರಕ್ಷಿಸುವ ಬಗ್ಗೆ ಯಾವ ಗಂಭೀರ ಚಿಂತನೆಯನ್ನೂ ನಡೆಸುತ್ತಿಲ್ಲ.ಮರಗಳ ನಾಶದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯ ಇದೆ.

Port City Mangaluru, a coastal district is said to be the land of the most intelligent. But lately it seems that people here are lacking in intelligence. A huge disaster will happen in front of the people who do not show much concern towards the environment. Yes, in a recent survey (report), this shocking information has come to light, which has led to the destruction of biota.

(ಮೂಲ – ಡಿಜಿಟಲ್‌ ಮೀಡಿಯಾ )

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ
April 28, 2025
6:49 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
April 28, 2025
6:44 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group