ಕುಸಿಯುವ ಭೀತಿಯಲ್ಲಿದೆ ಬೆಳ್ಳಾರೆ ಅಂಬೇಡ್ಕರ್ ಭವನ

July 8, 2019
10:00 AM

ಬೆಳ್ಳಾರೆ : ಕಾಯಕಲ್ಪಕ್ಕಾಗಿ ಕಾಯುತ್ತಿರುವ ಬೆಳ್ಳಾರೆ ಅಂಬೇಡ್ಕರ್ ಭವನಕ್ಕೆ ಮಾತ್ರ ಇನ್ನೂ ದುರಸ್ಥಿ ಭಾಗ್ಯ ಕೂಡಿ ಬಂದಿಲ್ಲ. ಭವನದ ಮೇಲ್ಛಾವಣಿ ಕುಸಿದು ನಿಂತಿದ್ದು, ಮಳೆಗಾಲದಲ್ಲಿ ಭವನದೊಳಗೆ ಹೊಳೆಯಂತಾಗಿತ್ತಿದೆ. ರೀಪು, ಪಕ್ಕಾಸು, ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದು ಮುರಿದು ಹೋಗಿದೆ.ಕುಸಿಯುವ ಭೀತಿಯಲ್ಲಿದೆ.

Advertisement
Advertisement

ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವಾದ ಬೆಳ್ಳಾರೆಯಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಇಂದಿಗೂ ಸಮುದಾಯ ಭವನವಿಲ್ಲ. ಹಲವು ವರ್ಷಗಳ ಹಿಂದೆ ಬೆಳ್ಳಾರೆ ಸುಳ್ಯ ರಸ್ತೆಯ ಪೊಲೀಸ್ ಠಾಣೆಯ ಬಳಿ ನಿರ್ಮಾಣಗೊಂಡಿದ ಅಂಬೇಡ್ಕರ್ ಭವನ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಕೂಲಕರವಾಗಿತ್ತು.  ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಲೇ ಇಲ್ಲ.  ಮೇಲ್ಛಾವಣಿಯೊಂದನ್ನು ಮಾತ್ರ ಆಗಾಗ ನಡೆಸಲಾಗುತ್ತಿದ್ದರೂ ಈಗ ಮಾತ್ರ ಬೀಳುವ ಸ್ಥಿತಿಯಲ್ಲಿದೆ.

ಗ್ರಾಮ ಪಂಚಾಯತ್ ನಿರ್ವಹಣೆ:
ಅಂಬೇಡ್ಕರ್ ಭವನದ ನಿರ್ವಹಣೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ನಿರ್ವಹಣೆ ಮಾಡುತ್ತಿದೆ. ಹಲವು ಸಾರ್ವಜನಿಕ ಸಮಾರಂಭಗಳು ಸಭೆಗಳು ಇಲ್ಲೆ ನಡೆಯುತ್ತಿತ್ತು. ರಾಜೀವ್ ಗಾಂಧಿ ಸೇವಾ ಕೇಂದ್ರವಾದ ಬಳಿಕ ಸಂಘ ಸಂಸ್ತೆಗಳಿಗೆ, ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಿಗೆ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿತ್ತು.
ಆದರೆ ಅಂಬೇಡ್ಕರ್ ಭವನದಷ್ಟು ಸ್ಥಳಾವಕಾಶವಾಗಲಿ, ಶೌಚಾಲಯವಾಗಲಿ, ಇಲ್ಲ. ಸಾರ್ವಜನಿಕರು ಸಂಘ ಸಂಸ್ಥೆಗಳು ಈ ಕಾರಣಕ್ಕಾಗಿಯೇ ಖಾಸಗಿ ಹಾಲನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

10 ಲಕ್ಷ ಅನುದಾನ ವ್ಯರ್ಥ
ಅಂಬೇಡ್ಕರ್ ಭವನದ ದುರಸ್ಥಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಜಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಕೆಲವರು ದುರಸ್ಥಿಗೆ ಒತ್ತಾಯಿಸಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿದರು. ಇದರಿಂದ ದುರಸ್ಥಿ ಕಾರ್ಯವೂ ಸ್ಥಗಿತಗೊಂಡಿತು. ನೂತನ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿತ್ತಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಭವನಕ್ಕೆ ತಹಶೀಲ್ದಾರ್  ಭೇಟಿ
ಬೆಳ್ಳಾರೆಯ ಗ್ರಾಮ ಲೆಕ್ಕಾಧಿಕರಿಗಳ ಕಚೇರಿ ಉದ್ಘಾಟನೆಗೆ  ಬೆಳ್ಳಾರೆಗೆ ಸುಳ್ಯ ತಹಶೀಲ್ದಾರ ಕುಂಞ ಅಹಮ್ಮದ್ ಆಗಮಿಸಿದಾಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಹಾಗು ಬೆಳ್ಳಾರೆಯ ಪಕ್ಷಾತೀತ ಮುಖಂಡರು ಸೇರಿ ನೂತನ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರ ಕುರಿತು ನೆನಪಿಸಿದರು. ತ್ವರಿತವಾಗಿ ಬೆಳ್ಳಾರೆ ಅಂಬೇಡ್ಕರ್ ಭವನ ಸ್ಥಿತಿಗತಿ ವೀಕ್ಷಿಸಿ ನೂತನ ಭವನದ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement

ಅಂಬೇಡ್ಕರ್ ಭವನ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ ದುರಸ್ಥಿ ಕಾರ್ಯ ನಡೆಸಿಲ್ಲ. ಬೆಳ್ಳಾರೆಯಲ್ಲಿ ಬಡ ಕುಟುಂಬಳಿಗೆ ಸಮಾರಂಭ ನಡೆಸಲು ಸಮುದಾಯ ಭವನವಿಲ್ಲದಿರುವುದು ವಿಪರ್ಯಾಸ. ಆದುದರಿಂದ ನೂತನ ಅಂಬೇಡ್ಕರ್ ಭವನವನ್ನು ಶೀಘ್ರವೇ ನಿರ್ಮಿಸಿಕೊಟ್ಟರೆ ಅನೇಕ ಬಡ ಕುಟುಂಬಗಳಿಗೆ ಉಪಕಾರವಾಗುತ್ತದೆ ಎಂದು
 ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ ಹೇಳುತ್ತಾರೆ.

ಬೆಳ್ಳಾರೆ ಅಂಬೇಡ್ಕರ್ ಭವನದ ಸಂಪೂರ್ಣ ಶಿಥಿಲಾವಸ್ತೆಯಲ್ಲಿರುವುದನ್ನು ಕಣ್ಣಾರೆ ನೋಡಿದ್ದೇನೆ. ಶೀಘ್ರವೇ ಬೆಳ್ಳಾರೆಯಲ್ಲಿ ಅಂಬೇಡ್ಕರ್ ಭವನವನ್ನು ನೂತನವಾಗಿ ನಿರ್ಮಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದೇನೆ – ಕುಂಞ ಅಹಮ್ಮದ್,  ಸುಳ್ಯ ತಾಲೂಕು ತಹಶೀಲ್ದಾರರು

 

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನ | ಮಂಡ್ಯದಲ್ಲಿ 1 ಸಾವಿರ ಗಿಡಗಳನ್ನು ನೆಟ್ಟ ವಿದ್ಯಾರ್ಥಿಗಳು
June 6, 2025
8:36 PM
by: The Rural Mirror ಸುದ್ದಿಜಾಲ
ವಿಶ್ವ ಪರಿಸರ ದಿನ | ಈ ವರ್ಷ ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಗೊಳಿಸಲು ವಿಶೇಷ ಗಮನ
June 6, 2025
7:05 AM
by: ದ ರೂರಲ್ ಮಿರರ್.ಕಾಂ
ಧನ ಲಕ್ಷ್ಮಿ ಯೋಗದಿಂದ ಹೆಜ್ಜೆ ಹೆಜ್ಜೆಗೂ ಲಾಭ ಹೇಗೆ..? ಯಾರಿಗೆ..?
June 6, 2025
6:45 AM
by: ದ ರೂರಲ್ ಮಿರರ್.ಕಾಂ
ವಿಶ್ವ ಪರಿಸರ ದಿನಾಚರಣೆ | ಪ್ರಧಾನಿ ನರೇಂದ್ರ ಮೋದಿ ಭಾಗಿ  | 700 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯೀಕರಣ ಯೋಜನೆಗೆ ಚಾಲನೆ |
June 5, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group