ಮಂಗಳೂರು: ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಕೂಡ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಾರ್ಯರ್ವಹಿಸಲಾಗುತ್ತಿದೆ. ಈ ಸಂಬಂಧ ಅಪರ ಜಿಲ್ಲಾದಿಕಾರಿ ರೂಪ ಎಂ.ಜೆ. ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
Advertisement
ಇ-ಕಚೇರಿ ತಂತ್ರಾಂಶದ ಬಳಕೆಯಿಂದ ಸಾರ್ವಜನಿಕರು ತಮಗೆ ಸಂಬಂಧಿಸಿದ ಅರ್ಜಿ ಅಥವಾ ಕಡತದ ಚಲನವಲನ ಹಾಗೂ ಸ್ಥಿತಿಗತಿಯನ್ನು ಅಂರ್ತಜಾಲದ ಮುಲಕ ಪರಿಶೀಲಿಸಿಕೊಳ್ಳಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಸಾರ್ವಜನಿಕರು ತಾವು ಸಲ್ಲಿಸಿದ ಅರ್ಜಿಯ ಚಲನವಲನ ಹಾಗೂ ಸ್ಥಿತಿಗತಿಯನ್ನು http:// eofficedcmo. karnataka. gov.in/ mysdivdcCJ?language=ku ಲಿಂಕ್ ನ್ನು ಬಳಸಿ ತಮ್ಮ ಅರ್ಜಿ ಪ್ರಸ್ತುತ ಹಂತಗಳನ್ನು ನೋಡಿ ಪರಿಶೀಲಿಸಿಕೊಳ್ಳಬಹುದು ಎಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement