ಸುಳ್ಯ: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟರ್ ಸಮಿತಿಯ ವತಿಯಿಂದ ರಾಜ್ಯದಾದ್ಯಂತ ಮದರಸ ಅಧ್ಯಾಪಕರಿಗೆ ಎಂ ಇ ಪಿ ತರಬೇತಿ ಶಿಬಿರ ಸೆ.16,17 ರಂದು ನಡೆಯಲಿದೆ.
ಇದರ ಅಂಗವಾಗಿ ಸುಳ್ಯ ಗಾಂಧಿನಗರ ಮದರಸ ಸಭಾಂಗಣದಲ್ಲಿ ಸುಳ್ಯ ತಾಲೂಕಿನ ಸುಮಾರು 26 ಮದರಸಗಳ ಅಧ್ಯಾಪಕರಿಗೆ ಪ್ರಥಮ ಘಟ್ಚದ 20 ಗಂಟೆಗಳ ತರಬೇತಿ ಶಿಬಿರಕ್ಕೆ ಸೆಪ್ಟೆಂಬರ್.16ರಂದು ಚಾಲನೆ ನೀಡಲಾಯಿತು.
ಜಿಲ್ಲಾ ಸಮಿತಿಯ ತರಬೇತುದಾರರಾದ ಮುಹಮ್ಮದ್ ರಫೀಕ್ ಸಅದಿ ಅಲ್ ಅಫ್ಜಲಿ ಮಿತ್ತೂರು, ಅಬೂಬಕ್ಕರ್ ಸಿದ್ದೀಕ್ ಮಿಸ್ಬಾಹಿ ಕರೊಪ್ಪಾಡಿ, ಅಬ್ದುಲ್ ಮಜೀದ್ ಸಖಾಫಿ ಮೆಲ್ಕಾರ್, ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಅಧ್ಯಾಪಕರ ಪಾತ್ರದ ವಿಷಯ ಕುರಿತು ತರಬೇತಿ ನೀಡಿದರು.
ವೇದಿಕೆಯಲ್ಲಿ ಎಸ್ ಜೆ ಎಂ ರಾಜ್ಯ ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು,ಸುಳ್ಯ ರೇಂಜ್ ಸಮಿತಿ ಅದ್ಯಕ್ಷ ಲತೀಫ್ ಸಖಾಫಿ ಮಾಡನ್ನೂರು,ಕಾರ್ಯದರ್ಶಿನಿಝಾರ್ ಸಖಾಫಿ ಮುಡೂರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel