ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ

December 23, 2019
11:14 AM

ಸುಳ್ಯ: ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ಅಧಿಕೃತ ಭೇಟಿ ನೀಡಿದರು. ಲಯನ್ಸ್ ಸೇವಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಮೋಹನ್ ಕೆ ವಹಿಸಿದ್ದರು.

Advertisement
Advertisement

Advertisement

ವೇದಿಕೆಯಲ್ಲಿ ಕಾರ್ಯದರ್ಶಿ ಲಿಜೋ ಜೋಸ್, ಕೋಶಾಧಿಕಾರಿ ಕುಶಾಲಪ್ಪ ಟಿ, ಪ್ರಾಂತೀಯ ಅಧ್ಯಕ್ಷ ಕೃಷ್ಣ ಪ್ರಶಾಂತ್,ವಲಯಾಧ್ಯಕ್ಷ ರುಗಳಾದ ಬಿಟ್ಟಿ ಬಿ ನೆಡುವಿಲಂ, ರೇಣುಕಾ ಸದಾನಂದ ಜಾಕೆ, ಆನಂದ ರೈ, ಜಿಲ್ಲಾ ಸಂಪುಟ ಖಜಾಂಜಿ ಹರೀಶ್ ಶೆಟ್ಟಿ, ಲಯನ್ಸ್ ಗಳಾದ ಡಾ. ಪ್ರಕಾಶ್ ಡಿಸೋಜಾ, ಸುದರ್ಶನ್ ಪಡಿಯಾರ್, ಶರಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಚಿಕಿತ್ಸಾ ಮತ್ತು ಶಿಕ್ಷಣ ಸಹಾಯಧನವನ್ನು ವಿತರಿಲಸಾಯಿತು. ಉತ್ತಮ ಸೇವೆಯನ್ನು ನೀಡುತ್ತಿರುವ ಗುತ್ತಿಗಾರು ಮೆಸ್ಕಾಂನ ವೆಂಕಟ್ರಮಣ ಮೊಟ್ನೂರು, ಸುಧಾಕರ ಪಂಜಿಪಳ್ಳ, ರವೀಂದ್ರ ಕುಚ್ಚಾಲ, ಪಾಲಾಕ್ಷ ಹೊಳೆನರಸೀಪುರ, ದಿನೇಶ್ ಪೂಜಾರಿ ಕೋಡಿ ಇವರುಗಳನ್ನು ಸನ್ಮಾನಿಸಲಾಯಿತು. ಮೋಹನ್ ಕೆ ಸ್ವಾಗತಿಸಿ, ಲಿಜೋ ಜೋಸ್ ವರದಿ ವಾಚಿಸಿದರು. ಕುಶಾಲಪ್ಪ ಟಿ ವಂದಿಸಿದರು.

ಬಸ್ ತಂಗುದಾಣ ಕೊಡುಗೆ: ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗುತ್ತಿಗಾರು ಗ್ರಾಮದ ಕಾಜಿಮಡ್ಕ ಎಂಬಲ್ಲಿ ಹೊಸ ಬಸ್ ತಂಗುದಾಣವನ್ನು ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಜಿಲ್ಲಾ ಗವರ್ನರ್ ರೋನಾಲ್ಡ್ ಗೋಮ್ಸ್ ನೂತನ ತಂಗುದಾಣವನ್ನು ಉದ್ಘಾಟಿಸಿದರು .

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರೀ ಮಳೆ ಹಿನ್ನೆಲೆ | ಜೂ. 27ರಂದು ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ |
June 26, 2024
7:19 PM
by: ದ ರೂರಲ್ ಮಿರರ್.ಕಾಂ
Karnataka Weather | 26-06-2024 | ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ | ಉಳಿದೆಡೆ ಸಾಮಾನ್ಯ ಮಳೆ |
June 26, 2024
3:05 PM
by: ಸಾಯಿಶೇಖರ್ ಕರಿಕಳ
ಪರೀಕ್ಷಾ ಅಕ್ರಮಗಳು.. | ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ…
June 26, 2024
2:15 PM
by: ವಿವೇಕಾನಂದ ಎಚ್‌ ಕೆ
ರೈತರಿಗೋಸ್ಕರ ಹಾಲಿನ ದರ ಪರಿಷ್ಕರಣೆ | ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ | ಡಿಸಿಎಂ ಡಿಕೆ ಶಿವಕುಮಾರ್
June 26, 2024
1:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror