ಒಬ್ಬರಿಗೊಂದೇ “ಆಧಾರ್” – ಇಲ್ಲಿ ಇಬ್ಬರಿಗೊಂದೇ “ಆಧಾರ”…! : ಅಲೆದಾಡಿದ ಈ ಮಹಿಳೆಯರಿಗೆ ಪರಿಹಾರವೂ ದೂರ…!

November 27, 2019
10:06 AM

ಸುಳ್ಯ: ಒಬ್ಬರಿಗೊಂದೇ ಆಧಾರ . ದೇಶಕ್ಕೊಂದು ಆಧಾರ್, ವ್ಯಕ್ತಿಗೊಂದು ಆಧಾರ್ ನಂಬರ್…!.  ಹೀಗಾಗಿ ಈಗ ಎಲ್ಲಾ ದಾಖಲೆಗಳಿಗೂ ಆಧಾರ್ ಲಿಂಕ್. ಒಂದರ್ಥದಲ್ಲಿ ಬದುಕಿಗೇ ಆಧಾರ್ ಲಿಂಕ್..!. ಈ ಲಿಂಕ್.. ಲಿಂಕ್.. ಮಾಡಿ ಜನಸಾಮಾನ್ಯರು ಸುಲಭದ ಹಾದಿಯಲ್ಲಿದ್ದಾರೆ. ಕೆಲವರಿಗೆ ಆಧಾರ್ ಲಿಂಕ್ ಮಾಡುವುದಕ್ಕೂ ಆಧಾರ ಇಲ್ಲವಾಗಿದೆ. ಅವರಿಗೆ ಸಂಕಷ್ಟ ತಪ್ಪಿಲ್ಲ. ಈಗ ಲಿಂಕೂ ಇಲ್ಲ… ಕನೆಕ್ಟೂ ಇಲ್ಲ..! ಈ ಹಂತದಲ್ಲಿದ್ದಾರೆ ಇಬ್ಬರು ಬಡ ಮಹಿಳೆಯರು. ಇವರ ಸಮಸ್ಯೆ ಹೀಗಿದೆ… ಸಾಧ್ಯವಾದರೆ ಪರಿಹಾರ ಮಾಡಿಸಿಕೊಡಿ ಅಂತ ದು:ಖ ತೋಡುತ್ತಾರೆ.ಅಚ್ಚರಿ ಎಂದರೆ ಇವರು ಅತ್ತೆ-ಸೊಸೆ. ಹೀಗಾಗಿ ಅತ್ತೆ-ಸೊಸೆಗೊಂದೇ ಆಧಾರ್…!

Advertisement
Advertisement

ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳು. ಅವರಿಬ್ಬರೂ ಅತ್ತೆ-ಸೊಸೆ. ಈಗ ಒಂದೇ ಮನೆಯಲ್ಲಿದ್ದಾರೆ. ಅಚ್ಚರಿ ಎಂದರೆ ಇವರಿಗೆ  ಆಧಾರ್ ನಂಬರೂ ಒಂದೇ…!. ಹಿಂದೆ ತಿಳಿದಿರಲಿಲ್ಲ. ಈ ಬಗ್ಗೆ ಗಮನಿಸಲೂ ಇಲ್ಲ. ಪ್ರತೀ ವ್ಯಕ್ತಿಗೆ ಬೇರೆ ಬೇರೆ ಆಧಾರ್ ನಂಬರ್ ಎಂಬ ಅರಿವು ಇರಲಿಲ್ಲ. ಈಚೆಗೆ  ಯಾವುದೋ ಸೌಲಭ್ಯಕ್ಕೆ ಹೋದಾಗ, ರೇಶನ್ ಪಡೆಯುವುದಕ್ಕೆ ಹೋದಾಗ ತಿಳಿದಿದೆ. ಈಗ ಸಮಸ್ಯೆಯಾಗಿದೆ.  ಸಮಸ್ಯೆ ತಿಳಿದ ಬಳಿಕ ಇಬ್ಬರೂ ಮಹಿಳೆಯರೂ ಕಚೇರಿಗಳಿಗೆ, ಆಧಾರ್ ಕೇಂದ್ರಗಳಿಗೆ ಅಲೆದಾಡಿದ್ದು 6 ಬಾರಿ..! ಇಂದಿಗೂ ಸರಿಯಾಗಿಲ್ಲ.  ಈ ಮಹಿಳೆಯರಲ್ಲಿ ಒಬ್ಬರು 70 ವರ್ಷ ಮೇಲ್ಪಟ್ಟವರು, ಇನ್ನೊಬ್ಬರು 50 ವರ್ಷ ಮೇಲ್ಪಟ್ಟವರು. ಒಬ್ಬರ ಹೆಸರು ಕೆಂಚಮ್ಮ ಇನ್ನೊಬ್ಬರ ಹೆಸರು ಹೊನ್ನಮ್ಮ. ಮಹಿಳೆಯರ ಮನೆಯವರು ಪ್ರಯತ್ನ ಮಾಡಿದರು. ಎಲ್ಲಾ ಸರಿ ಮಾಡಿಸಿ ಮನೆಗೆ ಬಂದ ಬಳಿಕ  ಮತ್ತೆ ಅದೇ ಆಧಾರ್ ನಂಬರ್ ಇರುವ ಕಾರ್ಡ್ ಅಂಚೆ ಮೂಲಕ ಬರುತ್ತದೆ…!    ಈಗ ಸಾಕಾಗಿ ಹೋಗಿದೆ ಎಂದು ದು:ಖ ತೋಡುತ್ತಾರೆ. ಈಗ ಸಮೀಪದಲ್ಲಿ ಆಧಾರ್ ಕೇಂದ್ರವೂ ಇಲ್ಲ. ದೂರದ ಕಡೆಗೆ ತೆರಳಲು ಇವರಿಗೇ ಒಬ್ಬರು ಆಧಾರ ಕ್ಕೆ ಜನ ಬೇಕು. ಎಷ್ಟು ಬಾರಿ ಅಂತ ಬರುವುದು ನಿಮಗೆ ಆಧಾರಕ್ಕೆ ಅಂತ ಕೇಳಿದರೆ ಎಂದು ಮಹಿಳೆಯರು ಹೇಳುತ್ತಾರೆ.

Advertisement

ಹೀಗಾಗಿ ಈಗ ಸಮಸ್ಯೆಯ ಮಾತುಗಳ ಬದಲಾಗಿ ಈ ಮಹಿಳೆಯರಿಗೆ ಆಧಾರ್ ಪರಿಹಾರದ ಬಗ್ಗೆ ಸಲಹೆಗಳು ಬೇಕಾಗಿದೆ. ಇಲಾಖೆಗಳು ಈ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡಿ ಆಧಾರ್ ಕಾರ್ಡ್ ವ್ಯವಸ್ಥೆ ಮಾಡಿಸಿ ಕೊಡಬೇಕಾಗಿದೆ.  ಇಲಾಖೆಗಳ ವ್ಯವಸ್ಥೆ ಈ ಬಡ  ಮಹಿಳೆಯರಿಗೆ ಗೊತ್ತಿಲ್ಲ, ಒಂದಲ್ಲ ಹಲವು ಬಾರಿ ಹೋಗಿದ್ದಾರೆ, ತಕ್ಷಣ ಪರಿಹಾರ ಬೇಕಾಗಿದೆ. ಅಧಿಕಾರಿಗಳು ಮಾಡಿಸಿಕೊಡುವರೇ ?

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |
May 18, 2024
1:02 PM
by: ಸಾಯಿಶೇಖರ್ ಕರಿಕಳ
ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್
May 18, 2024
1:01 PM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು
May 18, 2024
12:45 PM
by: The Rural Mirror ಸುದ್ದಿಜಾಲ
ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?
May 18, 2024
12:28 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror