ಯಕ್ಷಗಾನ ಸರ್ವಾಂಗೀಣ ಕಲೆ | ರಂಗಮನೆ ಯಕ್ಷ ನಾಟ್ಯ-ಹಿಮ್ಮೇಳ ಶಿಕ್ಷಣ ಉದ್ಘಾಟನೆಯಲ್ಲಿ ಕುಮಾರ ಸುಬ್ರಹ್ಮಣ್ಯ |

July 10, 2023
2:48 PM
ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.

ಯಕ್ಷಗಾನದ ಕಲಿಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಬಹಳ ಉಪಯುಕ್ತ. ಹಿಮ್ಮೇಳ,ಮಾತುಗಾರಿಕೆ,ನಾಟ್ಯ,ವೇಷಭೂಷಣ ಸೇರಿದಂತೆ ಯಕ್ಷಗಾನ ಒಂದು ಸರ್ವಾಂಗೀಣ ಕಲೆ. ಕಳೆದ 35 ವರ್ಷಗಳಿಂದ ಹಿಮ್ಮೇಳ ವಾದಕನಾಗಿ, ಗುರುವಾಗಿ ದುಡಿಯುತ್ತಿದ್ದೇನೆ. ಕಲಿಕೆಗೆ ಪೂರಕವಾದ ವಾತಾವರಣರಂಗಮನೆಯಲ್ಲಿದೆ’ ಎಂದು ಖ್ಯಾತ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ರಹ್ಮಣ್ಯ ಹೇಳಿದರು.

Advertisement
Advertisement

ಅವರು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯರವರು ದೀಪಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಯಕ್ಷಗಾನ ನಾಟ್ಯಗುರುಗಳಾದ, ಕಲಾವಿದೆ  ಸರೋಜಿನಿ ಬನಾರಿ, ಉದ್ಯಮಿ ಬಾಲಕೃಷ್ಣ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದರು.

ರಂಗಮನೆಯ ಅಧ್ಯಕ್ಷರಾದ ಡಾ.ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಂಗಮನೆಯ ಸದಸ್ಯರಾದ ರವೀಶ್ ಪಡ್ಡಂಬೈಲು ವಂದಿಸಿದರು.

ಯಕ್ಷಗಾನ ನಾಟ್ಯ ತರಗತಿಯು ಪೂ.9.30 ರಿಂದ 11.30 ವರೆಗೆ ಹಾಗೂ ಚೆಂಡೆ – ಮದ್ದಳೆ ತರಗತಿಯು ಪೂ.9.00 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುತ್ತದೆ. ಒಂದು ಗಂಟೆ ಅವಧಿಯ ಹಿಮ್ಮೇಳ ತರಗತಿಯನ್ನು ಕಲಿಯುವವರು ತಮ್ಮ ಅನುಕೂಲದ ಸಮಯವನ್ನು ಹೊಂದಿಸಿಕೊಳ್ಳಲು ಅವಕಾಶವಿದೆ. ಆಸಕ್ತರು ಗುರುಗಳಾದ ಶ್ರೀಮತಿ ಸರೋಜಿನಿ ಬನಾರಿ (9441189710 )
ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ( 9449915777 ) ಇವರನ್ನು ಸಂಪರ್ಕಿಸಬಹುದು.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ಮತ್ತೆ ಚುರುಕಾದ ಮುಂಗಾರು
June 23, 2025
7:56 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.06.2025| ಜೂ.28 ರಿಂದ ಮಳೆ‌ ಕಡಿಮೆಯಾಗಲಿದೆಯಾ ?
June 22, 2025
1:26 PM
by: ಸಾಯಿಶೇಖರ್ ಕರಿಕಳ
ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!
June 22, 2025
12:00 PM
by: The Rural Mirror ಸುದ್ದಿಜಾಲ
ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ
June 22, 2025
11:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group