ಕೆಸರು ಮಯವಾದ ಆರೆಲ್ತಡಿ -ಕೆಡೆಂಜಿ ಸಂಪರ್ಕ ರಸ್ತೆ

June 16, 2019
2:00 PM

ಸವಣೂರು : ಸವಣೂರು ಗ್ರಾಮದ ಆರೆಲ್ತಡಿ ಕೆಡೆಂಜಿ ಭಾಗವನ್ನು ಸಂಪರ್ಕಿಸುವ ಜಿ.ಪಂ ರಸ್ತೆಯ ಮಳೆಗಾಲದ ಆರಂಭದಲ್ಲೇ ಕೆಸರುಗದ್ದೆಯಂತಾಗಿದೆ.
ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಚಾಪಳ್ಳ ಎಂಬಲ್ಲಿಂದ ಆರೆಲ್ತಡಿ ಶಾಲೆಯ ಗೇಟಿನ ತನಕ ಸುಮಾರು ಎರಡು ಕಿ.ಮೀ ಉದ್ದದ ಈ ರಸ್ತೆಯ ಅರ್ಧ ಭಾಗ ಡಾಂಬರೀಕರಣ ಹಾಗೂ ಕಾಂಕ್ರಿಟೀಕರಣಗೊಂಡಿದ್ದು ಇನ್ನರ್ಧ ಭಾಗ ಮಣ್ಣಿನ ಕಚ್ಛಾ ರಸ್ತೆಯಾಗಿದೆ.

Advertisement
Advertisement

ಈ ಬಾರಿ ಮಳೆಗಾಲದ ಆರಂಭಕ್ಕೆ ಮೊದಲು ಗ್ರಾಮ ಪಂಚಾಯತ್ ಅನುದಾನದಿಂದ ರಸ್ತೆಯ ಹೊಂಡಗಳಿಗೆ ಮಣ್ಣು ತುಂಬಿಸಿ ಅಲ್ಪಸ್ವಲ್ಪ ದುರಸ್ತಿ ಕಾಮಗಾರಿ ನಡೆಸಲಾಗಿದ್ದರೂ, ಅದು ಪ್ರಥಮ ಮಳೆಗೇ ಕೊಚ್ಚಿ ಹೋಗಿದೆ.ಅಷ್ಟೇ ಅಲ್ಲದೆ ರಸ್ತೆಗೆ ಬಿದ್ದ ಮಳೆಯ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ರಸ್ತೆ ಇನ್ನಷ್ಟು ಹದಗೆಡಲು ಕಾರಣವಾಗಿದೆ

ಬೆಳಂದೂರು ಜಿ.ಪಂ.ವ್ಯಾಪ್ತಿಯಲ್ಲಿರುವ ಈ ರಸ್ತೆಯ ಮೂಲಕ ಆರೇಲ್ತಡಿ ಶಾಲೆ,ಅಂಗನವಾಡಿ, ಆರೇಲ್ತಡಿ ದೈವಸ್ಥಾನ ಹಾಗೂ ಇಲ್ಲಿನ ಜನವಸತಿ ಪ್ರದೇಶಗಳಿಗೆ ಹೋಗಬೇಕಾಗಿದೆ.ರಸ್ತೆಯ ತುಂಬಾ ಹೊಂಡಗಳು ತುಂಬಿದ್ದು ಅದರಲ್ಲಿ ನೀರು ತುಂಬಿಕೊಂಡು ಪಾದಚಾರಿಗಳಿಗೂ ಕೆಸರಿನ ಸಿಂಚನವಾಗುತ್ತಿದೆ. ಅಲ್ಲದೆ ರಸ್ತೆಯಲ್ಲಿ ಕೆಸರು ತುಂಬಿಕೊಂಡಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ಈ ರಸ್ತೆಗೆ ಸುಳ್ಯ ಶಾಸಕ ಎಸ್.ಅಂಗಾರ ಹಾಗೂ ಜಿ.ಪಂ.ಸದಸ್ಯರ ಅನುದಾನ ದಲ್ಲಿ ಒಟ್ಟು 35 ಲಕ್ಷರೂ ಗಳ ಕಾಂಕ್ರೀಟಿಕರಣ ಹಾಗೂ ಡಾಮರೀಕರಣ ನಡೆದಿದೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಾವಣಗೆರೆ ಜಿಲ್ಲೆಯಲ್ಲಿ ಡಿಜಿಟಲ್ ಲೈಬ್ರರಿ | ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ |
July 23, 2025
6:49 AM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
ಜನನ-ಮರಣ 21 ದಿನಗಳೊಳಗೆ  ನೋಂದಣಿ ಕಡ್ಡಾಯ – ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ
July 22, 2025
9:11 PM
by: The Rural Mirror ಸುದ್ದಿಜಾಲ
ಪಾವಗಡ ತಾಲೂಕಿನಲ್ಲಿ ಕುಡಿಯುವ ಯೋಜನೆಗೆ  ಮುಖ್ಯಮಂತ್ರಿ ಚಾಲನೆ
July 22, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group