ಸುಳ್ಯ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡೆರೇಷನ್ ಎಸ್ಸೆಸ್ಸೆಫ್ ಮೊಗರ್ಪಣೆ ಶಾಖಾ ವತಿಯಿಂದ ಎಸ್ಸೆಸ್ಸೆಫ್ ದ್ವಜ ದಿನಾಚರಣೆಯನ್ನು ಮೊಗರ್ಪಣೆ ಮಸೀದಿಯಲ್ಲಿ ನಡೆಸಲಾಯಿತು.
ಮೊಗರ್ಪಣೆ ಮಸ್ಜಿದ್ ಮುದರ್ರಿಸರಾದ ಅಹ್ಮದ್ ಸಖಾಫಿ ಉಸ್ತಾದರು ದುಆ ಮೂಲಕ ಚಾಲನೆ ನೀಡಿ, ಎಸ್.ವೈ.ಎಸ್ ಮೊಗರ್ಪಣೆ ಬ್ರಾಂಚ್ ಅಧ್ಯಕ್ಷರಾದ ಪಳ್ಳಿಕುಂಙಿ ಹಾಜಿ ದ್ವಜಾರೋಹಣ ಗೈದರು, ಬಶೀರ್ ಝುಹ್ರಿ ಜಯನಗರ ಹಾಗೂ ಮೊಗರ್ಪಣೆ ಸದರ್ ಉಸ್ತಾದ್ ಮುಹಮ್ಮದ್ ಸಖಾಫಿ ಅಶಂಸ ಭಾಷಣಗೈದರು, ಎಸ್ಸೆಸ್ಸೆಫ್ ಮೊಗರ್ಪಣೆ ಶಾಖೆ ಕೋಶಾಧಿಕಾರಿ ಆಸಿಫ್ ಬೆಟ್ಟಂಪಾಡಿ ದ್ವಜಗೀತೆಯನ್ನು ಹಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ಝೈನುಲ್ ಆಬಿದೀನ್ ತಂಙಳ್ ಜಯನಗರ ದುಆಗೈದರು. ಈ ಸಂದರ್ಭದಲ್ಲಿ ಎಸ್.ವೈ.ಎಸ್ , ಎಸ್ಸೆಸ್ಸೆಫ್ ಕಾರ್ಯಕರ್ತರು, ಪತ್ರಿಕಾ ಮಿತ್ರರು ಹಾಗೂ ಊರ ಹಿತೈಷಿಗಳು ಬಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಾಕಿರ್ ಸ್ವಾಗತಿಸಿ ನಿರೂಪಿಸಿದರು, ಸ್ವಾಬಿರ್ ಜಯನಗರ ವಂದಿಸಿ, ಸಿಹಿ ತಿಂಡಿ ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel