Advertisement
ಅನುಕ್ರಮ

ವಿಶ್ವ ಜೇನುಹುಳು ದಿನ | ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು |

Share
ಅಮ್ಮನ ಹಾಲಿನಷ್ಟೇ ಶುದ್ಧವಾದ ಆಹಾರವೆಂದರೆ ಜೇನು.  ಪುಟ್ಟ ಮಕ್ಕಳಿಗೆ ಜೇನು ನೆಕ್ಕಿಸಿ ಹಿರಿಯರು ಆಶೀರ್ವದಿಸುವುದು ನಮ್ಮ ಭಾರತೀಯ ಕ್ರಮ. ಇದರಿಂದಲೇ ಜೇನಿನ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೇನುಹುಳುಗಳು ಕೂಡು ಕುಟುಂಬದ ಸಂಕೇತ. ಖುಷಿ ಖುಷಿಯಾಗಿ  ಒಂದಾಗಿ ಇರುವ  , ಜೊತೆಯಾಗಿ ದುಡಿಯುವ ಈ ಜೇನು ನೊಣಗಳು ಕ್ರಿಯಾಶೀಲತೆ ಉತ್ತಮ ಉದಾಹರಣೆ.
ಇಂದು ಮೇ 20. ” ವಿಶ್ವ ಜೇನು ಹುಳು ದಿನ” . 2018 ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯು  ಈ ದಿನದ ಆಚರಣೆಗೆ ಚಾಲನೆ ನೀಡಿತು.  ಗಮನೀಯವಾಗಿ ಕುಸಿಯುತ್ತಿರುವ ಜೇನುನೊಣಗಳ ಸಂತತಿಯ ಉಳಿವಿನ ಅಗತ್ಯವನ್ನು ಮನಗಾಣಿಸುವ ಪ್ರಯತ್ನವಾಗಿ ಈ ಆಚರಣೆ.  ಸ್ಲೋವೆನಿಯಾದ ಮಹಾನ್ ಜೇನು ಕೃಷಿಕ  ಆಂಟೆನ್ ಜಾನಿಯಾ  ಜನ್ಮ ದಿನ.  20 ಮೇ 1734.  ಈ ವರ್ಷದ ಘೋಷ ವಾಕ್ಯ Bee engaged, Biid back better for bees.” ಜೇನು ಹುಳುಗಳ ಉಳಿವಿಗಾಗಿ ಸೂಕ್ತ ತಾಣವನ್ನು ನಿರ್ಮಿಸೋಣ.
ಸುಮಾರು 20,000  ವಿವಿಧ ಜಾತಿಯ ಜೇನು ನೊಣಗಳಿವೆ.  ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಚೈನಾ, ಟರ್ಕಿಗಳು ಪ್ರಮುಖವಾಗಿ ಜೇನು ಉತ್ಪಾದನೆ ರಾಷ್ಟ್ರಗಳಾಗಿವೆ. ಜೇನು ಹುಳುಗಳು ನಮ್ಮ ಕೃಷಿ ಚಟುವಟಿಕೆಗಳ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಹಣ್ಣು , ತರಕಾರಿಗಳಿರಲಿ, ಅಡಿಕೆ ತೆಂಗು ಹೂವುಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.  ತಮ್ಮ ಆಹಾರಕ್ಕಾಗಿ ಹೂವುಗಳ ಮಕರಂದವನ್ನು ಹೀರುವ ಜೇನು ಹುಳುವಿನ  ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ರಾಸಾಯನಿಕ ಕ್ರಿಮಿನಾಶಕಗಳ ಬಳಕೆ ಕಡಿಮೆಯಾದಾಗ ಜೇನು ನೊಣಗಳು ಜಾಸ್ತಿ ಕ್ರಿಯಾಶೀಲವಾಗಿರುತ್ತವೆ.
ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು ಎಂಬುದನ್ನು  ಅರ್ಥಮಾಡಿಕೊಳ್ಳೋಣ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಂಗಳೂರಿನಲ್ಲಿ ರಾಷ್ಟ್ರೀಯ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ತೆರೆ – ಮಣಿ ಸರ್ಬರ್‌ತೋ ಚಾಂಪಿಯನ್

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್–2026ಕ್ಕೆ…

4 hours ago

ಮ್ಯಾನ್ಮಾರ್‌ನಿಂದ ರೈಲಿನಲ್ಲಿ ಸಾಗಿಸುತ್ತಿದ್ದ 10 ಟನ್ ಅಡಿಕೆ ವಶ

ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 10 ಟನ್ ವಿದೇಶಿ ಅಡಿಕೆಯನ್ನು ಅಸ್ಸಾಂನ ರಂಗಿಯಾ…

4 hours ago

ಹವಾಮಾನ ವರದಿ | 08-08-2026 | ಕರಾವಳಿಯಲ್ಲಿ ಮಳೆ ಇಳಿಕೆ – ರಾಜ್ಯದಲ್ಲಿ ಹೇಗೆ..?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದ್ದು,…

12 hours ago

ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ… ಆದರೆ ರೈತರಿಗೆ ಲಾಭ ಹೆಚ್ಚಿದೆಯೇ?

ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದರೂ, ರೈತರಿಗೆ ಅದರ ಸಂಪೂರ್ಣ ಆರ್ಥಿಕ ಲಾಭ ಇನ್ನೂ ತಲುಪಿಲ್ಲ…

17 hours ago

ಚಂಡಮಾರುತದ ಗಾಳಿಗೂ ಬಗ್ಗಿ ಉಳಿಯುವ ಅಡಿಕೆ ತಳಿ..! ಮೊಹಿತ್‌ನಗರ ತಳಿಗೆ ಹಲವು ರಾಜ್ಯಗಳಲ್ಲಿ ಬೇಡಿಕೆ

ಚಂಡಮಾರುತದ ಗಾಳಿಗೆ ಮುರಿಯದೆ ಬಾಗಿಕೊಂಡು ಉಳಿಯುವ ಮೊಹಿತ್‌ನಗರ ಅಡಿಕೆ ತಳಿಗೆ ಒಡಿಶಾ ಸೇರಿದಂತೆ…

18 hours ago

ದಕ್ಷಿಣ ಕನ್ನಡದಲ್ಲಿ ಮಳೆ | 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ – ಕಾಸರಗೋಡಿನಲ್ಲೂ ಶಾಲೆಗಳಿಗೆ ರಜೆ

ಭಾರೀ ಮಳೆಯ ಹಿನ್ನೆಲೆಯಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳ ಶಾಲಾ-ಕಾಲೇಜುಗಳಿಗೆ…

18 hours ago