ಸುಳ್ಯ: ಪ್ರಯಾಣಿಕರೊಬ್ಬರು ಪುತ್ತೂರು- ಸುಬ್ರಹ್ಮಣ್ಯ ರಾಜಹಂಸ ಬಸ್ಸಲ್ಲಿ ಕೂತಿದ್ದರು. ಅದು ಬೆಂಗಳೂರಿಗೆ ತೆರಳುವ ಬಸ್ಸು. ಕೂತಿದ್ದಾಗ ಜಿರಲೆಯೊಂದು ಮೇಲಿಂದಲೇ ಓಡಿತು. ಪರವಾಗಿಲ್ಲ, ಮಳೆಗಾಲವಲ್ಲಾ ಇದೆಲ್ಲಾ ಇರುತ್ತೆ ಎಂದು ಸುಮ್ಮನೆ ಕುಳಿತರು. ಸ್ವಲ್ಪ ಹೊತ್ತಲ್ಲ ಇನ್ನಷ್ಟು ಜಿರಲೆ ಮೇಲೆಲ್ಲಾ ಓಡಲು ಶುರು ಮಾಡಿತು, ಸಹವಾಸವೇ ಬೇಡವೆಂದು ಬೇರೆ ಸೀಟಲ್ಲಿ ಕುಳಿತರು…!
ಮಳೆಗಾಲ ಜಿರಲೆ ಸೇರಿದಂತೆ ಸಣ್ಣಪುಟ್ಟ ಕೀಟಗಳು ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜಿರಲೆ ಇದೆ ಎಂದರೆ ಅದು ನಿರ್ಲಕ್ಷ್ಯವೇ ಸರಿ. ಅದೂ ಬೆಂಗಳೂರಿಗೆ ತೆರಳುವ ಬಸ್ಸಲ್ಲಿ ಈ ಪರಿಯಾಗಿ ಜಿರಲೆ ಇದೆ ಎಂದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕನ ಗೋಳು ಯಾರಿಗೆ ಹೇಳಿ..? ಹೀಗಾಗಿ ಕೆ ಎಸ್ ಆರ್ ಟಿ ಸಿ ಈ ಕಡೆಗೆ ಕೊಂಚ ಗಮನಹರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel