Advertisement
ಸುದ್ದಿಗಳು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳು ಯಾವುದೆಲ್ಲಾ…?

Share

ಚಳಿಗಾಲದಲ್ಲಿ ನಮ್ಮ ದೇಹದಲ್ಲಿಬದಲಾವಣೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಬೆಳಿಗ್ಗೆ ಚಳಿಯಾಗಿ ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣದ ಜೊತೆಗೆ ವರುಣನ ಅರ್ಭಟವೂ ಇರುತ್ತದೆ. ಈ ವಾತರಣದ ಬದಲಾವಣೆಯಿಂದ  ಶೀತ ತಲೆನೋವು, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರ ಜೊತೆಗೇ ಕೈ ಕಾಲುಗಳ ಚರ್ಮಗಳು ಸುಕ್ಕು ಕಟ್ಟುವುದು, ತುಟಿ ಒಡೆಯುವುದು, ಬಾಯಾರಿಕೆ ಇತ್ಯಾದಿ ತೊಂದರೆಗಳ ಕಾಣ ಸಿಗುತ್ತದೆ. ಇದಕ್ಕೆಲ್ಲ ಕಾರಣ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುವುದು. ನಾವು ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುತ್ತದೆ..

ಚಳಿಗಾಲದಲ್ಲಿ ಉತ್ತಮ ಹಣ್ಣುಗಳ ಸೇವನೆ. ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ ತರುತ್ತವೆ. ಜೊತೆಗೆ ಋತುಮಾನಕ್ಕೆ ಅನುಗುಣವಾಗಿ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಯಾವೆಲ್ಲ ಹಣ್ಣು ಸೇವನೆ ಉತ್ತಮ:

  • ಸೇಬು: ಇದರಲ್ಲಿ ಪೆಕ್ಟನ್‍ನಂತಹ ಆಹಾರದ ನಾರಿನಾಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯಕ. ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೂ ನೆರವಾಗುತ್ತದೆ.
  • ಸ್ಟ್ರಾಬೆರಿ: ಇದರಲ್ಲಿ ರಾಸ್‍ಪ್ಟೆರಿಗಳಂತಹ ಬೆರ್ರಿಗಳಿ ಆಂಟಿಆಕ್ಸಿಡೆಂಟ್, ಫೈಬರ್, ಜೀವಸತ್ವಗಳು ಸೇರಿ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಚಯಾಪಚಯ ಸುಧಾರಿಸಲು ನೆರವಾಗುತ್ತದೆ.
  • ಕಿತ್ತಳೆ ಹಣ್ಣು: ಇದರಲ್ಲಿ ವಿಟಮಿನ್ ಸಿ, ಪೈಬರ್, ಆಂಟಿಆಕ್ಸಿಡೆಂಟಿವ್ ಗಳು ಹೇರಳವಾಗಿರುತ್ತದೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
  • ದಾಳಿಂಬೆ: ಇದರಲ್ಲಿ ಕಬ್ಬಿಣದಂತಹ ಖನಿಜಗಳು, ಫಾಲಿಫಿನಾಲ್ಸ್, ವಿಟಮಿನ್ ಸಿ ಯಂತಹ ಆಂಟಿಆಕ್ಸಿಡೆಂಟ್‍ಗಳು ಸಮೃದ್ಧವಾಗಿವೆ.
  • ಕೀವಿ ಹಣ್ಣು: ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೈಬರ್‍ನ ಪ್ರಬಲ ಮೂಲವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್‍ಗಳು, ಅಗತ್ಯ ಪೋಷಕಾಂಶಗಳು ತುಂಬಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚಯಾಪಚಯ ಆರೋಗ್ಯ ಬಲಪಡಿಸಲು ನೆರವಾಗುತ್ತದೆ.
  • ಬಾಳೆಹಣ್ಣು: ಇದರಲ್ಲಿ ಪ್ರೋಟೀನ್, ಪೈಬರ್ ಹಾಗೂ ಪೈಬರ್ ಖನಿಜಗಳಿಂದ ಕೂಡಿದೆ. ಇದು ಚಳಿಗಾಲದಲ್ಲಿ ದೇಹಕ್ಕೆ ಒಳ್ಳೆಯ ಆಹಾರವಾಗಿದೆ.
  • ದ್ರಾಕ್ಷಿ: ಇದು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು, ರೆಸ್ವೆರಾಟ್ರೋಲ್‍ನಮತಹ ಆಂಟಿಆಕ್ಸಿಡೆಂಟ್‍ಗಳು ವಿವಿಧ ರೀತಿಯಲ್ಲಿ ಆರೋಗ್ಯವೃದ್ಧಿಗೆ ಸಹಾಯಾ ಮಾಡುತ್ತದೆ.
  • ಪೇರಳೆ: ಇದರಲ್ಲಿ ವಿಟಮೀನ್ ಸಿ ಅಧಿಕವಾಗಿರುತ್ತದೆ. ಇದು ಆಹಾರದ ಪೈಬರ್ ಅನ್ನು ಹೊಂದಿದೆ. ಹೀಗಾಗಿ ಇದು ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಕಷ್ಟು ಸಹಾಯ ಮಾಡುತ್ತದೆ.

ಈ ಹಣ್ಣುಗಳಿಗೆ ಹೆಚ್ಚು ಖರ್ಚುಗಳಿಲ್ಲ. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಾದಾಗಿದೆ. ಆದುರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ಮಾತಿನಂತೆ. ಬದಲಾಗುತ್ತಿರುವ ಈ ವಾತಾವರಣಕ್ಕೆ ತಕ್ಕಂತೆ ಆಹಾರದಲ್ಲೂ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

15 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

17 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

17 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

20 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago