ಯಕ್ಷಗಾನದ ಕಲಿಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಬಹಳ ಉಪಯುಕ್ತ. ಹಿಮ್ಮೇಳ,ಮಾತುಗಾರಿಕೆ,ನಾಟ್ಯ,ವೇಷಭೂಷಣ ಸೇರಿದಂತೆ ಯಕ್ಷಗಾನ ಒಂದು ಸರ್ವಾಂಗೀಣ ಕಲೆ. ಕಳೆದ 35 ವರ್ಷಗಳಿಂದ ಹಿಮ್ಮೇಳ ವಾದಕನಾಗಿ, ಗುರುವಾಗಿ ದುಡಿಯುತ್ತಿದ್ದೇನೆ. ಕಲಿಕೆಗೆ ಪೂರಕವಾದ ವಾತಾವರಣರಂಗಮನೆಯಲ್ಲಿದೆ’ ಎಂದು ಖ್ಯಾತ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ರಹ್ಮಣ್ಯ ಹೇಳಿದರು.
ಅವರು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯರವರು ದೀಪಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಯಕ್ಷಗಾನ ನಾಟ್ಯಗುರುಗಳಾದ, ಕಲಾವಿದೆ ಸರೋಜಿನಿ ಬನಾರಿ, ಉದ್ಯಮಿ ಬಾಲಕೃಷ್ಣ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದರು.
ರಂಗಮನೆಯ ಅಧ್ಯಕ್ಷರಾದ ಡಾ.ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಂಗಮನೆಯ ಸದಸ್ಯರಾದ ರವೀಶ್ ಪಡ್ಡಂಬೈಲು ವಂದಿಸಿದರು.
ಯಕ್ಷಗಾನ ನಾಟ್ಯ ತರಗತಿಯು ಪೂ.9.30 ರಿಂದ 11.30 ವರೆಗೆ ಹಾಗೂ ಚೆಂಡೆ – ಮದ್ದಳೆ ತರಗತಿಯು ಪೂ.9.00 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುತ್ತದೆ. ಒಂದು ಗಂಟೆ ಅವಧಿಯ ಹಿಮ್ಮೇಳ ತರಗತಿಯನ್ನು ಕಲಿಯುವವರು ತಮ್ಮ ಅನುಕೂಲದ ಸಮಯವನ್ನು ಹೊಂದಿಸಿಕೊಳ್ಳಲು ಅವಕಾಶವಿದೆ. ಆಸಕ್ತರು ಗುರುಗಳಾದ ಶ್ರೀಮತಿ ಸರೋಜಿನಿ ಬನಾರಿ (9441189710 )
ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ( 9449915777 ) ಇವರನ್ನು ಸಂಪರ್ಕಿಸಬಹುದು.
ನೇಪಾಳದಲ್ಲಿ ಇತ್ತೀಚಿಗೆ ಎಡೆಬಿಡದೆ ಸುರಿದ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹಕ್ಕೆ ಬಲಿಯಾದವರ…
ಬೆಂಗಳೂರಿನ ICAR-NBAIR ನಲ್ಲಿ ಕೀಟ ನಿರ್ವಹಣೆ ಮತ್ತು ಜೀವಿ ವೈವಿಧ್ಯತೆ ಸಂರಕ್ಷಣೆ ಕುರಿತ…
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಸುಮ್ಮನೆ ಕೈಕಟ್ಟಿ ಕೂರುವ ಬದಲು ಕೃಷಿಯ…
ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲವಾದ ಅವಕಾಶಗಳಿದ್ದು, ಪಶ್ಚಿಮಘಟ್ಟ, ಅರಣ್ಯ, ನದಿ ಮತ್ತು…
ರಾಜ್ಯದಲ್ಲಿ ತಮಿಳುನಾಡು ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವ ಹಾಗೂ ಅಧಿಕ ತಾಪಮಾನದಿಂದ ಸ್ಥಳೀಯ…
ಜಾಗತಿಕ ನೈಸರ್ಗಿಕ ರಬ್ಬರ್ ಉತ್ಪಾದನೆಯು ಶೇಕಡಾ 35 ರಷ್ಟು ಬೆಳೆದಿದೆ, ಆದರೆ ಬೇಡಿಕೆಯು…