ಡಿಕೆಶಿ ಅಧ್ಯಕ್ಷತೆ: ಸುಳ್ಯ ಕಾಂಗ್ರೆಸ್ ಗೆ ಆಗಬಹುದೇ ಟಾನಿಕ್..!?

June 28, 2020
3:13 PM

ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಬೆಳೆಯಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಿಂದಲೇ ಸಿದ್ಧತೆ ನಡೆಯುತ್ತಿದೆ. ಸುಳ್ಯದಲ್ಲೂ ಈ ಸಂಘಟನೆ ಆರಂಭವಾಗಿದೆ.  ಇದೀಗ ಡಿ ಕೆ  ಶಿವಕುಮಾರ್ ಅವರ ನೇತೃತ್ವದ  ಸಂಘಟನೆ  ಸುಳ್ಯಕ್ಕೂ ತಲುಪಿದ್ದು, ಇಲ್ಲಿಯೂ ಸಿದ್ಧತೆ ನಡೆಯುತ್ತಿದೆ….  ಈ ಬಗ್ಗೆ ವಿಶೇಷ ವರದಿ…

Advertisement
Advertisement

ಸುಳ್ಯ:  ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಜಲೈ ಎರಡರಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಲಿದ್ದಾರೆ. ಅದಕ್ಕಾಗಿನ ಸಿದ್ಧತೆ ಅತ್ತ ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಮೂಲೆ ಮೂಲೆಯಲ್ಲಿಯೂ ನಡೆಯುತಿದೆ.

ಡಿಕೆಶಿ ಅವರು ಅಧ್ಯಕ್ಷರಾಗಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ ಜೊತೆಗೆ ಸುಳ್ಯದಲ್ಲಿಯೂ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಸಂಘಟನಾತ್ಮಕ ಹಿನ್ನಡೆ, ಸತತ ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಸುಳ್ಯ ಕಾಂಗ್ರೆಸ್ ಗೆ ಡಿಕೆಶಿ ಅಧ್ಯಕ್ಷತೆ ಮತ್ತು ವ್ಯಕ್ತಿ ಪ್ರಭಾವ  ಪಕ್ಷದ ಸಂಘಟನೆಗೆ ಸಹಾಯಕವಾಗುವ  ನಿರೀಕ್ಷೆ ಇದೆ. ಕಾಂಗ್ರೆಸ್ ಮುಖಂಡರೇ  ಈ ರೀತಿಯ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಡಿಕೆಶಿಯ ನಾಯಕತ್ವ ಪ್ರಭಾವ, ಸಾಮುದಾಯಿಕ ಹಿನ್ನಲೆ ಸಂಘಟನಾತ್ಮಕವಾಗಿ ಪಾತಾಳಕ್ಕೆ ಕುಸಿದಿರುವ ಪಕ್ಷದ ಚೇತರಿಕೆಗೆ ಟಾನಿಕ್ ಆಗಬಹುದು ಎಂಬ ನಿರೀಕ್ಷೆ  ಮುಖಂಡರದ್ದು. ಮುಂದಿನ ಚುನಾವಣೆಯಲ್ಲಿ ಒಂದಷ್ಟು ಸಮುದಾಯದ ಮತಗಳು, ಸ್ವಲ್ಪ ಪ್ರಮಾಣದ ಯುವ ಮತದಾರರನ್ನು ಸೆಳೆಯಲು ಪೂರಕ ಆಗಬಹುದು. ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಇದು ಸಹಾಯಕವಾಗಬಹುದು ಎಂಬ ಲೆಕ್ಕಾಚಾರ ನೇತೃತ್ವಕ್ಕಿದೆ. ಆದುದರಿಂದಲೇ ಸುಳ್ಯದ ಕಾಂಗ್ರೆಸ್ ಇದೀಗ ಮೈ ಕೊಡವಿ ಎದ್ದಿದೆ. ನಾಯಕರು, ಕಾರ್ಯಕರ್ತರು ತಿಂಗಳಿಂದ ಚಳಿ ಬಿಟ್ಟು ಓಡಾಟ ಶುರು ಮಾಡಿದ್ದಾರೆ. ಕೊರೋನಾ ಭಯದ ವಾತಾವರಣದ ಮಧ್ಯೆಯೂ ಡಿಕೆಶಿ ಪದಗ್ರಹಣದ ಯಶಸ್ವಿಗೆ ನಿರಂತರ ಕಾರ್ಯಪ್ರವೃತ್ತವಾಗಿದ್ದಾರೆ. ವರುಷಗಳಿಂದ ತಟಸ್ಥವಾಗಿದ್ದ ಸಂಘಟನಾ ಚಟುವಟಿಕೆಗೆ ಒಂದೂವರೆ ತಿಂಗಳಿನಿಂದ ವೇಗ ಸಿಕ್ಕಿದೆ. ನಾಯಕರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿದಂತೆ ಓಡಾಡುತ್ತಿದ್ದಾರೆ. ಮುಂದೆ ಬರುವ ಗ್ರಾಮ ಪಂಚಾಯತಿ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಪದಗ್ರಹಣ ಸಮಾರಂಭ ಒಂದು ತಾಲೀಮು ಎಂದೇ ಪರಿಗಣಿಸಲಾಗಿದೆ.

ಈ ಹಿಂದೆ ನಡೆದ  ಪ್ರಮುಖ ಚುನಾವಣೆಗಳಲ್ಲಿ ಸ್ಟಾರ್ ಕ್ಯಾಂಪನೈನರ್ ಆಗಿದ್ದ ಡಿಕೆಶಿ ಸುಳ್ಯಕ್ಕೂ ಬಂದು ರೋಡ್ ಶೋ, ಪ್ರಚಾರ ಸಭೆ ನಡೆಸಿ ಸಂಚಲನ ಮೂಡಿಸಿದ್ದರು. ಈಗ ಅವರೇ ಕೆಪಿಸಿಸಿ ಸಾರಥಿ ಆಗಿರುವ ಕಾರಣ ಇನ್ನಷ್ಟು ಪರಿಣಾಮ ಬೀರಬಹುದು ಎನ್ನುತ್ತಾರೆ ಸುಳ್ಯದ ಕಾಂಗ್ರೆಸ್ ನಾಯಕರು. ಹೊಸ ನಾಯಕತ್ವದ ಅಡಿಯಲ್ಲಿ ಈಗಾಗಲೇ ಕಾಂಗ್ರೆಸ್ ಸಂಘಟನಾ ಚಟುವಟಿಕೆ ಬಿರುಸಾಗಿ ಸಾಗಿದೆ‌. ಸುಳ್ಯ ಸೇರಿದಂತೆ ಪ್ರತಿ ಬ್ಲಾಕ್ ಗಳಿಗೆ ಕೆಪಿಸಿಸಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದು ಅವರ ನೇತೃದಲ್ಲಿ ಸಂಘಟನಾ ಚಟುವಟಿಕೆಗೆ ಸಕ್ರೀಯವಾಗಿದೆ. ಮಾತ್ರವಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಪ್ರತಿ ಕ್ಷೇತ್ರದ ಚಟುವಟಿಕೆಗಳನ್ನು ಕೆಪಿಸಿಸಿ ಕಚೇರಿಯಿಂದಲೇ ಟ್ರ್ಯಾಕ್ ಮಾಡಲಾಗುತಿದೆ. ಈ ರೀತಿಯ ವ್ಯವಸ್ಥಿತ ಪಕ್ಷ ಸಂಘಟನೆ ಕಾಂಗ್ರೆಸ್ ಗೆ ದೊಡ್ಡ ಗೆಲುವು ತಂದು ಕೊಡುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
29 ಕಡೆಯಲ್ಲಿ ಪ್ರಮಾಣ ವಚನ:  ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಕಾರ್ಯಕರ್ತರು ಕೂಡ ಪ್ರಮಾಣ ವಚನ ಸ್ವೀಕರಿಸುವರು. ಎಲ್ಲಾ ಕಡೆಗಳಲ್ಲಿ ಕಾರ್ಯಕರ್ತರು ಸೇರಿ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸಿ ಅದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸುವರು. ಗ್ರಾಮ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮವನ್ನು ಝೂಮ್ ಆಫ್ ಮೂಲಕ ಕೆಪಿಸಿಸಿ ಕಚೇರಿಯಲ್ಲಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ 28 ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಸುಳ್ಯ ನಗರದಲ್ಲಿ ಸೇರಿ ಒಟ್ಟು 29 ಕಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಬಗ್ಗೆ ಮಾಹಿತಿ, ಪ್ರಾಯೋಗಿಕ ತರಬೇತಿ ನೀಡಲಾಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದಿಶಾಂತ್‌ ಕೆ ಎಸ್
July 23, 2025
7:46 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಮ್ಯ ಡಿ
July 23, 2025
7:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group