ಆಚರಣೆಯ ಮೆರುಗು ಹೆಚ್ಚಿಸುವ ನವರಾತ್ರಿ ವೇಷಗಳು

October 7, 2019
2:08 PM

ಸುಳ್ಯ: ನವರಾತ್ರಿ ಎಂದೊಡನೆ ಮನಸಿಗೆ ಓಡೋಡಿ ಬರುವುದು ಶುದ್ಧ ಶಾಸ್ತ್ರೀಯ ಸಂಗೀತದ ಇಂಪು, ಚೆಂಡೆ, ವಾದ್ಯಗಳ ಅಬ್ಬರ, ನವರಾತ್ರಿ ವೇಷಗಳ ವರ್ಣ ವೈವಿಧ್ಯ. ನವರಾತ್ರಿ ಸಂಗೀತೋತ್ಸವಗಳ ಮೂಲಕ ಶಾಸ್ತ್ರೀಯ ಸಂಗೀತದ ಇಂಪು ಮನಸನ್ನು ಪುಳಕಿತಗೊಳಿಸಿದರೆ, ಚೆಂಡೆ ವಾದ್ಯಗಳ ಅಬ್ಬರದೊಂದಿಗೆ ಆರ್ಭಟಿಸುವ ರಾಕ್ಷಸ ವೇಷಗಳು, ವೈವಿಧ್ಯ ಕುಣಿತಗಳೊಂದಿಗೆ ತಂಡೋಪ ತಂಡವಾಗಿ ತಿರುಗಾಟ ನಡೆಸುವ ಹುಲಿ, ಸಿಂಹ, ಕರಡಿಯ ನವರಾತ್ರಿ ವೇಷಗಳು ದಸರಾ ಆಚರಣೆಯ ಮೆರುಗನ್ನು ಹೆಚ್ಚಸುತ್ತದೆ.

Advertisement
Advertisement
Advertisement
Advertisement

Advertisement

ನವರಾತ್ರಿ ಆರಂಭದಿಂದಲೂ ನಗರ, ಗ್ರಾಮದ ಬೀದಿಗಳಲ್ಲಿ ವೈವಿಧ್ಯಮಯ ಹುಲಿ, ಸಿಂಹ, ಕರಡಿ ವೇಷಗಳ ಕುಣಿತಗಳು ಜನಾಕರ್ಷಣೆಯನ್ನು ಪಡೆಯುತ್ತವೆ. ಜೊತೆಗೆ ಬೇಟೆಗಾರನ ವೇಷ, ಹಾಸ್ಯಗಾರನ ವೇಷಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಒಂದೆರಡು ರಾಕ್ಷಸ, ಹುಲಿ, ಕರಡಿ, ಸಿಂಹ ವೇಷಗಳು, ಚೆಂಡೆ ವಾದನಕಾರರು ಸೇರಿದ ಚಿಕ್ಕ ಚಿಕ್ಕ ತಂಡಗಳು ಒಂದೆಡೆಯಾದರೆ, 10- 15 ಹುಲಿ, ಸಿಂಹ, ಕರಡಿ ವೇಷಗಳನ್ನೊಳಗೊಂಡ ದೊಡ್ಡ ತಂಡಗಳೂ ಕಂಡು ಬರುತ್ತಾರೆ. ಪಾರಂಪರಿಕ ನವರಾತ್ರಿ ವೇಷಗಳು ತುಳುನಾಡಿನ ದಸರಾ ಆಚರಣೆಯ ಅವಿಭಾಜ್ಯ ಅಂಗ.

Advertisement

 

ಗ್ರಾಮ, ನಗರ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಹುಲಿ, ಕರಡಿ, ಸಿಂಹಗಳ ವೈವಿಧ್ಯ ವೇಷಗಳ ಮೈ ನವಿರೇಳಿಸುವ ಕುಣಿತಗಳು, ರಾಕ್ಷಸ ವೇಷದ ಅಬ್ಬರ ದಸರಾ ಆಚರಣೆಯ ವೈಭವವನ್ನು ಹೆಚ್ಚಿಸುತ್ತದೆ. ಒಂಭತ್ತು ದಿನಗಳ ಕಾಲ ವೇಷ ಧರಿಸಿ ನಾಡಿನಾದ್ಯಂತ ಸಂಚರಿಸಿ ಹಬ್ಬವನ್ನು ಸಂಪನ್ನಗೊಳಿಸುವ ನವರಾತ್ರಿ ವೇಷಗಳು ವಿಜಯದಶಮಿ ದಿನದಂದು ತಿರುಗಾಟವನ್ನು ಕೊನೆಗೊಳಿಸುತ್ತಾರೆ. ಶಾರದೋತ್ಸವ, ದಸರಾ ಮೆರವಣಿಗೆಗಳಲ್ಲಿಯೂ ಭಾಗವಹಿಸಿದ ಬಳಿಕ ವೇಷವನ್ನು ತೆಗೆಯುವರು. ಹರಕೆ ಹೇಳಿ ನವರಾತ್ರಿ ವೇಷ ಹಾಕುವವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕ ನವರಾತ್ರಿ ವೇಷಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ವೇಷ ಭೂಷಣಗಳಲ್ಲಿಯೂ ಬದಲಾವಣೆ ಕಾಣುತ್ತಿದೆ ಎನ್ನುತ್ತಾರೆ ಹಿರಿಯರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
Weather Updates | ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಕ್ಷೀಣ |
January 30, 2025
11:47 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror