Advertisement
ಅಂಕಣ

ವಿಶ್ವ ಜೇನುಹುಳು ದಿನ | ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು |

Share
ಅಮ್ಮನ ಹಾಲಿನಷ್ಟೇ ಶುದ್ಧವಾದ ಆಹಾರವೆಂದರೆ ಜೇನು.  ಪುಟ್ಟ ಮಕ್ಕಳಿಗೆ ಜೇನು ನೆಕ್ಕಿಸಿ ಹಿರಿಯರು ಆಶೀರ್ವದಿಸುವುದು ನಮ್ಮ ಭಾರತೀಯ ಕ್ರಮ. ಇದರಿಂದಲೇ ಜೇನಿನ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೇನುಹುಳುಗಳು ಕೂಡು ಕುಟುಂಬದ ಸಂಕೇತ. ಖುಷಿ ಖುಷಿಯಾಗಿ  ಒಂದಾಗಿ ಇರುವ  , ಜೊತೆಯಾಗಿ ದುಡಿಯುವ ಈ ಜೇನು ನೊಣಗಳು ಕ್ರಿಯಾಶೀಲತೆ ಉತ್ತಮ ಉದಾಹರಣೆ.
ಇಂದು ಮೇ 20. ” ವಿಶ್ವ ಜೇನು ಹುಳು ದಿನ” . 2018 ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯು  ಈ ದಿನದ ಆಚರಣೆಗೆ ಚಾಲನೆ ನೀಡಿತು.  ಗಮನೀಯವಾಗಿ ಕುಸಿಯುತ್ತಿರುವ ಜೇನುನೊಣಗಳ ಸಂತತಿಯ ಉಳಿವಿನ ಅಗತ್ಯವನ್ನು ಮನಗಾಣಿಸುವ ಪ್ರಯತ್ನವಾಗಿ ಈ ಆಚರಣೆ.  ಸ್ಲೋವೆನಿಯಾದ ಮಹಾನ್ ಜೇನು ಕೃಷಿಕ  ಆಂಟೆನ್ ಜಾನಿಯಾ  ಜನ್ಮ ದಿನ.  20 ಮೇ 1734.  ಈ ವರ್ಷದ ಘೋಷ ವಾಕ್ಯ Bee engaged, Biid back better for bees.” ಜೇನು ಹುಳುಗಳ ಉಳಿವಿಗಾಗಿ ಸೂಕ್ತ ತಾಣವನ್ನು ನಿರ್ಮಿಸೋಣ.
ಸುಮಾರು 20,000  ವಿವಿಧ ಜಾತಿಯ ಜೇನು ನೊಣಗಳಿವೆ.  ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಚೈನಾ, ಟರ್ಕಿಗಳು ಪ್ರಮುಖವಾಗಿ ಜೇನು ಉತ್ಪಾದನೆ ರಾಷ್ಟ್ರಗಳಾಗಿವೆ. ಜೇನು ಹುಳುಗಳು ನಮ್ಮ ಕೃಷಿ ಚಟುವಟಿಕೆಗಳ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಹಣ್ಣು , ತರಕಾರಿಗಳಿರಲಿ, ಅಡಿಕೆ ತೆಂಗು ಹೂವುಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.  ತಮ್ಮ ಆಹಾರಕ್ಕಾಗಿ ಹೂವುಗಳ ಮಕರಂದವನ್ನು ಹೀರುವ ಜೇನು ಹುಳುವಿನ  ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ರಾಸಾಯನಿಕ ಕ್ರಿಮಿನಾಶಕಗಳ ಬಳಕೆ ಕಡಿಮೆಯಾದಾಗ ಜೇನು ನೊಣಗಳು ಜಾಸ್ತಿ ಕ್ರಿಯಾಶೀಲವಾಗಿರುತ್ತವೆ.
ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು ಎಂಬುದನ್ನು  ಅರ್ಥಮಾಡಿಕೊಳ್ಳೋಣ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

2 mins ago

ವರುಣ ಕೃಪೆ ತೀರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

3 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

5 hours ago

ಭಾರತವು 5.3 ಮಿಲಿಯನ್‌ ಮರಗಳನ್ನು ಕಳೆದುಕೊಂಡದ್ದು ಹೇಗೆ..?

ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…

5 hours ago

ಬೇಸಗೆಯಲ್ಲಿ ವೇದ ಶಿಬಿರ

https://youtu.be/0oQrAPjmTJY?si=7lSz7iQuaLABTKMj

6 hours ago