MIRROR FOCUS

ಕಾಲೇಜು ವಿದ್ಯಾರ್ಥಿಯೂ ಹೌದು-ಜನಪ್ರತಿನಿಧಿಯೂ ಹೌದು | ಈಶ್ವರಮಂಗಲದ ಈ ಯುವ ಜನಪ್ರತಿನಿಧಿ ಜಿಲ್ಲೆಗೆ ಮಾದರಿ ಏಕೆ ಗೊತ್ತಾ ? |

Share

ಈ ಯುವ ಜನಪ್ರತಿನಿಧಿಯ ಸಾಹಸ ಇಡೀ ಜಿಲ್ಲೆಗೆ ಮಾದರಿ. ಜನಪ್ರತಿನಿಧಿ ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿಯೂ ಹೌದು, ಪಕ್ಷದ ಜವಾಬ್ದಾರಿಯೂ ಇದೆ…!. ಈ ಯುವಕನ ವಯಸ್ಸು ಕೇವಲ 23…!. ಒಬ್ಬ ಗ್ರಾಮ ಪಂಚಾಯತ್‌ ಸದಸ್ಯ ಏನು ಮಾಡಬಹುದು ಹಾಗೂ ಏನು ಮಾಡಬೇಕು ಎನ್ನುವುದಕ್ಕೂ ಈ ಯುವಕ ಮಾದರಿ. ಅಂದ ಹಾಗೆ ಅತೀ ಕಡಿಮೆ ವಯಸ್ಸಿನ ಈ ಯುವನಾಯಕನ ಹೆಸರು ಚಂದ್ರಹಾಸ ಈಶ್ವರಮಂಗಲ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ ಸದಸ್ಯ ಚಂದ್ರಹಾಸ ಈಶ್ವರಮಂಗಲ. ಅತೀ ಕಡಿಮೆ ವಯಸ್ಸಿನ ಉತ್ಸಾಹಿ ಜನಪ್ರತಿನಿಧಿ. ಕಾನೂನು ಪದವಿ ವ್ಯಾಸಾಂಗ ಮಾಡುತ್ತಿರುವ ಇವರು ಈಗ ಬಿಜೆಪಿ ಯುವಮೋರ್ಚಾ ಗ್ರಾಮಾಂತರ ಮಂಡಲ ಕಾರ್ಯದರ್ಶಿಯೂ ಹೌದು. ಅಷ್ಟೇ ಅಲ್ಲ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ತರುಣ. ಕೊರೋನಾ ಲಾಕ್ಡೌನ್‌ ಸಮಯದಲ್ಲಿ ಸಹೋದರನ ಜೊತೆ ತಾವೇ ಅಂಗಡಿ ತೆರೆದು ಹಸಿ ಮೀನು ವ್ಯಾಪಾರನ್ನೂ ಆರಂಭಿಸಿದ ಉದ್ಯಮಿಯೂ ಹೌದು. ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಮಯದಲ್ಲಿ ಅವರ ವಾರ್ಡ್‌ನಲ್ಲಿ ಗ್ರಾಪಂ ಚುನಾವಣೆಗೆ ಸ್ಫರ್ಧಿಸಿ ಒಟ್ಟು 434 ಮತಗಳಲ್ಲಿ  410  ಮತಗಳನ್ನು ಪಡೆದು ವಿಜೇತರಾದ ಯುವ ಮುಂದಾಳು. ಸುಮಾರು ಶೇ.94 ರಷ್ಟು ಮತ ಪಡೆದಿದ್ದರು. ಇಷ್ಟಕ್ಕೂ ಈಗ ಇವರು ಗುರುತಿಸಿಕೊಂಡದ್ದು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲಪಿಸುವ ಕಾರಣದಿಂದ.

 

ಕೇಂದ್ರ ಸರಕಾರದ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳನ್ನು, ಕನಸುಗಳನ್ನು ಗ್ರಾಮಮಟ್ಟದಲ್ಲಿ, ಅವರ ವಾರ್ಡ್‌ ಚಿಮಿಣಿಗುಡ್ಡೆಯಲ್ಲಿ  ಜಾರಿ ಮಾಡುತ್ತಿರುವ ಕಾರಣಕ್ಕೆ ಈಗ ಸುದ್ದಿಯಾಗಿದ್ದಾರೆ. ಚುನಾವಣೆಗೆ ಸ್ಫರ್ಧೆಗೂ ಮುನ್ನವೇ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಚಂದ್ರಹಾಸ್‌ ಕೇಂದ್ರ ಸರಕಾರದ, ರಾಜ್ಯದ ಸರಕಾರದ ಯೋಜನೆಗಳಾದ ಕಿಸಾನ್‌ ಸಮ್ಮಾನ್‌, ವೃದ್ಧಾಪ್ಯ ವೇತನಗಳು , ಸಂಧ್ಯಾಸುರಕ್ಷಾ, ವಿಧವಾ ವೇತನಾ, ಮನಸ್ವಿನಿ ಯೋಜನೆ, ಗ್ಯಾಸ್‌ ಸಂಪರ್ಕ, ಉದ್ಯೋಗ ಖಾತ್ರಿ ಯೋಜನೆ …ಇತ್ಯಾದಿ ಯೋಜನೆಗಳನ್ನು  ತಮ್ಮ ವಾರ್ಡ್‌ ನಲ್ಲಿ ನ ಮನೆಗಳನ್ನು  ಹುಡುಕಿ ಈ ಯೋಜನೆ ಲಭ್ಯವಾಗದ ಕುಟುಂಬಗಳಿಗೆ ತಲುಪಿಸುತ್ತಿದ್ದರು. ಜಾತಿ, ಧರ್ಮ ಯಾವುದನ್ನೂ ನೋಡದೆ ಮಾನವೀಯ ನೆಲೆಯಲ್ಲಿ  ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳಿಗೆ ಅರ್ಹವಾದ ಕುಟುಂಬ ಹುಡುಕಿ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸಿ, ದಾಖಲೆ ತಯಾರು ಮಾಡಿಸಿ, ಅಧಿಕಾರಿಗಳನ್ನು  ಮಾತನಾಡಿಸಿ ಸರಕಾರದ ಯೋಜನೆ ಬರುವಂತೆ ಮಾಡಿದ್ದರು.

 

ಚುನಾವಣೆಗಾಗಿ ಈ ಸಾಮಾಜಿಕ ಕೆಲಸ ಮಾಡುತ್ತಿರಲಿಲ್ಲ, ಕಾಲೇಜು ಜೊತೆಗೆ ಈ ಕೆಲಸವನ್ನು ಸಾಮಾಜಿಕ ಕಳಕಳಿಯಿಂದ ಮಾಡುತ್ತಲೇ ಇದ್ದರು. ಅನಿವಾರ್ಯವಾಗಿ ಚುನಾವಣೆಗೆ ಸ್ಫರ್ಧೆ ಮಾಡಿದರು. ಆಗ ಅಧಿಕ ಮತಗಳಿಂದ ಹಾಗೂ ಅತೀ ಕಿರಿಯ ಸದಸ್ಯನಾಗಿ ವಿಜೇತನಾದರು.ಬಳಿಕ ಸಮಾಜ ಸೇವೆಯೆ ಹುಮ್ಮಸ್ಸು ಹೆಚ್ಚಾಯಿತು.  ಪ್ರತೀ ಮನೆ ಮನೆಗೂ ಸರಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಈಗ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ ಕಾಲೇಜಿಗೂ ಹೋಗುತ್ತಾರೆ. ಈಗಾಗಲೇ ತಮ್ಮ ವಾರ್ಡ್‌ ಹಾಗೂ ಆಸುಪಾಸಿನ  ಸುಮಾರು 100 ಕ್ಕಿಂತಲೂ ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ತಲುಪಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಅನುದಾನಕ್ಕೆ ಒದಗಿಸಿಕೊಡಲು ಪ್ರಯತ್ನ ಮಾಡಿದ್ದಾರೆ.ಈಚೆಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಚಿಮಿಣಿಗುಡ್ಡೆ ಎಂಬಲ್ಲಿ ತೀವ್ರ ಅನಾರೋಗ್ಯದಿಂದ ಅಂಗವೈಕಲ್ಯ ಹೊಂದಿದ್ದ ಉದಯ ಎಂಬವರಿಗೆ ವಿಕಲಚೇತನ‌ ಕಾರ್ಡು ಮಾಡಿಸಿ ಮಾಸಿಕ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕಂದಾಯ ಇಲಾಖೆಯ ವತಿಯಿಂದ ನಡೆಯುವ ಬೆಳೆ ಸಮೀಕ್ಷೆ ಕಾರ್ಯದಲ್ಲೂ ಚಂದ್ರಹಾಸ ತೊಡಗಿಸಿಕೊಂಡಿದ್ದ ಕಾರಣ ಅವರ ವಾರ್ಡ್‌ ಪ್ರತೀ ಮನೆ ಸಂಪರ್ಕ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಇತ್ತು. ಹೀಗಾಗಿ ಇದನ್ನೇ ಬಳಸಿಕೊಂಡು ಸಾಮಾಜಿಕ ಕೆಲಸಗಳಲ್ಲಿ  ತೊಡಗಿಸಿಕೊಂಡರು.

ಒಬ್ಬ ಗ್ರಾಮ ಪಂಚಾಯತ್‌ ಸದಸ್ಯ ತಮ್ಮ ವಾರ್ಡ್‌ ನಲ್ಲಿ  ಹೇಗೆ ಕೆಲಸ ಮಾಡಬಹುದು  ಹಾಗೂ ಸಿಕ್ಕಿದ ಅವಕಾಶಗಳನ್ನು ವಾರ್ಡ್‌ ನ ಅಭಿವೃದ್ಧಿ ಕಾರ್ಯ, ಜನರಿಗೆ ಸಹಾಯ ಮಾಡಲು ಹೇಗೆ ಬಳಕೆ ಮಾಡಬಹುದು ಎನ್ನುವುದಕ್ಕೂ ಈ ಯುವ ಜನಪ್ರತಿನಿಧಿ ಮಾದರಿಯಾಗಿದ್ದಾರೆ.ಎಲ್ಲೆಡೆಯೂ ಇಂತಹ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಬೆಳೆದರೆ ಗ್ರಾಮೀಣ ಭಾರತವೂ ಬಹುಬೇಗನೆ ಬೆಳಗಲಿದೆ.

ಸರಕಾರದಿಂದ ಲಭ್ಯವಾಗುವ ಯೋಜನೆಯಿಂದ ತನ್ನ ವಾರ್ಡ್‌ನ ಒಂದೇ ಒಂದು ಕುಟುಂಬವೂ ವಂಚಿತರಾಗಬಾರದು ಎಂದು ಮನೆ‌ ಮನೆಗೆ ಭೇಟಿ ನೀಡಿ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ ಚಂದ್ರಹಾಸ ಈಶ್ವರಮಂಗಲ
ಚಂದ್ರಹಾಸ ಈಶ್ವರಮಂಗಲ

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…

13 hours ago

ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…

13 hours ago

ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಸಂಕಷ್ಟ | ಬೆಂಬಲ ಬೆಲೆ ಯೋಜನೆ ರಾಜ್ಯಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿ ಪತ್ರ | ಕೇಂದ್ರದ ಗಮನ ಸೆಳೆದ ಸಚಿವರು |

ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ-ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ-ಪಿಡಿಪಿ ಯೋಜನೆಯನ್ನು…

13 hours ago

ಅಕ್ರಮ ಮರಳು ಗಣಿಗಾರಿಕೆ | 5 ವರ್ಷಗಳಲ್ಲಿ 47 ಕೋಟಿ ರೂಪಾಯಿ ದಂಡ ಸಂಗ್ರಹ

ಅನಧಿಕೃತ ಮರಳು ಸಾಗಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಮರಳು ಸಮಿತಿಗೆ…

14 hours ago

ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಲಭಿಸುತ್ತದೆ – ಶಿಕ್ಷಣ ತಜ್ಞ ಗುರುರಾಜ ಕರ್ಜಗಿ

ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ…

14 hours ago

ಎಪ್ರಿಲ್‌ನಲ್ಲಿ ಶುಕ್ರನು 9 ರಾಶಿಗಳಲ್ಲಿ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.

14 hours ago