ಪುತ್ತೂರು ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ಆಯೋಜಿಸುವ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ಗೆ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರು ಭಾಜನರಾಗಿದ್ದಾರೆ. 2022 ದಶಂಬರ 25, ಭಾನುವಾರ ಸಂಜೆ ಗಂಟೆ 5ಕ್ಕೆ ಜರಗುವ ‘ಶ್ರೀ ಆಂಜನೇಯ 49’ ವಾರ್ಷಿಕ ಕಲಾಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅಮ್ಮಣ್ಣಾಯರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ.
ದಿನೇಶ ಅಮ್ಮಣ್ಣಾಯರು ‘ರಸರಾಗ ಚಕ್ರವರ್ತಿ’ ಬಿರುದಾಂಕಿತ ಭಾಗವತ. ಕೀರ್ತಿಶೇಷ ಭಾಗವತ ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಕರ್ನಾಟಕ ಮೇಳದಲ್ಲಿ ಹೊರಹೊಮ್ಮಿದವರು. ಇಪ್ಪತ್ತೊಂದು ವರುಷ ಕರ್ನಾಟಕ ಮೇಳವೂ ಸೇರಿದಂತೆ ಪುತ್ತೂರು ಮೇಳ, ಕುಂಟಾರು ಮೇಳ, ಕದ್ರಿ ಮೇಳ, ಶ್ರೀ ಎಡನೀರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದಾರೆ. ‘ಮಾ ನಿಷಾದ, ಭಕ್ತ ಸುಧಾಮ, ಪಾಂಚಜನ್ಯ, ಅಕ್ಷಯಾಂಬರ, ಸತ್ಯಹರಿಶ್ಚಂದ್ರ, ನಳದಮಯಂತಿ..’ ಮೊದಲಾದ ಪ್ರಸಂಗಗಳ ಹಾಡುಗಳಲ್ಲಿ ರಸ-ಭಾವಗಳು ಮರುಹುಟ್ಟು ಪಡೆಯುತ್ತವೆ. ತುಳು ಪ್ರಸಂಗಗಳ ರಂಗ ಸಂಭ್ರಮದ ಕಾಲಘಟ್ಟದಲ್ಲಿ ಅಮ್ಮಣ್ಣಾಯರ ಗಾಯನಕ್ಕೆ ಪ್ರತ್ಯೇಕವಾದ ಗಾನಸುಖ. ದಾಮೋದರ ಮಂಡೆಚ್ಚರ ನೆರಳಿನಲ್ಲಿ ಮೇಲ್ಮೆ ಕಂಡ ಇವರ ಗಾಯನ ಮಾರ್ಗವು ‘ಅಮ್ಮಣ್ಣಾಯ ಶೈಲಿ’ಯಾಗಿ ರೂಪುಗೊಂಡಿದೆ. ಅಮ್ಮಣ್ಣಾಯರ ಪದ್ಯಶೈಲಿಗೆ ದೊಡ್ಡ ಅಭಿಮಾನಿ ಗಡಣವಿರುವುದು ಅವರ ಕಲಾಯಾನದ ದ್ಯೋತಕ ಹಾಗೂ ಗೌರವ ಎಂದು ಭಾಸ್ಕರ ಬಾರ್ಯ ತಿಳಿಸಿದ್ದಾರೆ.
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…
ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದ ಮಳೆಗಾಲದಲ್ಲೂ ಹೆಚ್ಚಿನ ತೇವಾಂಶದೊಂದಿಗೆ ಅಪಾಯಕಾರಿ ಬಿಸಿ ಒತ್ತಡ…