Advertisement
MIRROR FOCUS

ಗ್ರಾಮೀಣ ಭಾಗದಲ್ಲಿ ಕ್ಲಿನಿಕ್‌ ತೆರೆಯಲು ಮನಸ್ಸು ಮಾಡಿದ ಯುವ ವೈದ್ಯರು | ಹಲವು ಕಡೆ ಈಗ ಯುವ ವೈದ್ಯರ ಕ್ಲಿನಿಕ್‌ |

Share

ಗ್ರಾಮೀಣ ಭಾಗದಲ್ಲಿ ಈಗ ಯುವ ವೈದ್ಯರು ಕ್ಲಿನಿಕ್‌ ತೆರೆಯಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅತೀ ಅಗತ್ಯವಾದ ಸೌಲಭ್ಯ, ಆರೋಗ್ಯಕ್ಕೆ ಸಂಬಂಧಿಸಿದ್ದು. ಅಂತಹದ್ದೊಂದು ಸೌಲಭ್ಯವನ್ನು ಈಗಿನ ಯುವ ವೈದ್ಯರು ಹಳ್ಳಿಗೆ, ಗ್ರಾಮೀಣ ಭಾಗಕ್ಕೆ ನೀಡುತ್ತಿದ್ದಾರೆ. ಹಲವು ಕಡೆ ಯುವ ವೈದ್ಯರು ಕ್ಲಿನಿಕ್‌ ತೆರೆದುಕೊಂಡಿದೆ.

Advertisement
Advertisement

ಆರೋಗ್ಯ ಸೇವೆಯು ಗ್ರಾಮೀಣ ಭಾಗದವರೆಗೆ ಈಗ ಅಗತ್ಯ ಇದೆ. ಸರ್ಕಾರಿ ವ್ಯವಸ್ಥೆಯಿಂದ ಮಾತ್ರವೇ ಗ್ರಾಮೀಣ ಭಾಗದವರೆಗೆ ಆರೋಗ್ಯ ಸೇವೆ ನೀಡುವುದು ಅಷ್ಟು ಸುಲಭದ ಮಾತಲ್ಲ. ಹಿಂದೆಲ್ಲಾ ಇಡೀ ಊರಿಗೆ ಒಬ್ಬರೇ ಒಬ್ಬರೂ ವೈದ್ಯರು ಇರಲಿಲ್ಲ. ಕೆಲವು ಕಡೆಗಳಲ್ಲಿ ವೈದ್ಯಕೀಯ ಪದವಿ ಪಡೆದರೆ, ಔಷಧಿ ನೀಡುತ್ತಾರೆ ಎಂದು ತಿಳಿದ ತಕ್ಷಣವೇ ಅಂತಹ ವೈದ್ಯರನ್ನು ಗ್ರಾಮೀಣ ಭಾಗಕ್ಕೆ ದೂರದಿಂದಲೂ ಕರೆದು ಸ್ವಾಗತಿಸುತ್ತಿದ್ದರು. ಬಳಿಕ ಗ್ರಾಮಕ್ಕೊಬ್ಬ ವೈದ್ಯರು ಇರುತ್ತಿದ್ದರು. ಕೆಲವು ಸಮಯದವರೆಗೆ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಯುವ ವೈದ್ಯರು ಮನಸು ಮಾಡುತ್ತಿರಲಿಲ್ಲ. ಇದೀಗ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಆರೋಗ್ಯ ಸೇವೆ ನೀಡಲು ಯುವ ವೈದ್ಯರು ಕ್ಲಿನಿಕ್‌ ತೆರೆಯಲು ಆರಂಭಿಸಿದ್ದಾರೆ. ಈ ಬಗ್ಗೆ ಯುವ ವೈದ್ಯ ಪುತ್ತೂರಿನ ಸರ್ವೆಯಲ್ಲಿ ಕ್ಲಿನಿಕ್‌ ತೆರೆಯಲು ಸಿದ್ಧತೆ ನಡೆಸಿರುವ ಡಾ.ಆದಿತ್ಯ ನಾರಾಯಣ ಭಟ್‌ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ಹೇಳುತ್ತಾರೆ

Advertisement
ಡಾ.ಆದಿತ್ಯ ನಾರಾಯಣ ಭಟ್‌

” ಭಾರತದ ಪ್ರತಿ ಹಳ್ಳಿಯೂ ಆರೋಗ್ಯ ಮತ್ತು ವಿದ್ಯೆಯಲ್ಲಿ ಪ್ರಗತಿ ಮತ್ತು ಸ್ವಾವಲಂಬನೆಯತ್ತ ಸಾಗಬೇಕೆಂಬುದು ಆಶಯ. ಮೂಲಭೂತ ತುರ್ತು ಚಿಕಿತ್ಸೆಗೆ ಹಳ್ಳಿಯ ಜನ ದೂರದ ಪಟ್ಟಣವನ್ನು ಅವಲಂಬಿಸುವಂತರಾಗಬಾರದು .ಇಲ್ಲಿ ಮುಖ್ಯವಾಗಿ ರೋಗಿಯ ಆರ್ಥಿಕ ಸಂಪನ್ಮೂಲ ಮತ್ತು ಧಾರಣಾ ಶಕ್ತಿ , ಮತ್ತು ಸಮಯದ ಉಳಿತಾಯ , ಮತ್ತು ಅವಶ್ಯಕತೆಯ ಲಭ್ಯತೆ ದೊರೆಯುವಂತಾಗಲು ಮತ್ತು ಅಗತ್ಯವುಳ್ಳ ರೋಗಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಹಳ್ಳಿಯತ್ತ ನನ್ನ ಒಲವು ಜಾಸ್ತಿ.”

ನಾನು ಕಲಿತದ್ದು ಬೆಳೆದದ್ದು ಹಳ್ಳಿಯ ಪರಿಸರದಲ್ಲಿ , ಹಳ್ಳಿಯ ಜನರ ನೋವು ಬವಣೆ ಇದನ್ನು ಕಣ್ಣಾರೆ ಕಂಡವನು ಮತ್ತು ಅನುಭವಿಸಿದವನು . ಆ ಕಾರಣದಿಂದ ನಾನು ಹಳ್ಳಿಗಳಲ್ಲಿ ಯಾವಾಗಲೂ ಸುಧೃಢ ಆರೋಗ್ಯ ಮತ್ತು ಚಿಕಿತ್ಸಾ ವ್ಯವಸ್ಥೆ ಇರಬೇಕು ಎಂದು ಪ್ರತಿ ಪಾದಿಸುವವನು. ವೈದ್ಯನಿಗೆ ವೃತ್ತಿಯೇ ಧರ್ಮ. ರೋಗಿಯನ್ನು ಗುಣಪಡಿಸುವುದಷ್ಟೇ ವೈದ್ಯರ ಕರ್ತವ್ಯ ಎಂಬುದಷ್ಟೇ ಧ್ಯೇಯ ವಾಕ್ಯ.

Advertisement

ವರದಿಯ ಪ್ರಕಾರ, ಸರಾಸರಿ ಗ್ರಾಮೀಣವಾಗಿ 6000 ಜನ ಸಂಖ್ಯೆಗೆ ಒಂದು ಆರೋಗ್ಯ ಕೇಂದ್ರ ಇರಬೇಕು. ಆದರೆ ಸರಾಸರಿ, ಒಂದು ಪಿಎಚ್‌ಸಿ ಮತ್ತು ಸಿಎಚ್‌ಸಿ  ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 36,049 ಮತ್ತು 164,027 ಜನಸಂಖ್ಯೆಯ ಒತ್ತಡವನ್ನು ಒಳಗೊಂಡಿದೆ. ಒಂದು ವರದಿಯ ಪ್ರಕಾರ ಅಖಿಲ ಭಾರತ ಮಟ್ಟದಲ್ಲಿ, ಗ್ರಾಮೀಣ ಪಿಎಚ್‌ಸಿ ಗಳಲ್ಲಿ ಅಲೋಪತಿ ವೈದ್ಯರ ಒಟ್ಟು ಅವಶ್ಯಕತೆಯಲ್ಲಿ 3.1 ಶೇಕಡಾ ಕೊರತೆ ಇದೆ.

ಅಕ್ಟೊಬರ್ 2023 ರ ಪತ್ರಿಕಾ ವರದಿಯೊಂದರ ಯೊಂದರ ಪ್ರಕಾರ ಪದವಿ ಪಡೆದ ವೈದ್ಯರಿಗೆ ಇನ್ನು ಮುಂದೆ ಗ್ರಾಮೀಣ ಸೇವೆ ಕಡ್ಡಾಯವಲ್ಲ ಎಂದು ಘೋಷಿಸಿ ಸುಗ್ರೀವಾಜ್ಞೆ ಹೊರಡಿಸಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ . ಇದರಿಂದ ಪದವಿ ಪಡೆದ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ನಿರ್ವಹಿಸಲು ಉದಾಸೀನ ತೋರುತ್ತದೆ ಎಂದು ತಿಳಿದು ಬರುತ್ತದೆ .

Advertisement

ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಜನರ ಅವಶ್ಯಕತೆಗಳನ್ನು ಅವರ ಪ್ರದೇಶದಲ್ಲಿಯೇ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಿ , ಗ್ರಾಮೀಣ ಪ್ರದೇಶಗಳನ್ನು ಸುದೃಢವಾಗಿಸುವದರ ಮೂಲಕ ನಮ್ಮ ವೃತ್ತಿಯನ್ನೂ ಆರೋಗ್ಯಕರವಾಗಿ ನಿಭಾಯಿಸೋಣ ಎಂಬ ಸದಾಶಯ ನನ್ನದು ಎನ್ನುತ್ತಾರೆ ಡಾ.ಆದಿತ್ಯ ನಾರಾಯಣ ಭಟ್‌.

Young doctors are now showing more interest in opening clinics in rural areas. The most essential facility is related to health. Today’s young doctors are providing such a facility to villages and rural areas. Young doctors have opened clinics in many places.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಹಕನಿಗೆ ಶಾಕ್‌ ಕೊಟ್ಟ ವಿದ್ಯುತ್‌ ಇಲಾಖೆ : ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಕಂಡು ವ್ಯಕ್ತಿ ಕಂಗಾಲು

ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್‌ ಉಚಿತ(Free Current). ಇಂಥ…

2 hours ago

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…

7 hours ago

Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?

ಈಗಿನ ಪ್ರಕಾರ ಮೇ 21 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದೆ. ಮುಂಗಾರು…

10 hours ago

ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ

ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು…

10 hours ago

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

24 hours ago