ಕೇರಳದಲ್ಲಿ ಮತ್ತೆ “ನಿಫಾ” ಭಯ

June 4, 2019
8:56 PM

ಎರ್ನಾಕುಲಂ : ಕಳೆದ ವರ್ಷ ಕೇರಳದಲ್ಲಿ ತೀವ್ರವಾಗಿ ಬಾಧಿಸಿದ್ದ ನಿಫಾ ವೈರಸ್ ಈ ಬಾರಿ ಮತ್ತೆ ಕಾಡಿದೆ. ಹೀಗಾಗಿ ಈಗ ಇಡೀ ಕೇರಳದಲ್ಲಿ ಆರೋಗ್ಯ ಇಲಾಖೆ  ಹೈಎಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮಗಳನ್ನು  ಘೋಷಿಸಿದೆ.

Advertisement
Advertisement
Advertisement
Advertisement
Advertisement

ಕೇರಳದಲ್ಲಿ  ಮತ್ತೆ ನಿಫಾ ಭಯ ಆರಂಭ ಆಗಿದ್ದು ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನಲ್ಲಿ  ನಿಫಾ ವೈರಸ್ ಸಂಶಯಗೊಂಡಿದೆ. ಹೀಗಾಗಿ ಪುಣೆ ವೈರಾಲಜಿ ವಿಭಾಗಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ಬಳಿಕವೇ ಖಚಿತಗೊಳ್ಳಲಿದೆ.

Advertisement

ಎರ್ನಾಕುಲಂ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಜ್ವರದ ಬಾಧೆ ಕಾಣಿಸಿದ್ದು ಇದೀಗ ನಿಫಾ ವೈರಸ್ ಸಂದೇಹದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಯುವಕನಿಗೆ ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ತೀವ್ರನಿಗಾ ವಿಭಾಗದಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಯ ನಿಕಟ ವರ್ತಿಗಳ ಹಾಗೂ ಸುಮಾರು 80 ವಿದ್ಯಾರ್ಥಿಗಳ ಕಡೆಗೂ ನಿಗಾ ಇರಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿದೆ.  ಯಾವುದೇ  ಆತಂಕ ಬೇಡವೆಂದು ಆರೋಗ್ಯ ಇಲಾಖೆ ಹೇಳಿದೆ.

ಈ ವೈರಸ್ ಬಾವಲಿ ಅಥವಾ ಹಂದಿಯ ಮೂಲಕ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ತಿಂದ ವಸ್ತುಗಳು, ಹಣ್ಣುಗಳ ಮೂಲಕ ಬೇಗಬೆ ನಿಫಾ ಹರಡುತ್ತದೆ.

Advertisement

ನಿಫಾ ವೈರಸ್ ಬಾಧಿಸಿದ ವ್ಯಕ್ತಿಗಳಿಗೆ ಜ್ವರ, ತಲೆನೋವು, ತಲೆತಿರುಗುವುದು, ಸ್ಮೃತಿ ತಪ್ಪುವುದು , ಕೆಮ್ಮು , ಹೊಟ್ಟೆನೋವು, ವಾಂತಿ , ದೃಷ್ಟಿ ಮಂದವಾಗುವುದು  ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸುತ್ತದೆ.  ಜ್ವರ ಬಂದ 15 ದಿನಗಳ ನಂತರ ಇದೆಲ್ಲಾ ಲಕ್ಷಣ ಕಾಣಿಸುತ್ತದೆ. ಕೊನೆಗೆ ಕೋಮಾ ಸ್ಥಿತಿಗೂ ಹೋಗಬಹುದಾಗಿದೆ.

ಬಾವಲಿಗಳು ತಿಂದ ಹಣ್ಣು ತಿನ್ನುವುದು  ಸೇರಿದಂತೆ ಹಣ್ಣುಗಳನ್ನು  ಈಗ ತಿನ್ನುವಾಗ ಕೊಂಚ ಎಚ್ಚರಿಕೆ ವಹಿಸುವುದು  ಮೊದಲ ಮುಂಜಾಗ್ರತೆಯಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರಮುಖ ಯಾತ್ರಾ ಸ್ಥಳಗಳಿಗೆ ರೋಪ್ ವೇ ಸೌಲಭ್ಯ
March 6, 2025
9:21 PM
by: The Rural Mirror ಸುದ್ದಿಜಾಲ
ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |
March 6, 2025
12:27 PM
by: The Rural Mirror ಸುದ್ದಿಜಾಲ
ಎಥೆನಾಲ್ ಮಿಶ್ರಣ ಶೇ.20ಕ್ಕೆ ಹೆಚ್ಚಿಸುವ ಚಿಂತನೆ |
March 1, 2025
7:36 AM
by: ದ ರೂರಲ್ ಮಿರರ್.ಕಾಂ
ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ
February 26, 2025
11:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror