ಬೆಂಗಳೂರು: ಕೊರೊನಾ ಭೀತಿಗೆ ದೇಶವೇ ಸ್ತಬ್ಧವಾಗಿದೆ. ಇದೀಗ ಜನಸಂದಣಿ ಹೆಚ್ಚಿರುವ ಪ್ರದೇಶಗಳನ್ನು ನಿಯಂತ್ರಣ ಮಾಡುವ ಪ್ರಯತ್ನ ನಡೆಯುತ್ತಿದೆ. ನಾಳೆಯಿಂದ ಮಾ. 31 ರವರೆಗೆ ದೇಶಾದ್ಯಂತ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವ 2 ನೇ ಸ್ಟೇಜ್ ನಲ್ಲಿ ಇರುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ಅಗತ್ಯವಾಗಿದ್ದು, ಮಾ.31 ರ ವರೆಗೆ ಜನರೇ ಸ್ವಯಂ ನಿರ್ಬಂಧ ವಿಧಿಸಿಕೊಂಡರೆ ಕೊರೊನಾ ಹರಡುವುದು ತಡೆಯಬಹುದಾಗಿದೆ. ಅಗತ್ಯ ಬಿದ್ದರೆ ಮಾ.31 ರವರೆಗೆ ಕರ್ನಾಟಕವೂ ಲಾಕ್ ಡೌನ್ ಆಗಬೇಕಾದ ಸಂದರ್ಭದ ಬಗ್ಗೆ ಚಿಂತನೆ ನಡೆದಿದೆ ಎಂದು ಅದಿಕಾರಿಗಳ ಮೂಲಗಳು ತಿಳಿಸಿವೆ.
Advertisement
ಕೊರೊನಾ ವೈರಸ್ ಜನಸಂದಣಿ ಇರುವಲ್ಲಿ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ ಹಾಗೂ ವಾರಗಳ ನಂತರ ಖಚಿತವಾಗಿ ಪತ್ತೆಯಾಗುವ ಕಾರಣದಿಂದ ಈಗಾಗಲೇ ಕರ್ನಾಟಕದಲ್ಲಿ ಒಟ್ಟು 21 ಮಂದಿಗೆ ಕೊರೊನಾ ವೈರಸ್ ಖಚಿತವಾಗಿತ್ತು. ಇನ್ನು ಈ ಸಂಖ್ಯೆ ಹೆಚ್ಚಾಗದಂತೆ ತಡೆಯಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement