ಕಲಿತ ವಿದ್ಯೆಯಿಂದ ಬದುಕು ಕಟ್ಟಿದ ಮಹಿಳೆ | ಕಷ್ಟವನ್ನು ಮೆಟ್ಟಿ ನಿಂತು ಬದುಕು ಕಟ್ಟಿದ ಮಹಿಳೆಯ ಕತೆ.. |

October 6, 2023
3:24 PM
ಇಬ್ಬರು ಮಕ್ಕಳ ತಾಯಿ ಹರಿಣಾಕ್ಷಿ ಅವರು ಆಯುರ್ವದೇ ಥೆರಪಿಸ್ಟ್‌ ಆಗಿ ತರಬೇತಿ ಪಡೆದವರು. ಅನಿವಾರ್ಯವಾಗಿ ಮನೆ ಸ್ಥಳಾಂತರ ಮಾಡಿದ ಬಳಿಕ ಬದುಕು ಕಟ್ಟಿಕೊಳ್ಳಲು ತೆಂಗಿನಕಾಯಿ ಸುಲಿಯುವ ಕಾಯಕದಲ್ಲಿ ತೊಡಗಿದರು.ಅವರ ಬದುಕಿನ ಸಾಹಸ ಮಾದರಿಯಾದ್ದು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಬದುಕಿನಲ್ಲಿ ಗೆದ್ದಿದ್ದಾರೆ. ಓದಿದ ವಿದ್ಯೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಕಲಿತ ವಿದ್ಯೆ ಉಪಯೋಗಕ್ಕೆ ಬಂದಿದೆ. ಇಂತಹ ಸಾಲಿನಲ್ಲಿ ಮಹಿಳೆಯೊಬ್ಬರು ಇದ್ದಾರೆ.ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದ ಈ ಮಹಿಳೆ, ಬದುಕು ಕಟ್ಟುವ ಸಮಯದಲ್ಲಿ ಆಯ್ಕೆ ಮಾಡಿದ್ದು ತೆಂಗಿನ ಕಾಯಿ(Coconut) ಸುಲಿಯುವ ಕಾಯಕ. ಈಗ ಅರ್ಧ ದಿನದಲ್ಲಿ ಒಂದು ಸಾವಿರ ತೆಂಗಿನ ಕಾಯಿ ಸುಲಿಯಬಲ್ಲರು. ಇಬ್ಬರು ಮಕ್ಕಳ ಸಹಿತ ಕುಟುಂಬವನ್ನು ಸಾಕುತ್ತಿದ್ದಾರೆ.

ಮೂಲತಃ ಮಡಿಕೇರಿಯವರಾದ 40 ವರ್ಷದ ಹರಿಣಾಕ್ಷಿ, ಪ್ರಸ್ತುತ ಕಾಸರಗೋಡಿನ ವಾಣಿನಗರದಲ್ಲಿ ವಾಸಿಸುತ್ತಿದ್ದಾರೆ. ಮದುವೆಯಾದ ನಂತರ ವೈಯಕ್ತಿಕ ಕಾರಣಗಳಿಂದ ಮಕ್ಕಳೊಂದಿಗೆ ಕಾಸರಗೋಡು ವಾಣೀನಗರಕ್ಕೆ ಬಂದು ನೆಲೆಸಿದ್ದರು.  ಆರಂಭದಲ್ಲಿ ಮನೆಗಳಿಗೆ ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಅಲ್ಲಿ ತೆಂಗಿನ ಕಾಯಿ ಸುಲಿಯಲು ಕಲಿತಿದ್ದರು. ಇದೀಗ ತೆಂಗಿನ ಕಾಯಿ ಸುಲಿಯುವುದೇ ಕಾಯಕ ಮಾಡಿಕೊಂಡಿದ್ದಾರೆ.ಈಗ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಗಡಿಭಾಗದ ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ಪ್ರತಿ ತೆಂಗಿನಕಾಯಿಗೆ 1 ರೂಪಾಯಿ ಗಳಿಸುತ್ತಾರೆ ಮತ್ತು ಅರ್ಧ ದಿನದಲ್ಲಿ ಸುಮಾರು 1,000 ತೆಂಗಿನಕಾಯಿಗಳನ್ನು ಸುಲಿಯಬಲ್ಲರು. ಪುತ್ರ ಹಾಗೂ ಪುತ್ರಿಯ ಜೊತೆ ವಾಸಿಸುತ್ತಿರುವ ಹರಿಣಾಕ್ಷಿ, ಆದಾಯಕ್ಕೆ ಪೂರಕವಾಗಿ ಹಸುವನ್ನು ಸಾಕುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಏಣಿಯನ್ನು ಬಳಸಿ ಅಡಿಕೆ ಕೊಯ್ಲು ಮತ್ತು ಮೆಣಸು ಕೊಯ್ಲು  ಕೆಲಸ ಕೂಡ ಮಾಡುತ್ತಾರೆ.

ತೆಂಗಿನಕಾಯಿ ಸುಲಿಯುವ ಸಾಧನದ ಜೊತೆ ಹರಿಣಾಕ್ಷಿ | PHOTO CREDIT : Shailaja Padre

ಕಾಸರಗೋಡಿಗೆ ಸ್ಥಳಾಂತರಗೊಂಡಾಗ ಈ ಕೆಲಸ ಪ್ರಾರಂಭಿಸಿದೆ. ಒಂಟಿಯಾಗಿ ಇಬ್ಬರು ಮಕ್ಕಳೊಂದಿಗೆ ಬದುಕಬೇಕಾಗಿ ಬಂದಾಗ, ನಾನು ಆದಾಯದ ಮಾರ್ಗವನ್ನು ಕಂಡುಹಿಡಿಯಬೇಕಾಗಿತ್ತು. ಇಡುಕ್ಕಿಯಲ್ಲಿ ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದೇನೆ ಮತ್ತು ಈ ಹಿಂದೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಲಸ ಮಾಡಿದ್ದೇನೆ” ಎಂದು ಹರಿಣಾಕ್ಷಿ ಅವರು ಹೇಳುತ್ತಾರೆ.

ಹರಿಣಾಕ್ಷಿ ಅವರು ಗ್ರಾಮೀಣ ಭಾಗದ ಹಲವು ಕಡೆ ತನ್ನದೇ ವಾಹನದ ಮೂಲಕ ತೆಂಗಿನ ಕಾಯಿ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲಸದಲ್ಲಿನ ಬದ್ಧತೆಯೇ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳುತ್ತಾರೆ.

 

ತೆಂಗಿನಕಾಯಿ ಸುಲಿಯುತ್ತಿರುವ ಹರಿಣಾಕ್ಷಿ | PHOTO CREDIT : Shailaja Padre
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror