ಕಡಬ : ತಾಲೂಕಿನ ಕೊಯಿಲ, ಆತೂರು ಪರಿಸರದಲ್ಲಿ ಕಳೆದ ರಾತ್ರಿ, ಇಂದು ಬೆಳಿಗ್ಗೆ ಬೀಸಿದ ಭಾರಿ ಗಾಳಿಗೆ ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದು ಹಲವು ವಿದ್ಯುತ್ ಕಂಬಗಳು ಧರಶಾಯಿಯಾಗಿದೆ.
ಆತೂರು ಸಮೀಪದ ಕೊಯಿಲ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಬೃಹತ್ ಮರ ಮುರಿದು ಬಿದ್ದಿದೆ, ಕೊಯಿಲ ಗ್ರಾಮದಲ್ಲಿ ಏಣಿತ್ತಡ್ಕ ಎಂಬಲ್ಲಿ ಮರವೊಂದು ಮುರಿದು ಬಿದ್ದಿದೆ. ಇದೇ ಗ್ರಾಮದ ತಿಮರೆಗುಡ್ಡೆ ಎಂಬಲ್ಲಿ ಮರ ಬಿದ್ದಿದೆ. ಘಟನೆಯಿಂದ ಸುಮಾರು 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ತಿಮರೆಗುಡ್ಡೆ ಎಂಬಲ್ಲಿ ಕಂಬ ಮುರಿದು ಬಿದ್ದ ಪರಿಣಾಮ ಇಲ್ಲಿಯ ಕೃಷ್ಣಪ್ಪ ಎಂಬುವವರ ಪಂಪು ಶೆಡ್ ಗೆ ಹಾನಿಯಾಗಿದೆ. ಸಮಸ್ಯೆ ಬಗೆಹರಿಸಲು ಮೆಸ್ಕಾಂ ಸಿಬ್ದಂದಿಗಳು ಹರ ಸಾಹಸ ಪಡುತ್ತಿದ್ದಾರೆ. ನಿರಂತರ ಸುರಿಯುವ ಮಳೆಯೊಂದಿಗೆ ಭಾರಿ ಗಾಳಿ ಬೀಸುತ್ತಿರುವುದು ಸೂಸುತ್ರವಾಗಿ ಕೆಲಸ ಮುಗಿಸಲು ಸವಾಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel