ಕೊನೆಗೂ “ಥಂಡ”ವಾಗಲಿಲ್ಲ ಬಂಡಾಯ…!, ಬಿಜೆಪಿ, ಕಾಂಗ್ರೆಸ್ ಇಲ್ಲ “ಕೂಲ್..ಕೂಲ್”

May 20, 2019
8:30 PM

ಸುಳ್ಯ: ನ.ಪಂ.ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಪಕ್ಷೇತರರಾಗಿ ಕಣದಲ್ಲಿ ಉಳಿದಿರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯ ತಣ್ಣಗಾಗದ ಹಿನ್ನೆಲೆಯಲ್ಲಿ  ಈ ಬಾರಿ ಕೆಲ ವಾರ್ಡ್ ಗಳಲ್ಲಿ  ಎರಡೂ ಪಕ್ಷಗಳಿಗೆ ಬಿಸಿ ತಟ್ಟಲಿದೆ.

Advertisement
Advertisement

ಬೋರುಗುಡ್ಡೆಯಲ್ಲಿ ಆರ್.ಕೆ.ಮಹಮ್ಮದ್, ಬೂಡು ವಾರ್ಡ್‍ನಲ್ಲಿ ಮಹಮ್ಮದ್ ರಿಯಾಝ್ ಕಟ್ಟೆಕ್ಕಾರ್, ಬೀರಮಂಗಲ ವಾರ್ಡ್‍ನಲ್ಲಿ ಅಬ್ದುಲ್ ರಹಿಮಾನ್ ಎಂ.ಎಂ. ಜಯನಗರ ವಾರ್ಡ್‍ನಲ್ಲಿ ನವೀನ್ ಮಚಾದೋ ಪಕ್ಷೇತರರಾಗಿ ಸ್ಪರ್ಧಿಸುವುದು ಕಾಂಗ್ರೆಸ್‍ಗೆ ಸವಾಲಾಗಲಿದೆ.

ಶಾಂತಿನಗರ ವಾರ್ಡ್‍ನಲ್ಲಿ ಜನಾರ್ಧನ ಬೆಟ್ಟಂಪಾಡಿ ಮತ್ತು 19ನೇ ವಾರ್ಡ್‍ನಲ್ಲಿ ಮೋಹಿನಿ ಎ.ಪಕ್ಷೇತರರಾಗಿ ಸ್ಪರ್ಧಿಸುವುದು ಬಿಜೆಪಿಗೆ ತಲೆ ನೋವು ಸೃಷ್ಠಿಸಲಿದೆ.

ಎರಡೂ ಪಕ್ಷಗಳ ನೇತೃತ್ವ ಕಳೆದ ಕೆಲವು ದಿನಗಳಿಂದದ ನಡೆಸಿದ ಪ್ರಯತ್ನದಿಂದ ತಲಾ ಒಂದೊಂದು ವಾರ್ಡ್‍ಗಳ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

15ನೇ ವಾರ್ಡ್‍ನಲ್ಲಿ ಪಕ್ಷೇತರನಾಗಿದ್ದ ಅಬ್ದುಲ್ ಮಜೀದ್ ನಾಮಪತ್ರ ಹಿಂಪಡೆದಿರುವುದು ಕಾಂಗ್ರೆಸ್‍ಗೆ ಮತ್ತು 20ನೇ ವಾರ್ಡ್‍ನಲ್ಲಿ ಜಯಂತಿ ಆರ್.ರೈ ನಾಮಪತ್ರ ಹಿಂಪಡೆದಿರುವುದು ಬಿಜೆಪಿಗೆ ಕೊಂಚ ರಿಲೀಫ್ ಕೊಟ್ಟಿದೆ.

Advertisement

ಜಯನಗರ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ್ ಕಾಮತ್ ಜೆಡಿಎಸ್ ನೇತೃತ್ವದ ಸೂಚನೆಯ ಮೇರೆಗೆ ನಾಮಪತ್ರ ಹಿಂಪಡೆದಿದ್ದಾರೆ. ಬೋರುಗುಡ್ಡೆ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ರಹೀಂ ಫ್ಯಾನ್ಸಿ ಕಣದಲ್ಲಿದ್ದಾರೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಆರೋಪಿಗಳ ಪತ್ತೆಗೆ 4  ಪ್ರತ್ಯೇಕ ತಂಡ ರಚನೆ | ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಬದ್ಧ
May 2, 2025
8:59 PM
by: ದ ರೂರಲ್ ಮಿರರ್.ಕಾಂ
ರೈತರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮತ್ತು ಯಂತ್ರೋಪಕರಣ ವಿತರಣೆ
April 22, 2025
6:22 AM
by: The Rural Mirror ಸುದ್ದಿಜಾಲ
ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
April 20, 2025
8:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group