ಕೇರಳದಲ್ಲಿ ಮತ್ತೆ “ನಿಫಾ” ಭಯ

June 4, 2019
8:56 PM

ಎರ್ನಾಕುಲಂ : ಕಳೆದ ವರ್ಷ ಕೇರಳದಲ್ಲಿ ತೀವ್ರವಾಗಿ ಬಾಧಿಸಿದ್ದ ನಿಫಾ ವೈರಸ್ ಈ ಬಾರಿ ಮತ್ತೆ ಕಾಡಿದೆ. ಹೀಗಾಗಿ ಈಗ ಇಡೀ ಕೇರಳದಲ್ಲಿ ಆರೋಗ್ಯ ಇಲಾಖೆ  ಹೈಎಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮಗಳನ್ನು  ಘೋಷಿಸಿದೆ.

Advertisement
Advertisement

ಕೇರಳದಲ್ಲಿ  ಮತ್ತೆ ನಿಫಾ ಭಯ ಆರಂಭ ಆಗಿದ್ದು ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನಲ್ಲಿ  ನಿಫಾ ವೈರಸ್ ಸಂಶಯಗೊಂಡಿದೆ. ಹೀಗಾಗಿ ಪುಣೆ ವೈರಾಲಜಿ ವಿಭಾಗಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ಬಳಿಕವೇ ಖಚಿತಗೊಳ್ಳಲಿದೆ.

ಎರ್ನಾಕುಲಂ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಜ್ವರದ ಬಾಧೆ ಕಾಣಿಸಿದ್ದು ಇದೀಗ ನಿಫಾ ವೈರಸ್ ಸಂದೇಹದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಯುವಕನಿಗೆ ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ತೀವ್ರನಿಗಾ ವಿಭಾಗದಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಯ ನಿಕಟ ವರ್ತಿಗಳ ಹಾಗೂ ಸುಮಾರು 80 ವಿದ್ಯಾರ್ಥಿಗಳ ಕಡೆಗೂ ನಿಗಾ ಇರಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿದೆ.  ಯಾವುದೇ  ಆತಂಕ ಬೇಡವೆಂದು ಆರೋಗ್ಯ ಇಲಾಖೆ ಹೇಳಿದೆ.

ಈ ವೈರಸ್ ಬಾವಲಿ ಅಥವಾ ಹಂದಿಯ ಮೂಲಕ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ತಿಂದ ವಸ್ತುಗಳು, ಹಣ್ಣುಗಳ ಮೂಲಕ ಬೇಗಬೆ ನಿಫಾ ಹರಡುತ್ತದೆ.

ನಿಫಾ ವೈರಸ್ ಬಾಧಿಸಿದ ವ್ಯಕ್ತಿಗಳಿಗೆ ಜ್ವರ, ತಲೆನೋವು, ತಲೆತಿರುಗುವುದು, ಸ್ಮೃತಿ ತಪ್ಪುವುದು , ಕೆಮ್ಮು , ಹೊಟ್ಟೆನೋವು, ವಾಂತಿ , ದೃಷ್ಟಿ ಮಂದವಾಗುವುದು  ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸುತ್ತದೆ.  ಜ್ವರ ಬಂದ 15 ದಿನಗಳ ನಂತರ ಇದೆಲ್ಲಾ ಲಕ್ಷಣ ಕಾಣಿಸುತ್ತದೆ. ಕೊನೆಗೆ ಕೋಮಾ ಸ್ಥಿತಿಗೂ ಹೋಗಬಹುದಾಗಿದೆ.

Advertisement

ಬಾವಲಿಗಳು ತಿಂದ ಹಣ್ಣು ತಿನ್ನುವುದು  ಸೇರಿದಂತೆ ಹಣ್ಣುಗಳನ್ನು  ಈಗ ತಿನ್ನುವಾಗ ಕೊಂಚ ಎಚ್ಚರಿಕೆ ವಹಿಸುವುದು  ಮೊದಲ ಮುಂಜಾಗ್ರತೆಯಾಗಿದೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ
June 19, 2025
10:48 PM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆ ಹಿನ್ನೆಲೆ | ಜುಲೈ 1 ರಿಂದ ಆಗಸ್ಟ್  ತಿಂಗಳವರೆಗೆ ಅಮರನಾಥ ಹಾರಾಟ ನಿಷೇಧ ವಲಯ
June 18, 2025
3:37 PM
by: ದ ರೂರಲ್ ಮಿರರ್.ಕಾಂ
ಅಹಮದಾಬಾದ್ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ
June 14, 2025
7:30 AM
by: The Rural Mirror ಸುದ್ದಿಜಾಲ
ಅಕ್ರಮವಾಗಿ ಅಡಿಕೆ ಸಾಗಾಟ | ಮಿಜೋರಾಂನಲ್ಲಿ 386 ಚೀಲ ಅಡಿಕೆ ವಶಕ್ಕೆ ಪಡೆದ ಅಧಿಕಾರಿಗಳು
June 13, 2025
9:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group