ಸವಣೂರು: ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ಕೊಳ್ತಿಗೆ ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ನಿರಂತರ ಸ್ವಚ್ಛತಾ ಕಾರ್ಯಕ್ರಮವಾದ ಸ್ವಚ್ಛ ಕೊಳ್ತಿಗೆ ಅಭಿಯಾನದ 7 ನೇ ಹಂತದ ಸ್ವಚ್ಛತಾ ಕಾರ್ಯವು ಕಲಾಯಿ ಕಾಲನಿ ಹಾಗೂ ಪರಿಸರದ ವಠಾರದಲ್ಲಿ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ಧನಂಜಯ,ಗ್ರಾ.ಪಂ.ಸದಸ್ಯೆ ಯಶೋಧಾ,ಸ್ವಚ್ಛ ಕೊಳ್ತಿಗೆ ಗ್ರಾಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಕುಂಟಿಕಾನ ,ಕಾರ್ಯದರ್ಶಿ ಪ್ರಭಾಕರ ರೈ ಕೊರ್ಬಂಡ್ಕ,ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೆಂಕಟ್ರಮಣ ಆಚಾರ್ ಪೆರ್ಲಂಪಾಡಿ, ಕೊಳ್ತಿಗೆ ಸ್ವಚ್ಚತಾ ಸಮಿತಿಯ ಸದಸ್ಯ ಪುಷ್ಪರಾಜ ರೈ ಕಲಾಯಿ,ನೀಲಪ್ಪ ಗೌಡ ಕುಂಟಿಕಾನ,ಧನಂಜಯ ಪೂಜಾರಿ,ವರ್ತಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಪ್ಪ ಕಲಾಯಿ,ಕುಶಲ ಕಲಾಯಿ,ಆಶಾ ಕಾರ್ಯಕರ್ತೆ ಶ್ರೀಮತಿ ಮೊದಲಾದವರು ಪಾಲ್ಗೊಂಡಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel