#ಯುಗಾದಿ ಹಬ್ಬದ ಶುಭಾಶಯ | ಬದುಕಿನಲ್ಲಿ ಬೇವು ಬೆಲ್ಲ ತಿನ್ನುತ್ತಾ ಒಳ್ಳೆಯವರಾಗೋಣ, ಒಳ್ಳೆಯದು ಮಾಡೋಣ… |

April 2, 2022
7:15 AM

ಪ್ಲವನಾಮ ಸಂವತ್ಸರವು ಕೊನೆಯಾಗುತ್ತಿರುವ ಸಂದರ್ಭದಲ್ಲಿ, ಶುಭಕೃತ್ ಸಂವತ್ಸರ ಹೊಸ್ತಿಲ್ಲಲ್ಲಿ ಇದ್ದೇವೆ. ಎರಡು ವರ್ಷಗಳಿಂದ ಯುಗಾದಿಯ ಸಂಭ್ರಮಕ್ಕೆ ಕಡಿವಾಣ ಹಾಕಿ ಕೊಂಡು ಕಳೆದಿದ್ದೇವೆ. ಕೊರೋನಾ ಸಮಯದಲ್ಲಿ ಯಾವ ಸಂಭ್ರಮಕ್ಕೂ ಅವಕಾಶವಿರಲಿಲ್ಲ. ಆದರೆ ಈ ಬಾರಿ ಎಲ್ಲವೂ ಮುಕ್ತ ಮುಕ್ತ. ಕೊರೊನಾ ತೀವ್ರತೆ ಕಮ್ಮಿಯಾಗಿದೆ. ಹೊಸ ವರ್ಷದ ಸಂತಸಕ್ಕೆ ಬ್ರೇಕ್ ಇಲ್ಲವೇ ಇಲ್ಲ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.

Advertisement
Advertisement
Advertisement
Advertisement

ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಈ ಹಬ್ಬವು ಹಿಂದುಗಳ ವರ್ಷಾರಂಭದ ಪವಿತ್ರ ದಿನ. ಯುಗಾದಿ ಎಂದರೆ ನಮಗೆ ಹೊಸವರ್ಷ. ಹೊಸತನಕ್ಕೆ ನಾಂದಿ. ಯುಗಾದಿ ಸಂಸ್ಕೃತ ಶಬ್ದವಾಗಿದೆ. ಯುಗ+ ಆದಿ= ಯುಗಾದಿ . ಯುಗವೆಂದರೆ ಅವಧಿ, ಆದಿ ಎಂದರೆ ಪ್ರಾರಂಭ. ಹೊಸ ಸಂವತ್ಸರದ ಆರಂಭ.

Advertisement

ಪ್ರಕೃತಿಯಲ್ಲಿ ಈ ಪರ್ವ ಕಾಲದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಗಿಡಮರಗಳ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿ ಹಲವು ರೀತಿಯ ವ್ಯತ್ಯಾಸ ಗೋಚರವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಶಾಖ ಹೆಚ್ಚಾಗಿ ಇರುವುದರಿಂದ ಅಸಾಧ್ಯವಾದ ಸೆಖೆಯ ಅನುಭವ .
ಯುಗಾದಿಯ ಸುರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆಯು ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.ಹೊಸ ಕನಸುಗಳು , ನಿರೀಕ್ಷೆಗಳು , ಎಲ್ಲವೂ ಚಿಗುರುವ ಸಂಭ್ರಮ. ಮನೆ ಮನದಲ್ಲಿ ನವಚೈತನ್ಯ ತುಂಬುವ ಕಾಲ. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ.

ಈ ಹಬ್ಬ ನಮ್ಮ ನಿತ್ಯ ಜೀವನಕ್ಕೆ ಅಗತ್ಯವಾದ ಚೈತನ್ಯ ವನ್ನು ತುಂಬುತ್ತದೆ. ಈ ಸಂದರ್ಭದಲ್ಲಿನ ಎಲ್ಲಾ ಆಚರಣೆಗಳೂ ಮಹತ್ವದ್ದೇ ಆಗಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಮಹತ್ವವಿದೆ. ಆದಿನ ನಾವು ಪ್ರಾತಃಕಾಲದಲ್ಲಿ ಮಾಡುವ ಎಣ್ಣೆ ಮೈಗೆ ಹಚ್ಚಿ ಮಾಡುವ ಅಭ್ಯಂಗವಿರಲಿ, ಆದಿನ ವಿಶೇಷವಾದ ಬೇವು ಬೆಲ್ಲದ ಸೇವನೆಯಾಗಿರಲಿ, ಪಂಚಾಂಗ ಶ್ರವಣವಿರಲಿ ಎಲ್ಲವಕ್ಕೂ ಅದರದ್ದೇ ಆದ ಮಹತ್ವವಿದೆ.

Advertisement
ನಮ್ಮ ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ವಿಶೇಷತೆ ಇದೆ. ದೀಪಾವಳಿಯಲ್ಲಿ ಅಭ್ಯಂಗ ವಿಶೇಷವಾದರೆ , ಯುಗಾದಿಯಲ್ಲಿ ಉಣ್ಣುವುದೇ ಹಬ್ಬ. ಹತ್ತು ಹಲವು ತಿನಿಸುಗಳನ್ನು ಮಾಡಿ , ನೆಂಟರಿಷ್ಟರೊಂದಿಗೆ ಹಂಚಿ ತಿನ್ನುವುದು ಯುಗಾದಿಯ ವಿಶೇಷಗಳಲ್ಲಿ ಒಂದು.ಈ ಬಾರಿಯ ಯುಗಾದಿ ನಮ್ಮೆಲ್ಲರಿಗೂ ಹೊಸ ಉಲ್ಲಾಸವನ್ನು ತುಂಬಲಿ, ಬದುಕಿನಲಿ ಕೃತಕತೆ ದೂರವಾಗಿ ಸಹಜತೆಗೆ ಮರಳುವಂತಾಗಲಿ.

# ಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?
February 1, 2025
8:07 AM
by: ಮಹೇಶ್ ಪುಚ್ಚಪ್ಪಾಡಿ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror