ಕೊರೊನಾ ತೊಲಗಿಸಿ-ರೈತರನ್ನು ಉಳಿಸಿ | ರೈತ ಸಂಘದಿಂದ ಪ್ರತಿಭಟನೆ | ಮನೆ ಮನೆಗಳಲ್ಲೇ ನಡೆಯುತ್ತಿರುವ ಮೌನ ಪ್ರತಿಭಟನೆ |

April 20, 2020
11:46 AM

ಪುತ್ತೂರು: ಕೊರೊನಾ ತೊಲಗಿಸಿ-ರೈತರನ್ನು ಉಳಿಸಿ ಸತ್ಯಾಗ್ರಹದ ನಿಟ್ಟಿನಲ್ಲಿ ರೈತ ಸಂಘದ ವತಿಯಿಂದ ಮನೆ ಮನೆಗಳಲ್ಲಿ ರೈತ ಸಂಘದ ವತಿಯಿಂದ ಸೋಮವಾರ ಮೌನ ಪ್ರತಿಭಟನೆ ನಡೆಯುತ್ತಿದೆ.

Advertisement
Advertisement

ರೈತರು ಹಾಗೂ ಗ್ರಾಮೀಣ ಪ್ರದೇಶದ ಜನತೆ ಮನೆಗಳಲ್ಲಿಯೇ ಇದ್ದು , ಯಾವುದೇ ದಿನಬಳಕೆಯ ವಸ್ತುಗಳ ಖರೀದಿ ಮಾಡದೇ,  ಯಾವುದೇ ಕೃಷಿ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಒಯ್ಯದೇ ತಮ್ಮ ಮನೆ ಮಂದಿಯೊಂದಿಗೆ ಮನೆಯಲ್ಲಿಯೇ ಧರಣಿ ಆರಂಭ ಮಾಡಿದ್ದಾರೆ. ರೈತರ ಜೀವವೂ ಉಳಿಯಲಿ, ಜೀವನವೂ ಉಳಿಯಲಿ, ಮಾರುಕಟ್ಟೆ ಮುಕ್ತವಾಗಿರಲಿ , ಬೆಳೆಗಳಿಗೆ ಬೆಲೆ ಬರಲಿ , ಕೃಷಿ ಉತ್ಪನ್ನಗಳ ಆಮದು ನಿಲ್ಲಲಿ, ಬೆಳೆಗಳಿಗೆ ಬೆಲೆ ಬರಲಿ ಎಂಬ ಉದ್ದೇಶದಿಂದ ಧರಣಿ ನಡೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ,  ಲಾಕ್ಡೌನ್ ನಿಂದಾಗಿ ಕೃಷಿಕ್ಷೇತ್ರಕ್ಕೆ ರಾಜ್ಯದಲ್ಲಿ ಸಮಸ್ಯೆಯಾಗಿದೆ.  ಫರಂಗಿ ಹಣ್ಣು,ಬಾಳೆ,ಕಲ್ಲಂಗಡಿ,ಕರಬುಜ, ಹೂವು ಹಣ್ಣು, ತರಕಾರಿ ಅಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆ ಸುಮಾರು 1 ಲಕ್ಷ ಕೋಟಿಗಿಂತಲೂ ಹೆಚ್ಚು ಫಸಲು ನಷ್ಠ ಅಲ್ಲದೇ ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳಾದ ಅಡಿಕೆ,ಕಾಫಿ ,ಟೀ ,ರಬ್ಬರ್ ಬೆಳೆಗಳ ಮಾರುಕಟ್ಟೆ ಕುಸಿತ ಮತ್ತು ಖರೀದಿಯಲ್ಲಿನ ಗೊಂದಲದಿಂದ ಕೃಷಿ ಕ್ಷೇತ್ರ ದಿಕ್ಕೆಟ್ಟಿದೆ. ಮುಂದಿನ ದಿನಗಳಲ್ಲಿ ಆಹಾರ ಸುಭದ್ರತೆಗಾಗಿ ಕೃಷಿ ಕ್ಷೇತ್ರದ ರಕ್ಷಣೆಗಾಗಿ ವಿಷೇಶ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-07-2025 | ನಿರಂತರ ಹನಿ ಮಳೆಗೆ ಕಾರಣವೇನು..? | ವಾಯುಭಾರ ಕುಸಿತದ ಪರಿಣಾಮವೂ…ಮಳೆಯ ಆತಂಕವೂ…!
July 23, 2025
3:57 PM
by: ಸಾಯಿಶೇಖರ್ ಕರಿಕಳ
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ | ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
July 23, 2025
2:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group