ಇಂದು ವಿಶ್ವ ಪುಸ್ತಕ ದಿನ | ಪುಸ್ತಕ ಓದೋಣ… ಉತ್ತಮ ಸ್ನೇಹಿತನ ಆಯ್ಕೆ ಮಾಡೋಣ… |

April 23, 2022
12:09 PM

ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಏಕಾಂಗಿತನವನ್ನು ಯಾವತ್ತೂ ಅನುಭವಿಸಲಾರರು. ಜೀವನದಲ್ಲಿ ಉತ್ತಮ ಸ್ನೇಹಿತ ಅಂತ ಇರುವುದಾದರೆ ಅವುಗಳು ಪುಸ್ತಕಗಳೇ ಸರಿ. ಪುಸ್ತಕ ಓದುವಿಕೆ ಸಂತೋಷ, ಮಾನಸಿಕ ನೆಮ್ಮದಿ, ಜ್ಞಾನ, ವೃಧ್ದಿಸುವ ಶಬ್ದಭಂಡಾರ, ಭಾಷಾ ಕೌಶಲ್ಯ ಎಲ್ಲವನ್ನೂ ಕೊಡುತ್ತದೆ . ಪ್ರತಿಯಾಗಿ ನಮ್ಮ ಸಮಯವನ್ನು ಮಾತ್ರ ಬಯಸುತ್ತದೆ.

Advertisement
Advertisement
ಓದು ಅವರವರ ಭಾವಕ್ಕೆ , ಆಯ್ಕೆಯ ಮೇಲೆ ಅವಲಂಬಿತ. ಇಲ್ಲಿ ನಮ್ಮ ಆರಿಸುವ ಜಾಣ್ಮೆ ಮುಖ್ಯವಾಗಿರುತ್ತವೆ. ಎಷ್ಟೋ ಒಳ್ಳೆಯ ಪುಸ್ತಕ ಗಳು ಓದುಗರನ್ನು ತಲುಪದೇ ಇರಬಹುದು. ಗಡಿಬಿಡಿಯಲ್ಲಿ ನಾವು ಯಾವತ್ತೂ ಗ್ರಂಥಾಲಯ ಅಥವಾ ಪುಸ್ತಕಗಳ ಅಂಗಡಿಗೆ ಹೋಗಬಾರದು. ಬಹಳಷ್ಟು ಸಮಯ ನಮಗೆ ಇದ್ದಾಗ ತಾಳ್ಮೆಯಿಂದ ಆಯ್ಕೆ ಮಾಡಬಹುದು. ಓದುಗ ವರ್ಗ ಇಂದು ವಿಸ್ತಾರವಾಗಿದೆ, ಆಯ್ಕೆಯೂ ಕೂಡ. ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಮನರಂಜನೆ, ಜ್ಞಾನವರ್ಧನೆಗಾಗಿ, ಆರೋಗ್ಯ ಸಂಬಂದಿ, ವೈಜ್ಞಾನಿಕ, ತಂತ್ರಜ್ಞಾನ, ಮಕ್ಕಳ ಪುಸ್ತಕಗಳು ಅಲ್ಲದೆ ಇನ್ನೂ ಬೇಕಾದಷ್ಟು ರೀತಿಯ ಪುಸ್ತಕ ಗಳು ಪ್ರಕಟವಾಗುತ್ತಿವೆ. ಓದುಗ ವರ್ಗವೂ ಬೆಳೆಯುತ್ತಿರುವುದು ಸಂತಸದ ಸಂಗತಿ.
1995 ರಲ್ಲಿ ಯುನೆಸ್ಕೋ ಮೊದಲ ಬಾರಿಗೆ ವಿಶ್ವ ಪುಸ್ತಕ ದಿನಾಚರಣೆಯ ಘೋಷಣೆ ಮಾಡಿತು. ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯ ಗಳ ಬಗ್ಗೆ ಅರಿವು ಮತ್ತು ಪ್ರಚಾರ ಇದರ ಉದ್ದೇಶ.

ಬನ್ನಿ ಪುಸ್ತಕ ಓದೋಣ. “ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕ, ಪ್ರತಿವರ್ಷ ವೂ ಒಂದು ಅಧ್ಯಾಯ”

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೋಲಾರ ಜಿಲ್ಲೆಯಲ್ಲಿ ನಾಳೆ ಮಾವು ಬೆಳೆಗಾರರಿಂದ ಬಂದ್ ಕರೆ |
June 10, 2025
10:31 PM
by: The Rural Mirror ಸುದ್ದಿಜಾಲ
ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಿ
June 10, 2025
10:05 PM
by: The Rural Mirror ಸುದ್ದಿಜಾಲ
ಮುಂದಿನ 4-5 ದಿನಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ತೀವ್ರ ತಾಪಮಾನ | ದಕ್ಷಿಣದಲ್ಲಿ ಉತ್ತಮ ಮಳೆ |
June 10, 2025
7:38 AM
by: The Rural Mirror ಸುದ್ದಿಜಾಲ
ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
June 10, 2025
7:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group