ಧರ್ಮಸ್ಥಳ : ಸರಕಾರ ದೇವರು ಕೊಟ್ಟದ್ದು. ದೇವರು ಕೊಟ್ಟದನ್ನುದೇವರೇ ಉಳಿಸಿ ಕೊಡುತ್ತಾರೆ.ಎಲ್ಲವೂ ದೇವರಿಗೆ ಬಿಟ್ಟದ್ದು ಹೀಗೆಂದು ಹೇಳಿದ್ದು ಸಚಿವ ಎಚ್.ಡಿ.ರೇವಣ್ಣ.
ಅವರು ಭಾನುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಕೊಂಚ ಕಾಲ ವಿಶ್ರಾಂತಿ ಪಡೆದ ಬಳಿಕ ದೇವರದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.
ಈ ಸಂದರ್ಭ ಸುದ್ದಿಗಾರರು ಸರಕಾರದ ಬಗ್ಗೆ ಪ್ರಸ್ತಾಪಿಸಿದಾಗ ದೇವರು ಕೊಟ್ಟದನ್ನುದೇವರೇ ಉಳಿಸಿ ಕೊಡುತ್ತಾರೆ.ಎಲ್ಲವೂದೇವರಿಗೆ ಬಿಟ್ಟದ್ದು ಎಂದು ಹೇಳಿದರು.
ಧರ್ಮಸ್ಥಳ ಭೇಟಿ ಬಳಿಕ ಬಯಲು ಆಲಯವೇಂದೇ ಪರಿಚಿತವಾದ ಸೌತಡ್ಕದಲ್ಲಿ ಶ್ರೀ ಗಣಪತಿ ದೇವರ ದರ್ಶನ ಮಾಡಿ ಬೆಂಗಳೂರಿಗೆ ಪ್ರಯಾಣಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel