MIRROR FOCUS

#WorldEnvironmentDay #ವಿಶ್ವಪರಿಸರದಿನ | ಅನುದಿನವೂ ಹಸಿರಾಗಿರಲಿ ಜಗವು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ವಿಶ್ವ ಪರಿಸರ ದಿನ.
1972 ರಿಂದ ಆರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂ.5 ರಂದು  ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ .  ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ. ಈ ಆಚರಣೆ ಪರಿಸರದ ಕುರಿತಾಗಿ ವಿಶ್ವ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ಈಗ ಜಗತ್ತಿನಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪರಿಸರವನ್ನು ಉಳಿಸುವುದು ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುವುದು ಇದರ ಉದ್ದೇಶ.

ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ವಿಶ್ವಸಂಸ್ಥೆಯು Celebrate Biodiversity ಎಂಬ ಘೋಷ ವಾಕ್ಯವನ್ನು  ನೀಡಿದೆ. ಕಳೆದ ಬಾರಿ beat air pollution  ಎಂಬ ಘೋಷ ವಾಕ್ಯವನ್ನು ನೀಡಿತ್ತು.

Advertisement
Advertisement

ಈ ಬಾರಿ  ವಿಶ್ವ ಪರಿಸರ ದಿನ 2020 ರ  ಪ್ರಮುಖ ವಿಷಯವೆಂದರೆ “ಜೀವ ವೈವಿಧ್ಯತೆಯನ್ನು ಆಚರಿಸಿ”.  ಜಗತ್ತಿನಲ್ಲಿ ಸುಮಾರು 1 ಮಿಲಿಯನ್ ಜೀವ ಪ್ರಭೇದಗಳು ಅಳಿವಿನಂಚಿನಲ್ಲಿದೆ. ಹೀಗಾಗಿ ಈಗಲೇ ಜೀವವೈವಿಧ್ಯತೆಯ ಮೇಲೆ ಕೇಂದ್ರೀಕರಿಸಲು ಹೆಚ್ಚು ಮಹತ್ವದ ಸಮಯವಾಗಿದೆ. ಇಂತಹ ಅವಕಾಶ ಹಿಂದೆ ಇರಲಿಲ್ಲ. 


ಈ ದಿನ ವಿಶ್ವ ಪರಿಸರ ದಿನ. ಈ ಹೊತ್ತಿನಲ್ಲಿ ಒಂದು ಹೃದಯ ಚೂರಾಗುವಂತಹ ಸುದ್ದಿ ಬಹಿರಂಗವಾಗಿದೆ.‌
ಕೇರಳದ ಮಲಪ್ಪುರಂನಲ್ಲಿ ಅನನಾಸು ಹಣ್ಣಿನೊಳಗೆ ಸುಡುಮದ್ದು ಇಟ್ಟು ತಿನ್ನಿಸಿದ ಪರಿಣಾಮ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದೆ…ಇದನ್ನು ನೋಡಿದ ಬಳಿಕ ನಮಗೆ ಕೋವಿಡ್19 ಎಂಬುವುದು ಅತ್ಯಂತ ಚಿಕ್ಕ ಶಿಕ್ಷೆಯಾಗಿಯೇ ತೋರುತ್ತದೆ..
ವಿಶ್ವ ಪರಿಸರ ದಿನದ ಆಚರಣೆಯ ಸಂದರ್ಭದಲ್ಲಿ ಈ ಸುದ್ದಿ ಮನಸು ಕೆಡಿಸುವಂತಿದೆ. ಪ್ರಕೃತಿ ಎಲ್ಲವನ್ನೂ  ಮನುಷ್ಯ ನಿಗೆ ಅಗತ್ಯ ಕ್ಕಿಂತ ‌ಹೆಚ್ಚೇ ಕೊಟ್ಟಾಗಿದೆ. ಮಣ್ಣು, ನೀರು, ಗಾಳಿ ಎಲ್ಲವನ್ನೂ ಧಾರಾಳವಾಗಿ ಬಳಸುವ ಸ್ವಾತಂತ್ರ್ಯ ಮನುಜನಿಗಿದೆ. ಯಾವತ್ತೂ  ಅದನ್ನು ಬಳಸ ಬೇಡ, ಇದನ್ನು ಮುಟ್ಟ ಬೇಡವೆಂದು ಭೂಮಿ ತಾಯಿ ಎಲ್ಲೂ ತಡೆದಿಲ್ಲ. ಅಗತ್ಯಕ್ಕಿಂತ ಹೆಚ್ಚೇ ಬಳಸಿ ಹಾಳು ಮಾಡುತ್ತಿರುವುದು ನಾವೇ.   ಪರಿಸರದ ಮಕ್ಕಳಾದ ನಾವು , ಪ್ರಾಣಿ , ಪಕ್ಷಿಗಳೆಲ್ಲರೂ ಒಂದಾಗಿ ಬಾಳುವುದನ್ನು ಬಿಟ್ಟು ನಮ್ಮ ಪ್ರಾಬಲ್ಯ ವನ್ನು ಮೆರೆಯುತ್ತಿದ್ದೇವೆ. ಈ ಮನಸ್ಥಿತಿಯಿಂದ ಹೊರಬರಬೇಕಾದ ಸಮಯ ಬಂದಿದೆ. ಮತ್ತೀಗ  ನಾವೇ ಎಚ್ವೆತ್ತು ಕೊಳ್ಳುವ ಸಂದರ್ಭ ಒದಗಿ ಬಂದಿದೆ.
ಒಂದಾದ ಮೇಲೆ ಒಂದು ಅಪಾಯಗಳು  ಬಂದೆರಗುತ್ತಿವೆ. ಕೊರೊನಾದೊಂದಿಗೆ  ಒಂದಾದ ಮೇಲೊಂದರಂತೆ ‌ ಬರುತ್ತಿರುವ ಪ್ರಾಕೃತಿಕ ವಿಕೋಪಗಳು  ದೃತಿಕೆಡಿಸುತ್ತಿದೆ. ವಿಶ್ವ ದೆಲ್ಲೆಡೆ ಕೊರೊನಾ ಬಹು ದೊಡ್ಡ ಪಾಠ ಕಲಿಸಿದೆ. ಲಾಕ್ ಡೌನ್ ಜನರ ವಿಪರೀತ ಗಳಿಗೆ ಕೊಂಚ ಬ್ರೇಕ್ ಹಾಕಿದೆ. ಅನಾವಶ್ಯಕ ತಿರುಗಾಟಗಳನ್ನು, ಖರ್ಚು ಗಳನ್ನು ನಿಯಂತ್ರಿಸುವ ಕಾರ್ಯ ಕೊರೊನಾ ಮಾಡಿದೆ. ದೇಶಗಳಿಗೆ ಆರ್ಥಿಕ ವಾಗಿ ಬಹು ದೊಡ್ಡ ಹೊಡೆತ ವಾದರು ಪ್ರಕೃತಿ ಗೆ ಒಳ್ಳೆಯದೇ ಆಗಿದೆ. ಎಷ್ಟೋ ನಗರಗಳು, ನದಿಗಳು, ಕಲುಷಿತ ಮುಕ್ತ ವಾಗಿವೆ.  ಪ್ರಾಣಿ ಪಕ್ಷಿಗಳು ಮುಕ್ತವಾಗಿ ಓಡಾಡುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.     ವರ್ಷಕ್ಕೊಮ್ಮೆ 2 ತಿಂಗಳು ಲಾಕ್ ಡೌನ್ ಇದ್ದರೆ ಚೆಂದವೆಂದು ಜನರು ಅಭಿಪ್ರಾಯ ಪಡುವಂತಾಗಿದೆ.
ಈ ಸಂಧಿಕಾಲದಲ್ಲಿ  ಬಂದಿರುವ ವಿಶ್ವ ಪರಿಸರ ದಿನ ಆಚರಣೆ ಬಂದಿದೆ. ಜೂನ್ 5 ರಂದು ವಿಶ್ವದೆಲ್ಲೆಡೆ  ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತೇವೆ.  ಪ್ರಕೃತಿಗಾಗಿ ಕಿಂಚಿತ್ತು ಕೊಡುಗೆ ಕೊಡುವ ಅವಕಾಶ.  ಪ್ರತಿವರ್ಷ ಒಂದು ಧ್ಯೇಯ, ಉದ್ದೇಶ ಗಳೊಂದಿಗೆ ಆಚರಿಸಲಾಗುತ್ತದೆ.  ‘ ಜೀವ ವೈವಿಧ್ಯ ದ ಸಂರಕ್ಷಣೆ ‘ ಎಂಬ ಧ್ಯೇಯ ವಾಕ್ಯ ವಾಗಿದೆ.     ‘ ಹಸಿರು ಉಳಿದರಷ್ಟೇ ಉಸಿರು, ಮನೆಗೊಂದು ಗಿಡ ನೆಡಿ’ ಆಶಯವನ್ನು  ಪಾಲಿಸ ಬೇಕಾಗಿದೆ.. ನಾವು ಇಂದು ಪೂರ್ಣ ಮನಸಿನಿಂದ ಸಂಕಲ್ಪ ಮಾಡೋಣ . ಮನೆಗೊಂದು ಗಿಡ ನೆಡೋಣ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….

ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490

18 hours ago

ಬದುಕು ಪುರಾಣ | ಶ್ರೀಮಂತಿಕೆ ‘ಪಾಸ್ ಬುಕ್ಕಿನಲ್ಲಿ’ ಇರುವುದಲ್ಲ!

ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು  ಹಣ ಕೊಟ್ಟರೂ…

18 hours ago

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…

1 day ago

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…

1 day ago

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…

1 day ago

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…

1 day ago