ಈಚೆಗೆ ಗ್ರಾಮೀಣ ಭಾಗದಲ್ಲಿ ಚಿಕ್ಕಮೇಳ ಸದ್ದು ಮಾಡುತ್ತಿದೆ. ಮಳೆಗಾಲದ ಅವಧಿಯಲ್ಲಿ ಮನೆಮನೆಗೆ ತೆರಳಿ ಯಕ್ಷಗಾನ ಉಳಿಸಿ, ಬೆಳೆಸುವ ಪ್ರಯತ್ನವೊಂದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಮನೆಗೆ ಭೇಟಿ ನೀಡಿದ ತಂಡವು ತಿರುಗಾಟವನ್ನು ಆರಂಭಿಸಿತು.
ಅಂಗ್ರಿ , ಕನ್ಯಾನದ ಶ್ರೀ ದುರ್ಗಾಪರಮೇಶ್ವರಿ ( ಶ್ರೀ ಉಳ್ಳಾಲ್ತಿ) ಸಂಚಾರಿ ತಿರುಗಾಟದ ಯಕ್ಷಗಾನ ತಂಡವು ಸುಳ್ಯ ತಾಲೂಕಿನ ಗುತ್ತಿಗಾರಿನ ತಂಡದೊಂದಿಗೆ ಹೊರಟ ಚಿಕ್ಕಮೇಳ ತಂಡ ಸುಳ್ಯದ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರ ಮನೆಗೆ ಭೇಟಿ ನೀಡಿತು.
ಈ ಸಂದರ್ಭ ಹಿಮ್ಮೇಳ ಕಲಾವಿದರಾಗಿ ಗೋಪಾಲಕೃಷ್ಣ ಭಟ್ ದೇವಸ್ಯ, ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ, ವೆಂಕಟೇಶ್ ಭಟ್ ದೇವಸ್ಯ ಹಾಗೂ ಮುಮ್ಮೇಳ ಕಲಾವಿದರಾಗಿ ಗಿರೀಶ್ ಕಣ್ಕಲ್ , ಚರಣ್ ಗೌಡ ಕಾಣಿಯೂರು(ಧರ್ಮಸ್ಥಳ ಮೇಳ).
ಮತ್ತು ಮಿಥುನ್ ಕುಮಾರ್ ಸೋನ , ಚಂದ್ರ ಶೇಖರ್ ಕಾನಾವು ಮೊದಲಾದವರು ಇದ್ದರು.
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…
ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್ಗೆ ಅಡಿಕೆ…
ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 8ರಂದು ರಾಜ್ಯದ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ…
2026-27ರ ಮುಂಗಾರು ಬೆಳೆ ಸಮೀಕ್ಷೆಗೆ ಚಾಲನೆ; ರೈತರು ಮೊಬೈಲ್ ಆ್ಯಪ್ ಮೂಲಕವೇ ಬೆಳೆ…
ಮಾಣಿ–ಸಂಪಾಜೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕೇಂದ್ರದಿಂದ ₹49.22 ಕೋಟಿ ವಿಶೇಷ ಅನುದಾನ ಮಂಜೂರು.…
ಜುಲೈ 7ರಿಂದ 11ರವರೆಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಭೂಕುಸಿತದ…