ಸುಳ್ಯ:ಸಮಚಿತ್ತದಿಂದ ಮಾನಸಿಕ ದೃಢತೆಯನ್ನು ಸಾಧಿಸಬೇಕು ಮತ್ತು ಆ ಮೂಲಕವಾಗಿ ಏಕಾಗ್ರತೆ, ಸಂಯಮವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಧ್ಯಾನ ನಡೆಸುವುದು ಅತ್ಯಂತ ಸೂಕ್ತ ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಹೇಳಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನಡೆದ 3 ದಿನಗಳ ಕಾಲ ಏರ್ಪಡಿಸಲಾದ ಧ್ಯಾನ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು. ನಳಿನಿ ಅವರು ಧ್ಯಾನದ ಅಗತ್ಯತೆ ಮತ್ತು ಅದನ್ನು ನಡೆಸುವ ಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶಿಬಿರ ನಡೆಯಿತು. ಉಪನ್ಯಾಸಕ ಕಿಶೋರ್ ಅವರು ಸ್ವಾಗತಿಸಿ ವಂದಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel