ಕೃಷಿ ಕ್ಷೇತ್ರದತ್ತ ಯುವಕರ ಆಕರ್ಷಣೆಗೆ ತಂತ್ರಜ್ಞಾನದ ಬಳಕೆ ಅಗತ್ಯ

December 4, 2024
6:17 AM

ಕೃಷಿಯಲ್ಲಿ  ತಂತ್ರಜ್ಞಾನವನ್ನು ಅಗತ್ಯಕ್ಕೆ  ತಕ್ಕಂತೆ  ಬಳಸಿಕೊಳ್ಳುವ ಮೂಲಕ ಅದರ ಪ್ರಯೋಜನ  ರೈತರಿಗೆ  ಸಿಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಕೃಷಿ ಕ್ಷೇತ್ರದತ್ತ  ಯುವಕರನ್ನು ಆಕರ್ಷಿಸುವ ಕೆಲಸ ಆಗಬೇಕಾಗಿದೆ. ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕೃಷಿ ಸಚಿವ  ಚೆಲುವರಾಯಸ್ವಾಮಿ ಹೇಳಿದರು.

Advertisement
Advertisement

ಬೆಂಗಳೂರಿನ  ಕೃಷಿ  ವಿಶ್ವವಿದ್ಯಾಲಯದ ವತಿಯಿಂದ  ಜಿಕೆವಿಕೆಯಲ್ಲಿ ಅಗ್ರಿಕಲ್ಚರ್ ಫ್ಯೂಚರ್, startup conclave ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನವೋದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡಲು  ಮುಂದಾಗಿದೆ. ಈ ಸಂಬಂಧ  ಮುಂಬರುವ ಬಜೆಟ್ ನಲ್ಲೂ ಕೂಡ  ಅನುದಾನ ಹೆಚ್ಚು  ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ  ಸಮಾಲೋಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಕೃಷಿಗೆ ಸಂಬಂಧಿಸಿದ ಡ್ರೋನ್ ಗಳು ,  ಬಿತ್ತನೆ ಬೀಜ,  ರಸಗೊಬ್ಬರ  ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆ ಮತ್ತು ಮಳಿಗೆಗಳನ್ನು ವೀಕ್ಷಿಸಿದ ಸಚಿವರು  ಸಂಬಂಧಪಟ್ಟವರಿಂದ ಮಾಹಿತಿ  ಪಡೆದುಕೊಂಡರು. ವಿವಿಧ ಆವಿಷ್ಕಾರಗಳ ಕುರಿತ ಕಾಫಿಟೇಬಲ್ ಪುಸ್ತಕ ಬಿಡುಗಡೆ ಮಾಡಿದರು.

ಈ ವೇಳೆ  ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ಸೇರಿದಂತೆ  ಹಲವರು  ಉಪಸ್ಥಿತರಿದ್ದರು.

Advertisement

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಷಾಢ ಮಾಸದಲ್ಲಿ ಶಕ್ತಿದೇವತೆಯ ಉಪಾಸನೆ ಏಕೆ ಅಗತ್ಯ..?
June 29, 2025
11:46 PM
by: The Rural Mirror ಸುದ್ದಿಜಾಲ
ಸೇವೆಗಳನ್ನು ಸುಧಾರಿಸಲು ಭಕ್ತರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಟಿಟಿಡಿ
June 29, 2025
11:31 PM
by: The Rural Mirror ಸುದ್ದಿಜಾಲ
ರೈತರಿಗೆ ಕೃಷಿ ಬಗ್ಗೆ ಅರಿವು ಕಾರ್ಯಕ್ರಮ
June 29, 2025
11:22 PM
by: The Rural Mirror ಸುದ್ದಿಜಾಲ
ಕೆಂಪು ಕಲ್ಲು ಅಲಭ್ಯತೆ | ಕೆಲಸ ಕಳಕೊಂಡಿರುವ ಕಟ್ಟಡ ಕಾರ್ಮಿಕರು | ನೆರವಿಗೆ ಧಾವಿಸಬೇಕೆಂದು ಕಾರ್ಮಿಕ ಸಚಿವರಿಗೆ ಮನವಿ
June 29, 2025
11:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group