ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಅಭಿಯಾನ ಗುತ್ತಿಗಾರಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಕಮಿಲದಿಂದ ಗುತ್ತಿಗಾರುವರೆಗೆ ಸ್ವಚ್ಛತಾ ಅಭಿಯಾನದಲ್ಲಿ ಕಮಿಲದ ಬಾಂಧವ್ಯ ಗೆಳೆಯರ ಬಳಗ ಹಾಗೂ ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಜೊತೆಯಾಗಿದ್ದರು.
ಈ ವೇಳೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯ ದೇವಸ್ಯ ಎಂಬಲ್ಲಿ ರಸ್ತೆ ಕುಸಿಯುವ ಭೀತಿಯ ಪ್ರದೇಶ ಎಂದು ಯುವಕರ ತಂಡ ಎಚ್ಚರಿಕೆಗಾಗಿ ರಿಬ್ಬನ್ ಅಳವಡಿಸಿದರು. ಇದು ಲೋಕೋಪಯೋಗಿ ಇಲಾಖೆಯ ಅಧೀನದ ರಸ್ತೆಯಾಗಿದ್ದು, ಈಗ ರಸ್ತೆ ಬದಿ ಕುಸಿಯುವ ಭೀತಿ ಇದ್ದು ಈಗಾಗಲೇ ಕೆಲವು ವಾಹನಗಳು ಸೈಡ್ ಕೊಡುವ ವೇಳೆ ಚರಂಡಿ ಬಿದ್ದ ಘಟನೆ ನಡೆದಿದೆ. ಇಲ್ಲಿ ವಾಹನಗಳು ಸೈಡ್ ಕೊಡಲೂ ಪರದಾಟ ನಡೆಸಬೇಕಾದ ಸ್ಥಿತಿ ಇತ್ತು. ಇದಕ್ಕಾಗಿ ಚರಂಡಿಗೆ ತಡೆಗೋಡೆ ಇಲ್ಲಿ ಅಗತ್ಯ ಇದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿತರು ಈ ಕಡೆ ಗಮನಹರಿಸಬೇಕಿದೆ. ಸದ್ಯ ಯುವಕರು ಎಚ್ಚರಿಕೆಗಾಗಿ ರಿಬ್ಬನ್ ಅಳವಡಿಕೆ ಕೆಲಸ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಗಳ ಅತಿವೇಗ ಹಾಗೂ ಅತಿಯಾದ LED ಲೈಟುಗಳ ವಿರುದ್ಧ…
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಕಾರದಿಂದ ಹವಾಮಾನ ಸ್ನೇಹಿ ಕೃಷಿ, ಡ್ರೋನ್, AI ಹಾಗೂ ಸ್ಮಾರ್ಟ್…
ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ವಿಜಯಪುರದಲ್ಲಿ ಈ ವರ್ಷ ತಾಪಮಾನ 40 ಡಿಗ್ರಿ…
ಉತ್ತರ ಪ್ರದೇಶದಲ್ಲಿ ಭಾರೀ ಧೂಳುಗಾಳಿ, ಮಳೆ ಹಾಗೂ ಮಿಂಚಿನಿಂದ 140ಕ್ಕೂ ಹೆಚ್ಚು ಮಂದಿ…
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಧ್ಯಾಹ್ನ ನಂತರ ಗುಡುಗು-ಮಿಂಚು ಸಹಿತ ಸಾಧಾರಣ…
ಕರ್ನಾಟಕದ ಹಲವೆಡೆ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಕರಾವಳಿಯಲ್ಲಿ ಮೇ 20ರಿಂದ ಮುಂಗಾರು…