ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಎಲಿಮಲೆ ಸರಕಾರಿ ಪ್ರೌಢಶಾಲೆ ಸಹಭಾಗಿತ್ವದಲ್ಲಿ ವನಮಹೋತ್ಸವ ಮತ್ತು ಶಾಲಾ ಕೈತೋಟ ನಿರ್ಮಾಣ ಕಾರ್ಯ ದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಗುತ್ತಿಗಾರು ವಲಯ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ ನೆರವೇರಿಸಿದರು.
ಎಲಿಮಲೆ ಪ್ರೌಢಶಾಲೆ ಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಯಂ.ಸಿ.ಅಧ್ಯಕ್ಷ ಪುರುಷೋತ್ತಮ ಕಜೆ ವಹಿಸಿದ್ದರು. ಗುತ್ತಿಗಾರು ವಲಯ ಮಲ್ವಿಚಾರಕ ಸುಧೀರ್ ನೆಕ್ರಾಜೆ, ಮುಖ್ಯ ಅತಿಥಿಯಾಗಿದ್ದರು.
ಒಕ್ಕೂಟದ ಅಧ್ಯಕ್ಷ ಚೇತನ್ ಅತ್ತಿಕರಮಜಲು, ಸುರಕ್ಷಾ ಸಮಿತಿ ಸದಸ್ಯ ಭೋಜಪ್ಪ ಗೌಡ ಹರ್ಲಡ್ಕ, ಚಂದ್ರಶೇಖರ ಗುಡ್ಡೆ, ಸೇವಾ ಪ್ರತಿನಿಧಿ ಪುಷ್ಪಾ ಮೆದು ಮೊದಲಾದವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಮೆದು ವಂದಿಸಿದರು.ಶಾಲಾ ಶಿಕ್ಷಕರು , ಪೋಷಕರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel