ಅಡಿಕೆ ಮರ ಏರುವ ಸುಲಭ ಉಪಾಯದ ಪ್ರಯತ್ನದಲ್ಲಿ ಪದವೀಧರ ಕೃಷಿಕ

May 5, 2019
2:00 PM

ಬೆಳ್ಳಾರೆ: ಇವರು ಸಿವಿಲ್ ಇಂಜಿನಿಯರ್. ಕೃಷಿ ಮಾಡುತ್ತಿರುವ ಯುವಕ. ಇಂಜಿನಿಯರಿಂಗ್ ಬಳಿಕ ಕೃಷಿಯಲ್ಲೇ ತೊಡಗಿಕೊಂಡು ಕೃಷಿ ಅಭಿವೃದ್ಧಿಗೆ ವಿವಿಧ ಪ್ರಯತ್ನ ಮಾಡಿದ್ದಾರೆ. ಇದೀಗ ಅಡಿಕೆ ಮರ ಏರಲು ಸುಲಭ ಉಪಾಯ ಕಂಡುಹಿಡಿಯುವ ಪ್ರಯತ್ನದಲ್ಲಿ ಇದ್ದಾರೆ. ಈ ಯುವ ಕೃಷಿಕ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ.

 

 

ಅಡಿಕೆ ಬೆಳೆಗಾರರಿಗೆ ಸದಾ ಕಾಡುವ ಚಿಂತೆ, ಅಡಿಕೆ ಮರ ಏರುವುದು ಹೇಗೆ ? ಅದರ ಜೊತೆಗೆ ಕೊಳೆರೋಗಕ್ಕೆ ಔಷಧಿ ಸಿಂಪಡಣೆ , ಅಡಿಕೆ ಕೊಯ್ಲು ಇದೆರಡೂ ಈಗ ಬೆಳೆಗಾರರಿಗೆ ಕಾಡುವ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ವಿವಿಧ ಪ್ರಯತ್ನ ಆಗುತ್ತಿದೆ. ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೊಂದು ಕಡೆ ಸುಲಭದಲ್ಲಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಮರ ಏರಬಹುದು ಎಂಬ ಬಗ್ಗೆಯೂ ಅಧ್ಯಯನ, ಪ್ರಯತ್ನ ನಡೆಯುತ್ತಿದೆ. ಇಂತಹ ಒಂದು ಪ್ರಯತ್ನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ ಮಾಡಿದ್ದಾರೆ.

Advertisement


ಲಾಲ್ ಕೃಷ್ಣ್ ಅವರು ಮರ ಏರುವ ಯಂತ್ರಗಳ ಬಗ್ಗೆ , ಸುಲಭ ಉಪಾಯಗಳ ಬಗ್ಗೆ ಹುಡುಕುತ್ತಿದ್ದಾಗ ಬ್ರೆಜಿಲ್ ನಲ್ಲಿ ಕೃಷಿಕರು ಬಳ್ಳಿಯ ಸಹಾಯದಿಂದ ಮರ ಏರುವ ಉಪಾಯವನ್ನು ನೋಡಿದರು. ಅಲ್ಲಿ ತೆಂಗಿನ ಮರಕ್ಕೆ ಈ ಬಳ್ಳಿಯ ಸಹಾಯದಿಂದ ಏರುತ್ತಿದ್ದರು. ಅದೇ ಮಾದರಿಯಲ್ಲಿ ಅಡಿಕೆ ಮರ ಏರಲು ಬೇಕಾದ ವಿನ್ಯಾಸ ಮಾಡಿದರು. ಎರಡು ಬಳ್ಳಿ ಹಾಗೂ ಬೈಕ್, ಸ್ಕೂಟರ್ ಟಯರ್ ಇದ್ದರೆ ಈ ಪ್ರಯತ್ನ ಸಾಧ್ಯವಾಗುತ್ತದೆ. ಬಳ್ಳಿಯ ಒಂದು ತುದಿಗೆ ಟಯರ್ ಕಟ್ಟಿ, ಇನ್ನೊಂದು ತುದಿಯನ್ನು ಅಡಿಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಐಡಿಯಾ ಇದು. ಇದರಲ್ಲಿ ಇನ್ನಷ್ಟು ಸುಧಾರಣೆಗಳು ಇವೆ. ಈ ಮೂಲಕ ಸುಲಭದಲ್ಲಿ ಮರ ಏರಲು ಸಾಧ್ಯವಾಗುತ್ತದೆ, ಹಾಗೂ ಆಯಾಸ ಕಡಿಮೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಇನ್ನೂ ಸುಧಾರಣೆಗಳು ಇವೆ. ಇದು ಆರಂಭವಷ್ಟೇ ಎನ್ನುವ ಲಾಲ್ ಕೃಷ್ಣ, ಇದರಲ್ಲಿ ಇನ್ನಷ್ಟು ರಕ್ಷಣಾ ವ್ಯವಸ್ಥೆಗಳನ್ನೂ ಮರ ಏರುವವರು ಮಾಡಿಕೊಳ್ಳಬಹುದು ಎನ್ನುತ್ತಾರೆ.

ಕೃಷಿಕರ ಬೆಳವಣಿಗೆಗೆ ಹಾಗೂ ಕೃಷಿ ಸುಲಭಕ್ಕೆ ಲಾಲ್ ಕೃಷ್ಣ ಹಾಗೂ ಅವರ ಕುಟುಂಬ ವಿವಿಧ ಪ್ರಯೋಗ ಮಾಡುತ್ತಲೇ ಇದ್ದಾರೆ. ಯುವಕರ ಯೋಚನೆಗಳಿಗೆ ತಕ್ಕಂತೆ ಲಾಲ್ ಕೃಷ್ಣ ಯುವ ಕೃಷಿಕರಾಗಿ ಹೊಸ ಹೊಸ ಐಡಿಯಾ ಹೊಂದಿರುವುದು ಕೃಷಿ ಬೆಳವಣಿಗೆಗೆ ಭರವಸೆ ಮೂಡಿಸುತ್ತಾರೆ.

(ಲಾಲ್ ಕೃಷ್ಣ ಸಂಪರ್ಕ – 9449568502)

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವವಂತೆ ರೈತರ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ
September 18, 2025
9:06 PM
by: The Rural Mirror ಸುದ್ದಿಜಾಲ
ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!
September 18, 2025
6:59 AM
by: ದ ರೂರಲ್ ಮಿರರ್.ಕಾಂ
ರಾಜ್ಯಕ್ಕೆ ಬಾಕಿ ಇರುವ ಯೂರಿಯಾ ತ್ವರಿತ ಬಿಡುಗಡೆಗೆ ಒತ್ತಾಯ
September 17, 2025
8:13 PM
by: The Rural Mirror ಸುದ್ದಿಜಾಲ
ಕಲಬುರ್ಗಿಯಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಮುಖ್ಯಮಂತ್ರಿ | ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
September 17, 2025
8:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group